ಈ ಕೆಲಸಗಳಿಂದ ನಿಮ್ಮ ದಿನವನ್ನು ಆರಂಭಿಸಿ, ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಕ್ಕುತ್ತದೆ

Garud Puran: ಯಶಸ್ವಿ ಮತ್ತು ಸಂತೋಷದ ಜೀವನದ ಪ್ರಮುಖ ಸಾರವನ್ನು ಗರುಡ ಪುರಾಣದಲ್ಲಿ ಅಡಗಿದೆ. ಈ ಮಹಾಪುರಾಣದಲ್ಲಿ ಬರೆದಿರುವ ವಿಷಯಗಳನ್ನು ಅನುಸರಿಸುವವರು ಜೀವನದಲ್ಲಿ ಮಹತ್ತರವಾದ ಯಶಸ್ಸನ್ನು ಪಡೆಯುತ್ತಾರೆ.  

Written by - Nitin Tabib | Last Updated : Jan 23, 2023, 10:13 PM IST
  • ನೀವು ಪ್ರತಿನಿತ್ಯ ಮನೆಯಲ್ಲಿ ಯಾವುದೇ ಆಹಾರವನ್ನು ಬೇಯಿಸಿ,
  • ಅಡುಗೆ ಮಾಡುವಾಗ ಶುದ್ಧತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ.
  • ಆಹಾರ ತಯಾರಿಸಿದ ನಂತರ ಮೊದಲು ದೇವರಿಗೆ ಅರ್ಪಿಸಿ.
ಈ ಕೆಲಸಗಳಿಂದ ನಿಮ್ಮ ದಿನವನ್ನು ಆರಂಭಿಸಿ, ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಕ್ಕುತ್ತದೆ title=
ಗರುಡ ಪುರಾಣ

Garud Puran: ಗರುಡ ಪುರಾಣಕ್ಕೆ ಹಿಂದೂ ಧರ್ಮದಲ್ಲಿ ಮಹಾಪುರಾಣದ ಸ್ಥಾನಮಾನ ನೀಡಲಾಗಿದೆ. ಇದರಲ್ಲಿ ವಿಷ್ಣು ಮತ್ತು ಆತನ ನೆಚ್ಚಿನ ವಾಹನ ಗರುಡ ದೇವನ ಸಂಭಾಷಣೆಯನ್ನು ಬರೆಯಲಾಗಿದೆ. ಇದರಲ್ಲಿ ಮಾನವನ ಹುಟ್ಟಿನಿಂದ ಸಾಯುವವರೆಗೆ, ಸಾವಿನ ನಂತರ ಆತ್ಮದ ಪ್ರಯಾಣ, ಒಬ್ಬನ ಕರ್ಮಗಳ ಫಲ, ಸ್ವರ್ಗ-ನರಕಗಳ ಪರಿಕಲ್ಪನೆ ಇತ್ಯಾದಿಗಳನ್ನು ವಿವರವಾಗಿ ಹೇಳಲಾಗಿದೆ. ಇದಲ್ಲದೇ ಯಶಸ್ಸು, ಸುಖ, ಸಮೃದ್ಧಿ ಪಡೆಯುವ ಮಾರ್ಗಗಳನ್ನೂ ಇದರಲ್ಲಿ ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಪ್ರತಿದಿನ ಬೆಳಗ್ಗೆ ಕೆಲ ಕೆಲಸಗಳನ್ನು ಮಾಡುವ ವ್ಯಕ್ತಿಯು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಅವನ ಮೇಲೆ ದೇವ ದೇವತೆಗಳ ಅನುಗ್ರಹ ಯಾವಾಗಲು ಇರುತ್ತದೆ. ವ್ಯಕ್ತಿಯ ಜೀವನದಲ್ಲಿ ಯಾವತ್ತೂ ಯಾವುದಕ್ಕೂ ಕೊರತೆ ಇರುವುದಿಲ್ಲ.

ಈ ಶುಭ ಕಾರ್ಯಗಳೊಂದಿಗೆ ದಿನವನ್ನು ಪ್ರಾರಂಭಿಸಿ
- ಪ್ರತಿದಿನ ಬೆಳೆಗ್ಗೆ ಬೇಗನೆ ಸ್ನಾನ ಮಾಡಿದ ನಂತರ ದೇವರನ್ನು ದೇವರನ್ನು ಪ್ರಾರ್ಥಿಸಿ ಮತ್ತು ಪೂಜಿಸಿ . ಇದರ ನಂತರ ನಿಮ್ಮ ಪೂರ್ವಜರನ್ನು ಸ್ಮರಿಸಿ ಅವರ ಆಶೀರ್ವಾದವನ್ನೂ ಪಡೆಯಿರಿ. ಇದನ್ನು ಮಾಡುವವರು ಪ್ರತಿ ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ದೇವರು ಮತ್ತು ದೇವತೆಗಳ ಮತ್ತು ಪೂರ್ವಜರ ಕೃಪೆಯಿಂದ, ನಿಮಗೆ ಎಂದಿಗೂ ಯಾವುದರ ಕೊರತೆ ಇರುವುದಿಲ್ಲ.

- ಗರುಡ ಪುರಾಣದ ಪ್ರಕಾರ, ನೀವು ಪ್ರತಿನಿತ್ಯ ಮನೆಯಲ್ಲಿ ಯಾವುದೇ ಆಹಾರವನ್ನು ಬೇಯಿಸಿ, ಅಡುಗೆ ಮಾಡುವಾಗ ಶುದ್ಧತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಆಹಾರ ತಯಾರಿಸಿದ ನಂತರ ಮೊದಲು ದೇವರಿಗೆ ಅರ್ಪಿಸಿ. ತಾಯಿ ಅನ್ನಪೂರ್ಣ ಮತ್ತು ತಾಯಿ ಲಕ್ಷ್ಮಿ ಈ ರೀತಿ ಮಾಡುವುದರಿಂದ ಪ್ರಸನ್ನರಾಗುತ್ತಾರೆ. ಆಹಾರವು ಶುದ್ಧವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ದೇವರಿಗೆ ಯಾವತ್ತೂ ಬೆಳ್ಳುಳ್ಳಿ-ಈರುಳ್ಳಿ ಆಹಾರವನ್ನು ಅರ್ಪಿಸಬೇಡಿ.

- ಗರುಡ ಪುರಾಣದ ಪ್ರಕಾರ, ಯಾವಾಗಲೂ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ. ಅವರಿಗೆ ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡುತ್ತಿರಿ. ಇದಲ್ಲದೇ ರೋಗಿಗಳ ಸೇವೆ ಮಾಡಿ.

ಇದನ್ನೂ ಓದಿ-ಶನಿ-ಚಂದ್ರರ ಸಂಯೋಜನೆಯಿಂದ ರೂಪುಗೊಳ್ಳಲಿದೆ 'ವಿಷ ಯೋಗ', 3 ರಾಶಿಗಳ ಜನರಿಗೆ ಅಪಾಯಕಾರಿ

- ಗರುಡ ಪುರಾಣದ ಪ್ರಕಾರ, ಪ್ರತಿದಿನ ಮೊದಲ ರೊಟ್ಟಿಯನ್ನು ಹಸುವಿಗೆ ನೀಡಬೇಕು, ಕೊನೆಯ ರೊಟ್ಟಿಯನ್ನು ನಾಯಿ ಮತ್ತು ಪಕ್ಷಿಗಳಿಗೆ ನೀಡಬೇಕು. ಹೀಗೆ ಮಾಡುವುದರಿಂದ ಹಳೆಯ ಜನ್ಮದ ಕರ್ಮಗಳೂ ನಾಶವಾಗುತ್ತವೆ ಮತ್ತು ಜೀವನದಲ್ಲಿ ಎಲ್ಲ ಸುಖ ಸಿಗುತ್ತದೆ.

ಇದನ್ನೂ ಓದಿ-ಈ ರಾಶಿಗಳ ಜನರ ಜೀವನದಲ್ಲಿ 100ಕ್ಕೂ ಹೆಚ್ಚು ದಿನಗಳವರೆಗೆ ಅಮಂಗಳಕ್ಕೆ ಕಾರಣವಾಗಲಿದ್ದಾನೆ ಮಂಗಳ

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News