ಶನಿ ಸಂಕ್ರಮಣದಿಂದ ರೂಪುಗೊಂಡ ಶಶ ಮಹಾಪುರುಷ ರಾಜಯೋಗ; ಈ ರಾಶಿಯವರಿಗೆ ಸುಖ-ಸಂಪತ್ತು, ಧನಪ್ರಾಪ್ತಿ!

ಕುಂಭ ರಾಶಿಯಲ್ಲಿ ಶನಿಯ ಸಂಚಾರ: ಜನವರಿ 17ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಶನಿಯು ಕುಂಭರಾಶಿಗೆ ಪ್ರವೇಶ ಮಾಡುವುದರಿಂದ ಶನಿ ಮಹಾಪುರುಷ ರಾಜಯೋಗವು ರೂಪುಗೊಂಡಿದೆ, ಇದು ಈ ಕೆಲವರು ರಾಶಿಯವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

Written by - Puttaraj K Alur | Last Updated : Jan 18, 2023, 02:49 PM IST
  • ಶಶ ಮಹಾಪುರುಷ ರಾಜಯೋಗವು ಕುಂಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ
  • ಮೇಷ ರಾಶಿಯವರಿಗೆ ಶಶ ಮಹಾಪುರುಷ ರಾಜಯೋಗವು ಆರ್ಥಿಕವಾಗಿ ಅನುಕೂಲವಾಗಲಿದೆ
  • ಧನು ರಾಶಿಯ ಜನರು ಶನಿ ಸಂಚಾರದಿಂದ ವಿಶೇಷ ಲಾಭವನ್ನು ಪಡೆಯುತ್ತಾರೆ
ಶನಿ ಸಂಕ್ರಮಣದಿಂದ ರೂಪುಗೊಂಡ ಶಶ ಮಹಾಪುರುಷ ರಾಜಯೋಗ; ಈ ರಾಶಿಯವರಿಗೆ ಸುಖ-ಸಂಪತ್ತು, ಧನಪ್ರಾಪ್ತಿ!   title=
ಶಶ ಮಹಾಪುರುಷ ರಾಜಯೋಗ

ನವದೆಹಲಿ: ವೈದಿಕ ಜ್ಯೋತಿಷ್ಯದ ಪ್ರಕಾರ ಜನವರಿ 17ರಂದು ಶನಿದೇವನು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಕುಂಭ ಶನಿಯ ಮೂಲ ತ್ರಿಕೋನ ರಾಶಿಯಾಗಿದೆ. ಈ ರಾಶಿಯಲ್ಲಿ ಶನಿ ಸಂಕ್ರಮಣದಿಂದ ಶಶ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತಿದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮ ಎಲ್ಲಾ ಸ್ಥಳೀಯರ ಜೀವನದ ಮೇಲೆ ಕಾಣಿಸಲಿದೆ. ಆದರೆ ಈ 3 ರಾಶಿಗಳ ಜನರ ಜೀವನದ ಮೇಲೆ ವಿಶೇಷ ಪರಿಣಾಮವನ್ನು ಕಾಣಬಹುದು.

ಕುಂಭ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಶ ಮಹಾಪುರುಷ ರಾಜಯೋಗವು ಕುಂಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಶಿಯ ಸಂಕ್ರಮಣದ ಜಾತಕದ ಲಗ್ನ ಮನೆಯಲ್ಲಿ ಶನಿದೇವನು ಸಾಗಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಈ ಜನರಿಗೆ ಸಮಾಜದಲ್ಲಿ ಗೌರವವು ಹೆಚ್ಚಾಗುತ್ತದೆ. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಸಹ ಕೆಲವು ಸ್ಥಾನ ಪಡೆಯಬಹುದು. ವಿವಾಹಿತರಿಗೆ ಈ ಸಮಯವು ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಹೊಸ ಸಂಬಂಧಗಳು ಬರಬಹುದು. ವೃತ್ತಿ ಜೀವನದಲ್ಲಿ ಪ್ರಗತಿಗೆ ಹಲವು ಅವಕಾಶಗಳು ದೊರೆಯಲಿವೆ.

ಇದನ್ನೂ ಓದಿ: 'ಶನಿ' ರಾಶಿಯಲ್ಲಿ ಶುಕ್ರನ ಪ್ರವೇಶ: ಧನ ಲಾಭದಿಂದ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಲಿದೆ!

ಮೇಷ ರಾಶಿ: ಮೇಷ ರಾಶಿಯವರಿಗೆ ಶಶ ಮಹಾಪುರುಷ ರಾಜಯೋಗವು ಆರ್ಥಿಕವಾಗಿ ಅನುಕೂಲವಾಗಲಿದೆ. ಶನಿಯು ಈ ರಾಶಿಯ ಸ್ಥಳೀಯರ ಆದಾಯದ ಮನೆಯಲ್ಲಿ ಸಂಕ್ರಮಿಸಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಹೂಡಿಕೆಯಿಂದ ಲಾಭದ ಸಾಧ್ಯತೆಯಿದೆ. ಅಲ್ಲದೆ ಈ ಅವಧಿಯಲ್ಲಿ ಅನೇಕ ಆರ್ಥಿಕ ಪ್ರಯೋಜನಗಳು ದೊರೆಯಬಹುದು. ರಫ್ತು ಮತ್ತು ಆಮದು ವ್ಯವಹಾರಕ್ಕೆ ಸಂಬಂಧಿಸಿದ ಜನರು ಈ ಸಮಯದಲ್ಲಿ ಉತ್ತಮ ಲಾಭ ಗಳಿಸಬಹುದು. ಷೇರುಪೇಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಭಾರಿ ಲಾಭದ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಜನರು ಕೆಲವು ಹುದ್ದೆ ಅಥವಾ ಇನ್ನಾವುದೇ ಉದ್ಯೋಗ ಪಡೆಯುವ ಸಾಧ್ಯತೆಯಿದೆ.

ಧನು ರಾಶಿ: ಧನು ರಾಶಿಯವರು ಶನಿ ಸಂಚಾರದಿಂದ ವಿಶೇಷ ಲಾಭವನ್ನು ಪಡೆಯುತ್ತಾರೆ. ಧನು ರಾಶಿಯವರಿಗೆ ಸಾಡೇ ಸತಿಯಿಂದ ಮುಕ್ತಿ ಸಿಕ್ಕಿದೆ. ಅಲ್ಲದೆ ಈ ರಾಶಿಯ ಜಾತಕದ 3ನೇ ಮನೆಯಲ್ಲಿ ಶನಿಯು ಸಾಗಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಧನು ರಾಶಿಯ ಜನರ ಧೈರ್ಯ ಮತ್ತು ಶೌರ್ಯವು ಹೆಚ್ಚಾಗಬಹುದು. ಅದೇ ರೀತಿ ಟೂರ್ ಮತ್ತು ಟ್ರಾವೆಲ್ಸ್, ಕಬ್ಬಿಣ ಅಥವಾ ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರು ಸಹ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಗಾಯಕರು, ಕಲಾವಿದರು ಮುಂತಾದ ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಅನುಕೂಲಕರವಾಗಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಕೆಲಸ ಮಾಡಿದರೆ ಕೂದಲು ಉದುರುವ ಸಮಸ್ಯೆಯಿಂದ ಸಿಗುವುದು ಪರಿಹಾರ

(ಗಮನಿರಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News