Tuesday Remedies: ಹನುಮಂತನನ್ನು ಮೆಚ್ಚಿಸಲು ಇಂದೇ ಈ ಪರಿಹಾರ ಮಾಡಿ

Tuesday Remedies: ಮಂಗಳವಾರವನ್ನು ಹನುಮಾನ್ ಜಿಯ ದಿನವೆಂದು ಪರಿಗಣಿಸಲಾಗುತ್ತದೆ. ನೀವು ಬಜರಂಗ ಬಲಿಯನ್ನು ಮೆಚ್ಚಿಸಲು ಬಯಸಿದರೆ ಮಂಗಳವಾರದಂದು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಅದು ಸಾಧ್ಯವಾಗುತ್ತದೆ. 

Written by - Yashaswini V | Last Updated : May 17, 2022, 07:38 AM IST
  • ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಾನ್ ಹನುಮಂತನನ್ನು ಮೆಚ್ಚಿಸಲು ಇಂದು ಕೆಂಪು ಅಥವಾ ಕೇಸರಿ ಬಣ್ಣದ ಉಡುಪು ಧರಿಸುವುದು ಉತ್ತಮ
  • ಮಂಗಳವಾರ ಹನುಮಾನ್ ಜೀ ಪಠಣ ಮಾಡುವುದು ಶುಭ
  • ಮಂಗಳ ದೋಷ ನಿವಾರಣೆಗೆ ಇಂದು ಈ ಕೆಲಸ ಮಾಡಿ
Tuesday Remedies: ಹನುಮಂತನನ್ನು ಮೆಚ್ಚಿಸಲು ಇಂದೇ ಈ ಪರಿಹಾರ ಮಾಡಿ  title=
Tuesday Remedies

ಹನುಮನನ್ನು ಪ್ರಸನ್ನಗೊಳಿಸಲು ಸುಲಭ ಉಪಾಯ: ಮಂಗಳವಾರವನ್ನು ಹನುಮಂತನ ದಿನ ಎಂದು ಪರಿಗಣಿಸಲಾಗುತ್ತದೆ. ಹನುಮಂತನ ಕೃಪೆಗೆ ಪಾತ್ರರಾದವರಿಗೆ ಶನಿ ಕಾಟ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಸಾಡೇ ಸಾತಿ ಶನಿ ಮತ್ತು ಶನಿ ಧೈಯಾ ಪರಿಣಾಮ ಹೊಂದಿರುವವರು ಹನುಮಂತನನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಆಂಜನೇಯ, ಬಜರಂಗಬಲಿ ಎಂದೆಲ್ಲಾ ಪೂಜಿಸಲ್ಪಡುವ ಹನುಮಂತನನ್ನು ಮೆಚ್ಚಿಸಲು ಹಲವು ಮಾರ್ಗಗಳಿವೆ. ಇಂದು ಈ ಲೇಖನದಲ್ಲಿ ಅಂತಹ ಕೆಲವು ವಿಧಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದು ಹನುಮನನ್ನು ಪ್ರಸನ್ನಗೊಳಿಸಲು ಸುಲಭ ಉಪಾಯಗಳಾಗಿವೆ.

ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಾನ್ ಹನುಮಂತನನ್ನು ಮೆಚ್ಚಿಸಲು, ನೀವು ಮಂಗಳವಾರ ಕೇಸರಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಇದಕ್ಕೆ ಕಾರಣ ಬಜರಂಗಬಲಿಗೆ ಈ ಎರಡೂ ಬಣ್ಣಗಳು ತುಂಬಾ ಇಷ್ಟ. ಅವರ ಈ ಆಯ್ಕೆಯ ಹಿಂದೆ ಒಂದು ಪ್ರಸಿದ್ಧ ಕಥೆಯಿದೆ. ಧರ್ಮಗ್ರಂಥಗಳ ಪ್ರಕಾರ, ಹನುಮಾನ್ ಜೀ ಒಮ್ಮೆ ತಾಯಿ ಸೀತೆಯನ್ನು ಸಿಂಧೂರ ಹಚ್ಚುವುದರ ಕಾರಣವನ್ನು ಕೇಳಿದರು. ಈ ಬಣ್ಣವು ಭಗವಾನ್ ಶ್ರೀರಾಮನಿಗೆ ತುಂಬಾ ಇಷ್ಟ. ಅದಕ್ಕೆ ಹಣೆಗೆ ಸಿಂಧೂರ ಹಚ್ಚಿಕೊಳ್ಳುವುದಾಗಿ ಹೇಳಿದರಂತೆ.

ಇದನ್ನೂ ಓದಿ- Mangal Gochar 2022: ನಾಳೆಯಿಂದ ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಮಂಗಳನ ವಿಶೇಷ ಕೃಪೆ ಪ್ರಾಪ್ತಿ

ಮಾತೆ ಸೀತಾಳಿಂದ ಇದನ್ನು ಕೇಳಿದ ಹನುಮಂತನು ತನ್ನ ದೇಹದಾದ್ಯಂತ ಸಿಂಧೂರವನ್ನು ಹಚ್ಚಿಕೊಂಡು ಶ್ರೀರಾಮನ ಮುಂದೆ ತಲುಪಿದನು ಎಂದು ಹೇಳಲಾಗುತ್ತದೆ. ಹನುಮನ ಈ ಅವತಾರ ನೋಡಿ ಭಗವಾನ್ ಶ್ರೀರಾಮನು ಘೋರವಾಗಿ ನಗುತ್ತಾ ಇನ್ನುಮುಂದೆ ನೀವು ಈ ಬಣ್ಣದಿಂದಲೇ ಗುರುತಿಸಲ್ಪಡುತ್ತೀರಿ ಎಂದು ಆಶೀರ್ವದಿಸಿದನು ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಹನುಮನಿಗೆ ಮೀಸಲಾದ ಮಂಗಳವಾರದಂದು ಕೇಸರಿ ಅಥವಾ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಹನುಮಾನ್ ಜೀ ಜನರಿಗೆ ಅದೃಷ್ಟವನ್ನು ತರುತ್ತಾನೆ ಎಂದು ನಂಬಲಾಗಿದೆ. 

ಮಂಗಳವಾರ ಹನುಮಾನ್ ಜೀ ಪಠಣ ಮಾಡುವುದು ಶುಭ: 
ನೀವು ಯಾರೊಂದಿಗಾದರೂ ಸಾಲವನ್ನು ತೆಗೆದುಕೊಂಡಿದ್ದರೆ ಮತ್ತು ಅದನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಮಂಗಳವಾರ ಹನುಮಾನ್ ಜೀ ಪಠಣವು ಅದನ್ನು ತೊಡೆದುಹಾಕಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಮಾಡುವುದರಿಂದ, ಭಜರಂಗ ಬಲಿಯು ಸಂತುಷ್ಟನಾಗುತ್ತಾನೆ ಮತ್ತು ಆರ್ಥಿಕ ಸಮೃದ್ಧಿಯನ್ನು ನೀಡುವುದರ ಜೊತೆಗೆ ಮನೆಯಲ್ಲಿ ಎಲ್ಲಾ ರೀತಿಯ ತೊಂದರೆಗಳನ್ನೂ ದೂರಮಾಡುತ್ತಾನೆ ಎಂದು ಹೇಳಲಾಗುತ್ತದೆ. ನೀವು ಮಂಗಳವಾರ ಯಾವುದೇ ಹನುಮಾನ್ ದೇವಸ್ಥಾನಕ್ಕೆ ತೆಂಗಿನಕಾಯಿಯನ್ನು ದಾನ ಮಾಡಬಹುದು. ಈ ರೀತಿ ಮಾಡುವುದರಿಂದ ಮನಸ್ಸಿಗೆ ಅಪಾರ ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Astro Tips: ದಿಢೀರ್ ಹಣ ಪಡೆಯಲು ಪರಿಣಾಮಕಾರಿ ಮಾರ್ಗಗಳು

ಮಂಗಳ ದೋಷ ನಿವಾರಣೆಗೆ ಇಂದು ಈ ಕೆಲಸ ಮಾಡಿ:
ಯಾರ ಜಾತಕದಲ್ಲಿ ಮಂಗಳ ದೋಷ ಇರುತ್ತದೆಯೋ ಅವರು ಹನುಮನನ್ನು ಮೆಚ್ಚಿಸುವ ಮೂಲಕ ಮಂಗಳ ದೋಷದಿಂದ ಪರಿಹಾರ ಪಡೆಯಬಹುದು.  ಇದಕ್ಕಾಗಿ ಮಂಗಳವಾರದಂದು ಹನುಮಾನ್ ಜೀ ಪೂಜೆಯ ಜೊತೆಗೆ ದೇವಸ್ಥಾನದಲ್ಲಿರುವ ಹನುಮಾನ್ ಜೀ ಪ್ರತಿಮೆಯ ಮುಂದೆ ಬೆಲ್ಲ ಮತ್ತು ಕಾಳುಗಳನ್ನು ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಬಜರಂಗ ಬಲಿಯು ಸಂತುಷ್ಟನಾಗುತ್ತಾನೆ ಮತ್ತು ತನ್ನ ಭಕ್ತರ ಮೇಲೆ ಸಾಕಷ್ಟು ಅನುಗ್ರಹವನ್ನು ಧಾರೆಯೆರೆಯುತ್ತಾನೆ ಎಂದು ನಂಬಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News