Makar Sankranti 2022: ಮಕರ ಸಂಕ್ರಾಂತಿಯಂದು ಈ ವಸ್ತುಗಳ ದಾನ ಮಾಡಲು ಮರೆಯಬೇಡಿ

Makar Sankranti Gift Ideas - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಮಕರ ರಾಶಿ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ರೂಪದಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಕೆಲವು ವಸ್ತುಗಳನ್ನು ದಾನ (Makar Sankranti Daan) ಮಾಡುವುದರಿಂದ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಇದರೊಂದಿಗೆ ಶನಿ ಮತ್ತು ರಾಹುವಿನ ತೊಂದರೆಗಳಿಂದಲೂ ಕೂಡ ಮುಕ್ತಿಯೂ ಸಿಗುತ್ತದೆ.

Written by - Nitin Tabib | Last Updated : Jan 9, 2022, 12:13 PM IST
  • ಮಕರ ಸಂಕ್ರಾಂತಿಯಂದು ದಾನ ಮಾಡುವುದು ಮಂಗಳಕರ
  • ಶನಿ ದೋಷದಿಂದ ಮುಕ್ತಿ
  • ರಾಹುವಿನ ಕಾಟದಿಂದ ಕೂಡ ಮುಕ್ತಿ
Makar Sankranti 2022: ಮಕರ ಸಂಕ್ರಾಂತಿಯಂದು ಈ ವಸ್ತುಗಳ ದಾನ ಮಾಡಲು ಮರೆಯಬೇಡಿ title=
Makar Sankranti 2022 (File Photo)

ನವದೆಹಲಿ: Makar Sankranti 2022 Date - ಪಂಚಾಂಗದ ಪ್ರಕಾರ, ಮಕರ ಸಂಕ್ರಾಂತಿಯನ್ನು ಪೌಷ ಶುಕ್ಲ ಪಕ್ಷ ದ್ವಾದಶಿ ದಿನದಂದು ಆಚರಿಸಲಾಗುತ್ತದೆ. ಈ ಬಾರಿಯ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ 14 ರಂದು ( Importance Of Makar Sankranti) ಆಚರಿಸಲಾಗುವುದು. ಈ ದಿನ ಸೂರ್ಯ ದೇವ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಮಧ್ಯಾಹ್ನ 2.29ಕ್ಕೆ ಸೂರ್ಯನ ಈ ಸಂಕ್ರಮಣ ನಡೆಯಲಿದೆ. ಮಕರ ಸಂಕ್ರಾಂತಿಯಂದು ದಾನ ಮತ್ತು ಸ್ನಾನಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ದಾನ ಮಾಡುವುದರಿಂದ ಅನೇಕ ಫಲಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ಮಕರ ಸಂಕ್ರಾಂತಿಯಂದು ಕೆಲ ವಸ್ತುಗಳ ದಾನ ಮಾಡುವುದು ಮಂಗಳಕರ ಎನ್ನಲಾಗಿದೆ.

ಇದನ್ನೂ ಓದಿ-ಹೆಂಡತಿ ಗಂಡನ ಎಡಭಾಗದಲ್ಲಿ ಏಕೆ ಕುಳಿತುಕೊಳ್ಳುತ್ತಾಳೆ?: ಕಾರಣವೇನೆಂದು ತಿಳಿಯಿರಿ

ಖಿಚಡಿ - ಮಕರ ಸಂಕ್ರಾಂತಿಯಂದು ಖಿಚಡಿ ದಾನ ಮಾಡುವುದು ಮಂಗಳಕರ. ಇದಲ್ಲದೇ ಈ ದಿನ ಖಿಚಡಿ ತಿನ್ನುವುದು ಕೂಡ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಬೆಲ್ಲ - ಈ ದಿನ ಬೆಲ್ಲವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ದಾನ ಮಾಡುವುದರಿಂದ ಸೂರ್ಯ ದೇವನ  ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ಎಣ್ಣೆ - ಮಕರ ಸಂಕ್ರಾಂತಿಯ ದಿನದಂದು ಎಣ್ಣೆಯನ್ನು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಎಣ್ಣೆ ದಾನ ಮಾಡುವುದರಿಂದ ಶನಿದೇವನ ವಿಶೇಷ ಕೃಪೆ ಲಭಿಸುತ್ತದೆ.

ಎಳ್ಳು - ಮಕರ ಸಂಕ್ರಾಂತಿಯಂದು ಎಳ್ಳನ್ನು ದಾನ ಮಾಡುವುದು ಒಳ್ಳೆಯದು. ಏಕೆಂದರೆ ಈ ದಿನ ಎಳ್ಳನ್ನು ದಾನ ಮಾಡುವುದರಿಂದ ಶನಿಯ ಪ್ರಕೊಪದಿಂದ ಮುಕ್ತಿ ಸಿಗುತ್ತದೆ.

ತುಪ್ಪ- ಮಕರ ಸಂಕ್ರಾಂತಿಯ ದಿನದಂದು ತುಪ್ಪವನ್ನು ದಾನ ಮಾಡುವುದರಿಂದ ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿಯಾಗುತ್ತದೆ.

ಇದನ್ನೂ ಓದಿ-ಮನೆ ಬಾಗಿಲಲ್ಲಿ ಈ ಒಂದು ವಸ್ತು ಇಡಿ : ಇದರಿಂದ ಹಣದ ಮಳೆ ಸುರಿಯುತ್ತೆ ಮತ್ತು ನಿಮ್ಮ ಅದೃಷ್ಟವು ಬೆಳಗುತ್ತದೆ!

ಐದು ವಿಧದ ಧಾನ್ಯಗಳು- ಈ ದಿನ ಐದು ರೀತಿಯ ಧಾನ್ಯಗಳನ್ನು ದಾನ ಮಾಡುವುದು ಮಂಗಳಕರವಾಗಿದೆ. ಇದರಿಂದ ಎಲ್ಲಾ ರೀತಿಯ ಆಸೆಗಳು ಈಡೇರುತ್ತವೆ.

ಉಪ್ಪು - ಮಕರ ಸಂಕ್ರಾಂತಿಯಂದು ಉಪ್ಪನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಹೊಸ ಉಪ್ಪಿನ ಪೊಟ್ಟಣವನ್ನು ದಾನ ಮಾಡುವುದರಿಂದ ಜಾತಕದಲ್ಲಿ ಶುಕ್ರ ಬಲ ಹೆಚ್ಚಾಗುತ್ತದೆ.

ಕಂಬಳಿ - ಕಂಬಳಿ ದಾನವೂ ಮಕರ ಸಂಕ್ರಾಂತಿಯ ದಿನದಂದು ಮಂಗಳಕರ. ಕಪ್ಪು ಹೊದಿಕೆಯನ್ನು ದಾನ ಮಾಡುವುದರಿಂದ ಶನಿ-ರಾಹುವಿನ ದೋಷಗಳಿಂದ ಮುಕ್ತಿ ದೊರೆಯುತ್ತದೆ.

ಹೊಸ ಬಟ್ಟೆ - ಮಕರ ಸಂಕ್ರಾಂತಿಯಂದು ಬಡವರಿಗೆ ಅಥವಾ ನಿರ್ಗತಿಕರಿಗೆ ಹೊಸ ಬಟ್ಟೆಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ರೇವಡಿ - ಮಕರ ಸಂಕ್ರಾಂತಿಯಂದು ರೇವಡಿಯನ್ನು ದಾನ ಮಾಡುವುದು ಕೂಡ ಮಂಗಳಕರ.

ಇದನ್ನೂ ಓದಿ-ಸೂರ್ಯ-ಬುಧ-ಶುಕ್ರನ ಸ್ಥಾನ ಬದಲಾವಣೆ.. ದ್ವಾದಶ ರಾಶಿಗಳ ಮೇಲಾಗುವ ಪರಿಣಾಮವೇನು?

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News