ಈ ಕನಸುಗಳ ಬಗ್ಗೆ ಬೇರೆಯವರೊಂದಿಗೆ ಚರ್ಚೆ ಮಾಡಿದರೆ ಶುಭ ಫಲ ಸಿಗುವುದಿಲ್ಲ

 ಶುಭ ಸ್ವಪ್ನಗಳ ಬಗ್ಗೆ ಯಾರಿಗೂ ಹೇಳಬಾರದು ಎಂದು ಹೇಳಲಾಗುತ್ತದೆ. ಇಲ್ಲವಾದರೆ ಕನಸಿನ ಶುಭ ಫಲಗಳು ಕಡಿಮೆಯಾಗುತ್ತವೆ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.  ಆದರೆ ನಮಗೆ ಬೀಳುವ ಕೆಟ್ಟ ಕನಸುಗಳ ಬಗ್ಗೆ ಇತರರೊಂದಿಗೆ ಚರ್ಚೆ ಮಾಡಬೇಕು. ಇದರಿಂದ ಋಣಾತ್ಮಕ ಪರಿಣಾಮ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.  

Written by - Ranjitha R K | Last Updated : Aug 30, 2022, 10:57 AM IST
  • ಮಲಗಿರುವಾಗ ಕನಸು ಕಾಣುವುದು ಸಾಮಾನ್ಯ ಪ್ರಕ್ರಿಯೆ.
  • ಈ ಕನಸುಗಳು ಶುಭ ಮತ್ತು ಅಶುಭ ಎರಡೂ ಸಂಕೇತಗಳನ್ನು ನೀಡುತ್ತವೆ.
  • ಸಪ್ನ ಶಾಸ್ತ್ರದಲ್ಲಿ, ಈ ಕನಸುಗಳ ಚಿಹ್ನೆಗಳು ಮತ್ತು ಫಲಗಳ ಬಗ್ಗೆ ಹೇಳಲಾಗಿದೆ.
ಈ ಕನಸುಗಳ ಬಗ್ಗೆ ಬೇರೆಯವರೊಂದಿಗೆ ಚರ್ಚೆ ಮಾಡಿದರೆ ಶುಭ ಫಲ ಸಿಗುವುದಿಲ್ಲ  title=
dream Interpretation (file photo)

ಬೆಂಗಳೂರು : ಮಲಗಿರುವಾಗ ಕನಸು ಕಾಣುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಈ ಕನಸುಗಳು ಶುಭ ಮತ್ತು ಅಶುಭ ಎರಡೂ ಸಂಕೇತಗಳನ್ನು ನೀಡುತ್ತವೆ. ಸಪ್ನ ಶಾಸ್ತ್ರದಲ್ಲಿ, ಈ ಕನಸುಗಳ ಚಿಹ್ನೆಗಳು ಮತ್ತು ಫಲಗಳ ಬಗ್ಗೆ ಹೇಳಲಾಗಿದೆ. ಇದರೊಂದಿಗೆ ಯಾವ ಸಮಯದಲ್ಲಿ ಕಂಡ ಕನಸುಗಳು ನನಸಾಗುತ್ತವೆ ಅಥವಾ ಬೇಗ ಫಲ ನೀಡುತ್ತವೆ ಎಂಬುದನ್ನೂ ಹೇಳಲಾಗಿದೆ. ಇನ್ನು ಶುಭ ಸ್ವಪ್ನಗಳ ಬಗ್ಗೆ ಯಾರಿಗೂ ಹೇಳಬಾರದು ಎಂದು ಹೇಳಲಾಗುತ್ತದೆ. ಇಲ್ಲವಾದರೆ ಕನಸಿನ ಶುಭ ಫಲಗಳು ಕಡಿಮೆಯಾಗುತ್ತವೆ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ.  ಆದರೆ ನಮಗೆ ಬೀಳುವ ಕೆಟ್ಟ ಕನಸುಗಳ ಬಗ್ಗೆ ಇತರರೊಂದಿಗೆ ಚರ್ಚೆ ಮಾಡಬೇಕು. ಇದರಿಂದ ಋಣಾತ್ಮಕ ಪರಿಣಾಮ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.  

ಅಪಾರ ಸಂಪತ್ತು, ಸಂತೋಷವನ್ನು ನೀಡುವ ಶುಭ ಕನಸುಗಳು   : 
ಕನಸಿನಲ್ಲಿ ಬೆಳ್ಳಿ ತುಂಬಿದ ಕಲಶವನ್ನು ನೋಡುವುದು:  ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಬೆಳ್ಳಿಯ ಆಭರಣಗಳು ಅಥವಾ ನಾಣ್ಯಗಳಿಂದ ತುಂಬಿದ ಕಲಶವನ್ನು ನೋಡುವುದು ತುಂಬಾ ಮಂಗಳಕರವಾಗಿದೆ. ಅಂತಹ ಕನಸು ಬಂದರೆ, ಅದರ ಬಗ್ಗೆ ಯಾರಿಗೂ ಚರ್ಚಿಸಬಾರದು. ಈ ಕನಸು ಅದೃಷ್ಟವನ್ನು ಸೂಚಿಸುತ್ತದೆ. ಜೀವನದಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿವೆ ಮತ್ತು ಬಹಳಷ್ಟು ಸಂತೋಷ ಮತ್ತು ಸಮೃದ್ಧಿಯಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.  

ಇದನ್ನೂ ಓದಿ : ಗಣೇಶ ಚತುರ್ಥಿ ನಂತರ ಈ ರಾಶಿಯವರ ಮೇಲೆ ವಿಶೇಷ ಕೃಪೆ ಹರಿಸಲಿದ್ದಾಳೆ ಮಹಾ ಲಕ್ಷ್ಮೀ

ಕನಸಿನಲ್ಲಿ ಮೀನುಗಳನ್ನು ನೋಡುವುದು: ಕನಸಿನಲ್ಲಿ ಮೀನು ಈಜುವುದನ್ನು ನೋಡುವುದು ಅಥವಾ ಸ್ವತಃ ಮೀನು ಹಿಡಿಯುವುದನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಬಿದ್ದರೆ, ಇದ್ದಕ್ಕಿದ್ದಂತೆ ನೀವು ಬಹಳಷ್ಟು ಹಣವನ್ನು ಪಡೆಯಲಿದ್ದೀರಿ ಎನ್ನುವುದನ್ನು ಹೇಳುತ್ತದೆ. ಆದರೆ ಈ ಶುಭ ಕನಸಿನ ಬಗ್ಗೆ ಯಾರಿಗೂ ಹೇಳಬಾರದು.

ಕನಸಿನಲ್ಲಿ ಬಿಳಿ ಕಮಲ ಅಥವಾ ಬಿಳಿ ಹಾವು  ಕಂಡರೆ :  ನಾಗದೇವರು ಸಂಪತ್ತಿನ ರಕ್ಷಕ ಎಂದು ಹೇಳಲಾಗುತ್ತದೆ. ನಿಮ್ಮ ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ ಎಂದರ್ಥ. ಇದಲ್ಲದೆ, ಕಮಲದ ಹೂವು  ಲಕ್ಷ್ಮೀ ೇವಿಗೆ ತುಂಬಾ ಪ್ರಿಯವಾಗಿದೆ. ಕನಸಿನಲ್ಲಿ ಕಮಲವನ್ನು ಕಂಡರೆ   ಲಕ್ಷ್ಮೀಯ ಕೃಪೆ ನಿಮ್ಮ ಮೇಲಿರುತ್ತದೆ ಎಂದರ್ಥ. ಈ ಕನಸುಗಳ ಬಗ್ಗೆಯೂ ಯಾರಿಗೂ ಹೇಳಬಾರದು. 

ಇದನ್ನೂ ಓದಿ :  Pitru Paksha 2022: ಪಿತೃಪಕ್ಷದಲ್ಲಿ ಈ ಆಹಾರ ಸೇವನೆ ಅಶುಭ: ತಿಂದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ

ನಿಮ್ಮ ಕನಸಿನಲ್ಲಿ ಹೂವಿನ ಉದ್ಯಾನ ಕಂಡರೆ : ನಿಮ್ಮ ಕನಸಿನಲ್ಲಿ ಹೂವಿನ ಉದ್ಯಾನವನ್ನು ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷಗಳು ಎದುರಾಗಲಿವೆ ಎಂದರ್ಥ. ನೀವು ಒಳ್ಳೆಯ ಸುದ್ದಿಯನ್ನು ಪಡೆಯಲಿದ್ದೀರಿ ಎನ್ನುವುದನ್ನು ಈ ಕನಸುಗಳು ಹೇಳುತ್ತವೆ. 

 ( ಸೂಚನೆ :  ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News