Astro Tips: ಕರಿಮೆಣಸಿನಿಂದ ಈ ಸಣ್ಣ ಕೆಲಸ ಮಾಡಿದ್ರೆ ಸಾಕು ಹಠಾತ್ ಹಣದ ಮಳೆಯಾಗುತ್ತದೆ..!

ನೀವು ಸಹ ಅಪಾರ ಸಂಪತ್ತು & ಹಣ ಪಡೆಯುವ ಬಯಕೆ ಹೊಂದಿದ್ದರೆ, ನಿಮ್ಮ ಆಸೆ ಪೂರೈಸಲು ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Nov 12, 2022, 02:24 PM IST
  • ಶನಿವಾರದಂದು ಅರಳಿ ಮರದಿಂದ ಎಲೆಯನ್ನು ಕಿತ್ತು ಗಂಗಾಜಲದಿಂದ ತೊಳೆಯಿರಿ
  • ಕರಿಮೆಣಸಿನ 5 ಕಾಳುಗಳನ್ನು ತೆಗೆದುಕೊಂಡು ನಿಮ್ಮ ತಲೆಗೆ 7 ಬಾರಿ ಮುಟ್ಟಿಸಿಕೊಳ್ಳಿ
  • ಸೋಮವಾರ ಮಹಾದೇವನ ದೇವಸ್ಥಾನಕ್ಕೆ ಹೋಗಿ ಹಾಲಿನಲ್ಲಿ ಜೇನುತುಪ್ಪ ಬೆರೆಸಿ ಅರ್ಪಿಸಬೇಕು
Astro Tips: ಕರಿಮೆಣಸಿನಿಂದ ಈ ಸಣ್ಣ ಕೆಲಸ ಮಾಡಿದ್ರೆ ಸಾಕು ಹಠಾತ್ ಹಣದ ಮಳೆಯಾಗುತ್ತದೆ..!   title=
ಸಂಪತ್ತಿಗೆ ಕರಿಮೆಣಸಿನ ಪರಿಹಾರ

ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ-ಸಮೃದ್ಧಿಯ ಜೊತೆಗೆ ಸುಖ-ಸಂಪತ್ತಿಗೆ ಕೊರತೆಯಾಗಬಾರದೆಂದು ಬಯಸುತ್ತಾನೆ. ಇದಕ್ಕಾಗಿ ಅನೇಕರು ಹಗಲಿರುಳು ಶ್ರಮಿಸುತ್ತಾರೆ. ಆದರೆ ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗೆ ಅದೃಷ್ಟದ ಬೆಂಬಲ ಸಿಗುವುದಿಲ್ಲ.  ಆತ ತನ್ನ ಶ್ರಮದ ಫಲವನ್ನು ಪಡೆಯುವುದಿಲ್ಲ. ಜ್ಯೋತಿಷ್ಯದಲ್ಲಿ ಈ ನಿರಾಶೆ ಹೋಗಲಾಡಿಸಲು ಹಲವಾರು ರೀತಿಯ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪೈಕಿ ಕರಿಮೆಣಸಿನ ಕಾಳುಗಳಿಂದ ಮಾಡುವ ಪರಿಹಾರವೂ ಒಂದಾಗಿದೆ.

ತಂತ್ರ ಶಾಸ್ತ್ರದ ಅಡಿಯಲ್ಲಿ ಇಂತಹ ಅನೇಕ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಮಾಡುವುದರಿಂದ ವ್ಯಕ್ತಿಯ ಸಂಪತ್ತಿನ ಬಯಕೆಯು ಪೂರ್ಣಗೊಳ್ಳುತ್ತದೆ. ಈ ಕ್ರಮಗಳನ್ನು ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಹಣದ ಮಳೆಯಾಗಲು ಪ್ರಾರಂಭಿಸುತ್ತದೆ. ಬಳಿಕ ಆತನ ಜೀವನದಲ್ಲಿ ಹಣದ ಕೊರತೆಯೇ ಕಂಡುಬರುವುದಿಲ್ಲ. ಕರಿಮೆಣಸಿನ ಕೆಲವು ಜ್ಯೋತಿಷ್ಯ ಪರಿಹಾರಗಳ ಬಗ್ಗೆ ತಿಳಿದುಕೊಳ್ಳಿರಿ.

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಆಕಸ್ಮಿಕ ಧನಪ್ರಾಪ್ತಿ, ಜ್ಞಾನಪ್ರಾಪ್ತಿ ಯೋಗವಿದೆ

ಸಂಪತ್ತಿಗೆ ಕರಿಮೆಣಸಿನ ಈ ಪರಿಹಾರ ಮಾಡಿ

  •  ಶನಿವಾರದಂದು ಅರಳಿ ಮರದಿಂದ ಎಲೆಯನ್ನು ಕಿತ್ತು ಗಂಗಾಜಲದಿಂದ ತೊಳೆಯಿರಿ. ಇದರ ನಂತರ ನಿಮ್ಮ ಕೈಯ ಉಂಗುರದ ಬೆರಳಿನಿಂದ ಅರಿಶಿನ ಮತ್ತು ಮೊಸರಿನ ದ್ರಾವಣದಿಂದ ಈ ಎಲೆಯ ಮೇಲೆ ಮಂತ್ರವನ್ನು ಬರೆಯಿರಿ. ಬಳಿಕ ಈ ಎಲೆಯನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಪ್ರತಿ ಶನಿವಾರ ಪೂಜೆಯೊಂದಿಗೆ ಈ ಎಲೆಯನ್ನು ಬದಲಾಯಿಸುತ್ತಿರಿ. ಈ ಪರಿಹಾರವು ನಿಮ್ಮ ಜೀವನದಿಂದ ಹಣದ ಕೊರತೆಯನ್ನು ತೆಗೆದುಹಾಕುತ್ತದೆ. ಈ ಪರಿಹಾರ  ಮಾಡುವುದರಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ ಮತ್ತು ಪರ್ಸ್‌ನಲ್ಲಿ ಯಾವಾಗಲೂ ಹಣ ಇರುತ್ತದೆ. ದಯವಿಟ್ಟು ಹಳೆಯ ಎಲೆಯನ್ನು ಪವಿತ್ರ ಸ್ಥಳದಲ್ಲಿ ಮಾತ್ರ ಇರಿಸಬೇಕು.
  •  ಕರಿಮೆಣಸಿನ 5 ಧಾನ್ಯಗಳನ್ನು ತೆಗೆದುಕೊಂಡು ನಿಮ್ಮ ತಲೆಗೆ 7 ಬಾರಿ ಮುಟ್ಟಿಸಿಕೊಳ್ಳಿ. ಈಗ ಪ್ರತಿ ಧಾನ್ಯವನ್ನು ಎಲ್ಲಾ 4 ದಿಕ್ಕುಗಳಲ್ಲಿ ಎಸೆಯಿರಿ. ಆಕಾಶದತ್ತ ಒಂದು ಧಾನ್ಯವನ್ನು ಮೇಲಕ್ಕೆ ಎಸೆಯಿರಿ. ಈ ಟ್ರಿಕ್ ಮಾಡುವುದರಿಂದ ಜೀವನದಲ್ಲಿ ನೀವು ಹಠಾತ್ ಹಣಕಾಸಿನ ಲಾಭವನ್ನು ಪಡೆಯುತ್ತೀರಿ.
  •  ನೀವು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯಬಯಸಿದ್ರೆ ಸೋಮವಾರದಂದು ಸ್ಮಶಾನದಲ್ಲಿರುವ ಮಹಾದೇವನ ದೇವಸ್ಥಾನಕ್ಕೆ ಹೋಗಿ ಹಾಲಿನಲ್ಲಿ ಜೇನುತುಪ್ಪವನ್ನು ಬೆರೆಸಿ ದೇವರಿಗೆ ಅರ್ಪಿಸಿ.
  •  ನಿಮ್ಮ ಮನೆಯಲ್ಲಿ ಹಣ ನಿಲ್ಲದಿದ್ದರೆ ಕೆಂಪು ಬಣ್ಣದ ಬಟ್ಟೆಯನ್ನು ತಿಜೋರಿಯಲ್ಲಿ ಇಡಬೇಕು.   
  •  ಗುಂಜ ಕಾಳುಗಳನ್ನು ಕಪಾಟಿನಲ್ಲಿ ಇಡುವುದರಿಂದ ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ.
  •  ಶ್ರೀ ಸೂಕ್ತವನ್ನು ನಿಯಮಿತವಾಗಿ ಪಠಿಸುವ ಮನೆಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.

ಇದನ್ನೂ ಓದಿ: ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ: ಈ ರಾಶಿಯವರ ಅದೃಷ್ಟ ಬೆಳಗಲಿದ್ದು, ಸುಖ-ಸಂಪತ್ತು ದೊರೆಯಲಿದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News