Chanakya Niti : ಜೀವನದಲ್ಲಿ ಯಾವಾಗಲೂ ಯಶಸ್ಸು ಸಿಗಲು ಅನುಸರಿಸಿ ಚಾಣಕ್ಯನ ಈ ನೀತಿಗಳನ್ನು!

Chanakya Niti About Life : ಆಚಾರ್ಯ ಚಾಣಕ್ಯ ಭಾರತದ ಪ್ರಸಿದ್ಧ ರಾಜತಾಂತ್ರಿಕ ಮತ್ತು ತಂತ್ರಜ್ಞ. ಅವರು ಮಾನವ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅವರ ಮಾತುಗಳನ್ನು ಚಾಣಕ್ಯ ನೀತಿ ಶಾಸ್ತ್ರದಲ್ಲಿ ದಾಖಲಿಸಲಾಗಿದೆ.

Written by - Channabasava A Kashinakunti | Last Updated : Dec 24, 2022, 07:04 PM IST
  • ಆಚಾರ್ಯ ಚಾಣಕ್ಯ ಭಾರತದ ಪ್ರಸಿದ್ಧ ರಾಜತಾಂತ್ರಿಕ ಮತ್ತು ತಂತ್ರಜ್ಞ
  • ಚಾಣಕ್ಯನ ನೀತಿಗಳನ್ನು ಅನುಸರಿಸಿ ಜೀವನದಲ್ಲಿ ಯಶಸ್ಸು ಪಡೆಯಿರಿ
  • ಪ್ರತಿಯೊಬ್ಬರೂ ಜೀವನದಲ್ಲಿ ಕೆಟ್ಟ ಸಮಯ ಬಂದಾಗ ಕೈ ಚಲ್ಲಿ ಕೂರುತ್ತಾರೆ
Chanakya Niti : ಜೀವನದಲ್ಲಿ ಯಾವಾಗಲೂ ಯಶಸ್ಸು ಸಿಗಲು ಅನುಸರಿಸಿ ಚಾಣಕ್ಯನ ಈ ನೀತಿಗಳನ್ನು! title=

Chanakya Niti About Life : ಆಚಾರ್ಯ ಚಾಣಕ್ಯ ಭಾರತದ ಪ್ರಸಿದ್ಧ ರಾಜತಾಂತ್ರಿಕ ಮತ್ತು ತಂತ್ರಜ್ಞ. ಅವರು ಮಾನವ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅವರ ಮಾತುಗಳನ್ನು ಚಾಣಕ್ಯ ನೀತಿ ಶಾಸ್ತ್ರದಲ್ಲಿ ದಾಖಲಿಸಲಾಗಿದೆ. ಚಾಣಕ್ಯನ ನೀತಿಗಳನ್ನು ಅನುಸರಿಸಿ ಅನೇಕ ಜನ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಚಾಣಕ್ಯ ನೀತಿ ಪ್ರಕಾರ, ಇಂದು ನಾವು ಮಾನವ ಜೀವನದ ಕೆಲವು ಅಭ್ಯಾಸಗಳ ಬಗ್ಗೆ ಮಾಹಿತಿ ತಂದಿದ್ದೇವೆ, ಅದನ್ನು ಸರಿಯಾಗಿ ಅನುಸರಿಸಿದರೆ, ನೀವು ಯಾವತ್ತೂ ಕೆಟ್ಟ ಸಮಯವನ್ನು ಅನುಸರಿಸುವುದಿಲ್ಲ.

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಅಂತಹ ಕೆಲವು ನೀತಿಗಳನ್ನು ಉಲ್ಲೇಖಿಸಿದ್ದಾರೆ, ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಯಶಸ್ಸನ್ನು ಸಾಧಿಸಬಹುದು. ಈ ನೀತಿಗಳನ್ನು ಅನುಸರಿಸುವ ಮೂಲಕ, ಒಬ್ಬ ವ್ಯಕ್ತಿಯು ಯಾವಾಗಲೂ ಯಶಸ್ಸಿನ ಏಣಿಯನ್ನು ಏರಲು ಪ್ರಾರಂಭಿಸುತ್ತೀರಿ.

ಇದನ್ನೂ ಓದಿ : Garuda Purana : ಮನುಷ್ಯ ಸಾಯುವ ಮೊದಲು ಅವನ ದೇಹದಲ್ಲಿ ಕಂಡು ಬರುತ್ತವೆ ಈ 5 ಸಂಕೇತಗಳು!

ಪ್ರತಿಯೊಬ್ಬರೂ ಜೀವನದಲ್ಲಿ ಕೆಟ್ಟ ಸಮಯ ಬಂದಾಗ ಕೈ ಚಲ್ಲಿ ಕೂರುತ್ತಾರೆ. ಜಗತ್ತಿನಲ್ಲಿ ಯಾವ ವ್ಯಕ್ತಿಯೂ ತನಗೆ ಕೆಟ್ಟ ಸಮಯ ಬರುವುದನ್ನು ಇಷ್ಟಪಡುವುದಿಲ್ಲ. ಇದಕ್ಕಾಗಿ ಆಚಾರ್ಯ ಚಾಣಕ್ಯರ ನೀತಿಗಳು ಪರಿಣಾಮಕಾರಿಯಾಗಿವೆ. ಚಾಣಕ್ಯನ ಪ್ರಕಾರ, ನೀವು ಕೆಲ ಅಭ್ಯಾಸಗಳಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿದರೆ, ನೀವು ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೆ ಹೋಗುತ್ತೀರಿ.

ಚಾಣಕ್ಯ ನೀತಿಯ ಪ್ರಕಾರ, ನೀವು ತಾಳ್ಮೆಯನ್ನು ಹೊಂದಿರುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಯಾವುದೇ ಸವಾಲು ಮತ್ತು ಪರಿಸ್ಥಿತಿ ಬಂದರೂ ಅದನ್ನು ತಾಳ್ಮೆಯಿಂದ ಎದುರಿಸಿದರೆ ಸುಲಭವಾಗಿ ಜಯಿಸಬಹುದು.

ನೀವು ಕೆಲ ಸಮಯದಲ್ಲಿ ಭಯಭೀತರಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಂತರ ತನ್ನ ಉಳಿದ ಜೀವನಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಜೀವನದಲ್ಲಿ ಸುಖ ದುಃಖಗಳು ಬರುತ್ತಲೇ ಇರುತ್ತವೆ. ಹೀಗಾಗಿ, ಯಾವಾಗಲೂ ನೀವು ನಿಮ್ಮ ಭಯವನ್ನು ನಿಯಂತ್ರಿಸಬೇಕು. ಆತಂಕವಿಲ್ಲದೆ ಪರಿಸ್ಥಿತಿಯನ್ನು ಎದುರಿಸಬೇಕು.

ಯಾವುದೇ ಕೆಲಸವನ್ನು ಮಾಡುವ ಮೊದಲು ಪ್ಲಾನ್ ಮಾಡಿದರೆ, ನೀವು ಯಾವತ್ತೂ ವಿಫಲವಾಗುವುದಿಲ್ಲ. ಹೀಗಾಗಿ, ಭವಿಷ್ಯದ ಯೋಜನೆಗಳನ್ನು ಜೀವನದ ಪ್ರತಿ ಹಂತದಲ್ಲೂ ಮಾಡಬೇಕು. ಇದರೊಂದಿಗೆ, ಒಬ್ಬ ವ್ಯಕ್ತಿಯು ಎಲ್ಲಾ ಸವಾಲನ್ನು ಸುಲಭವಾಗಿ ಎದುರಿಸಬಹುದು.

ಇದನ್ನೂ ಓದಿ : Relationship tips : ನಿಮ್ಮ ಸಂಗಾತಿಯಿಂದ ʼಇದನ್ನುʼ ಯಾವತ್ತೂ ನಿರೀಕ್ಷಿಸಬೇಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News