Lakshmi Mantra For Money: ರಾತ್ರಿ ಮಲಗುವ ಮುನ್ನ ಈ 3 ಮಂತ್ರಗಳನ್ನು ಜಪಿಸಿ, ಮಾರನೆ ದಿನ ನಿಮ್ಮ ಭಾಗ್ಯವೇ ಬದಲಾತ್ತದೆ!

Lakshmi Mantra - ದೇವಿ ಲಕುಮಿಯನ್ನು ಪ್ರಸನ್ನಗೊಳಿಸಲು ಕೆಲ ಮಂತ್ರಗಳು ತುಂಬಾ ವಿಶೇಷವಾಗಿವೆ ಎಂದು ಹೇಳಲಾಗುತ್ತದೆ. ಈ ಮಂತ್ರಗಳ ಉಚ್ಚಾರಣೆಯಿಂದ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ.

Written by - Nitin Tabib | Last Updated : Jan 21, 2022, 08:31 PM IST
  • ಧನ ಕುಬೇರ ಪ್ರಸನ್ನನಾಗುತ್ತಾನೆ.
  • ದೇವಿ ಲಕ್ಷಿಯ ವಿಶೇಷ ಕೃಪೆ ಲಭಿಸುತ್ತದೆ.
  • ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ.
Lakshmi Mantra For Money: ರಾತ್ರಿ ಮಲಗುವ ಮುನ್ನ ಈ 3 ಮಂತ್ರಗಳನ್ನು ಜಪಿಸಿ, ಮಾರನೆ ದಿನ ನಿಮ್ಮ ಭಾಗ್ಯವೇ ಬದಲಾತ್ತದೆ! title=
Lakshmi Mantra For Money (File Photo)

ನವದೆಹಲಿ: Lakshmi Mantra For Wealth - ದೇವಾನುದೇವತೆಗಳನ್ನು ಮೆಚ್ಚಿಸಲು ಹಲವು ಮಂತ್ರಗಳನ್ನು ಗ್ರಂಥಗಳಲ್ಲಿ (Astrology) ಉಲ್ಲೇಖಿಸಲಾಗಿದೆ. ಹಣಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಕೆಲವು ಶಕ್ತಿಯುತ ಮಂತ್ರಗಳಿವೆ. ಈ ಮಂತ್ರಗಳನ್ನು ಬೆಳಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಜಪಿಸಿದರೆ ಅದರ ಪರಿಣಾಮವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹೀಗಿರುವಾಗ ಆ ಮಂತ್ರಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಕನಕಧಾರಾ ಸ್ತೋತ್ರ (Kanakadhara Stotra)
ಶಂಕರಾಚಾರ್ಯರು ಬಡವರ ಕಲ್ಯಾಣಕ್ಕಾಗಿ ಕನಕಧಾರಾ ಸ್ತೋತ್ರವನ್ನು ರಚಿಸಿದ್ದಾರೆ. ಬೆಳಗ್ಗೆ ಅಥವಾ ರಾತ್ರಿ ಮಲಗುವ ಮುನ್ನ ಈ ಸ್ತೋತ್ರವನ್ನು ಪಠಿಸಿದರೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಯೂ ನಿವಾರಣೆಯಾಗುತ್ತದೆ, ಕನಕಧಾರಾ ಸ್ತೋತ್ರದ ಕೆಲವು ಆಯ್ದ ಅಂಶಗಳು ಇಂತಿವೆ - "ಅಂಗಹರೆ ಪುಲಕಭೂಷಣ ಮಾಶ್ರಯಂತಿ ಭ್ರುಂಗಾಗನೈವ್ ಮುಕುಲಾಭರಣಂ ತಮಾಲಮ. ಅಂಗೀಕೃತಾಖಿಲ್ ವಿಭೂತಿ ರಪಾನಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಳದೆವತಾಯಃ. ಮುಗ್ಧ್ಯಾ ಮುಹೂರ್ವಿಧಡತಿ ವದನೌ ಮುರಾರೈಹಿ, ಪ್ರೆಮತ್ರಪಾಪ್ರಣಿಹಿತಾನಿ ಗತಾಗತಾನಿ. ಮಾಲಾ ಧ್ಯಷೋಮಧುಕರ ವಿಮಹೊತ್ಪಲೇ ಯಾ  ಸಾ ಮೈ ಶ್ರಿಯಂ ಶಿಶತು ಸಾಗರ ಸಂಭಾವಾಯಾಃ 

ಶ್ರೀಸೂಕ್ತ (Shri Sukta)
ಹಣದ ಸಮಸ್ಯೆಯನ್ನು ಹೋಗಲಾಡಿಸಲು, ದೇವಿ ಲಕ್ಷ್ಮಿಯ ಶ್ರೀ ಸೂಕ್ತವು ಸಹ ಪ್ರಯೋಜನಕಾರಿ ಸಾಬೀತಾಗುತ್ತದೆ. ಋಗ್ವೇದದಲ್ಲೂ ಶ್ರೀಸೂಕ್ತದ ಉಲ್ಲೇಖವಿದೆ. ಶ್ರೀಸೂಕ್ತದ ಕೆಲವು ಶ್ಲೋಕಗಳು ಹೀಗಿವೆ- ಓಂ ಹಿರಣ್ಯ-ವರ್ಣಂ ಹರಿಣಿ, ಸುವರ್ಣ-ರಜತ್-ಸ್ತ್ರಜಂ. ಜಾತ್ವೇದೋದಲ್ಲಿ ಬರುವ ಚಂದ್ರ ಹಿರಣ್ಯಮಯಿನ್ ಲಕ್ಷ್ಮಿ. ತಾಮ್ ಆವಾಹ ಜಾತ-ವೇದೋ, ಲಕ್ಷ್ಮೀಮನಪ್-ಗಾಮಿನೀಮ್ ॥ ಯಸ್ಯ ಹಿರಣ್ಯಂ ವಿನ್ದಯಂ, ಗಮಸ್ವಂ ಪುರುಷನಹಮ್ । ಅಶ್ವಪೂರ್ವಾನ್ ರಥ-ಮಧ್ಯಾನ್, ಹಸ್ತಿ-ನಾದ-ಪ್ರಮೋದಿನೀಮ್ । ಶ್ರೀಂ ದೇವಿ ಮುಪಾಹ್ವಯೇ, ಶ್ರೀರ್ಮಾ ದೇವಿ ಜುಷ್ಟಮ್.

ಇದನ್ನೂ ಓದಿ-Kundali Ashubh Yoga: ಜಾತಕದಲ್ಲಿನ ಈ ಯೋಗ ಜೀವನವನ್ನೇ ಹಾಳು ಮಾಡುತ್ತದೆ, ಇಲ್ಲಿವೆ ಪಾರಾಗುವ ಉಪಾಯ

ಕುಬೇರ ಮಂತ್ರ (Kuber Mantra)
ಕುಬೇರನನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಖಜಾಂಚಿ ಎಂದು ಪರಿಗಣಿಸಲಾಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಕುಬೇರನ ಮಂತ್ರಗಳನ್ನು ಜಪಿಸುವುದು ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಕುಬೇರನನ್ನು ಮೆಚ್ಚಿಸಲು, 'ಯಕ್ಷಯ ಕುಬೇರಾಯ ವೈಶ್ರವಣಯ ಧನ್ಯಧಿಪತ್ಯೇ. ಧನಧಾನ್ಯಸಮ್ರುದ್ಧಿಂ ದೇಯಿ ದಾಪಾಯಿ ಸ್ವಾಹ'. ನೀವು ಈ ಮಂತ್ರವನ್ನು ಸಹ ಪಠಿಸಬಹುದು.

ಇದನ್ನೂ ಓದಿ-ಮುಟ್ಟಿನ ಸಂದರ್ಭದಲ್ಲಿ ಗುರುವಾರದ ವೃತಾಚರಣೆ ಮಾಡಬೇಕೇ ಬೇಡವೇ ? ಈ ವಿಚಾರಗಳ ಬಗ್ಗೆ ಇರಲಿ ಗಮನ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ)

ಇದನ್ನೂ ಓದಿ-Lucky Daughters : ಈ 3 ರಾಶಿಯ ಹೆಣ್ಣುಮಕ್ಕಳು ತಮ್ಮ ತಂದೆಗೆ ತುಂಬಾ ಅದೃಷ್ಟವಂತರಂತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News