Hyderabad Murder : ತನ್ನ ಲವರ್‌ಗೆ ಮೆಸೆಜ್‌ ಮಾಡಿದ ʼಗೆಳೆಯನ ಹೃದಯ ಬಗಿದʼ ಯುವಕ..! ಸೂಪರ್‌ ಎಂದ್ಳು ಗೆಳತಿ

Hyderabad Murder Case : ಯುವಕನೋರ್ವ ತನ್ನ ಲವರ್‌ ಜತೆ ಟೆಕ್ಸ್‌ ಮಾಡಿದ ಕಾರಣಕ್ಕಾಗಿ ಗೆಳೆಯನನ್ನೇ ಕೊಂದು ಹೃದಯ ಬಗಿದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಭೀಕರ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ. ಹತ್ಯೆ ಬಳಿಕ ಆರೋಪಿ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ.

Written by - Krishna N K | Last Updated : Feb 26, 2023, 03:26 PM IST
  • ಗೆಳೆಯನನ್ನೇ ಕೊಂದು ಹೃದಯ ಬಗಿದ ಯುವಕ.
  • ಭೀಕರ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ.
  • ಹತ್ಯೆ ಬಳಿಕ ಆರೋಪಿ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ.
 Hyderabad Murder : ತನ್ನ ಲವರ್‌ಗೆ ಮೆಸೆಜ್‌ ಮಾಡಿದ ʼಗೆಳೆಯನ ಹೃದಯ ಬಗಿದʼ ಯುವಕ..! ಸೂಪರ್‌ ಎಂದ್ಳು ಗೆಳತಿ title=

ತೆಲಂಗಾಣ : ಯುವಕನೋರ್ವ ತನ್ನ ಲವರ್‌ ಜತೆ ಟೆಕ್ಸ್‌ ಮಾಡಿದ ಕಾರಣಕ್ಕಾಗಿ ಗೆಳೆಯನನ್ನೇ ಕೊಂದು ಹೃದಯ ಬಗಿದು, ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಭೀಕರ ಘಟನೆ ಹೈದ್ರಾಬಾದ್‌ನಲ್ಲಿ ನಡೆದಿದೆ. ಹತ್ಯೆ ಬಳಿಕ ಆರೋಪಿ ನೇರವಾಗಿ ಪೊಲೀಸ್‌ ಠಾಣೆಗೆ ತೆರಳಿ ಶರಣಾಗಿದ್ದಾನೆ.

22 ವರ್ಷದ ನವೀನ್‌ ಮೃತ ಯುವಕ ಎಂದು ಗುರುತಿಸಲಾಗಿದೆ. ಹರಿಹರ ಕೃಷ್ಣ ಅಲಿಯಾಸ್‌ ಹರಿ ಹತ್ಯೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಅನ್ವಯ್‌ ಕೃಷ್ಣನ ಪ್ರೇಯಸಿಗೆ ಫೋನ್​, ಮೆಸೇಜ್​ ಮಾಡುತ್ತಿದ್ದ ಎಂಬ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆರೋಪಿಯನ್ನು ಹತ್ಯೆ ಮಾಡಿದ ಬಳಿಕ, ದೇಹವನ್ನು ನಗ್ನಗೊಳಿಸಿ ಆತನ ಖಾಸಗಿ ಭಾಗಗಳು, ಬೆರಳು ಸೇರಿದಂತೆ ಆತನ ಎದೆ ಸೀಳಿ ಹೃದಯವನ್ನು ಹೊರತೆಗೆದು ಫೋಟೋ ತೆಗೆದುಕೊಂಡಿದ್ದ ಎಂದು ತಿಳಿದಿ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. 

ಇದನ್ನೂ ಓದಿ: Lionel Messi fan Suzy Cortez: ಲಿಯೋನೆಲ್ ಮೆಸ್ಸಿಯ ಬಿಗ್‌ ಫ್ಯಾನ್‌ ಈ ಮಿಸ್ ಬಮ್‌ಬಮ್.!

ನವೀನ್‌ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಹರಿ ಸಹ ಅದೇ ಹುಡುಗಿಯನ್ನು ಲವ್‌ ಮಾಡುತ್ತಿದ್ದ. ಆದ್ರೆ ಆ ಯುವತಿ ನವೀನ್‌ ಲವ್‌ನ್ನು ಒಪ್ಪಿಕೊಂಡಿದ್ದಳು. ಸುಮಾರು ಎರಡು ಮೂರು ವರ್ಷಗಳ ಕಾಲ ಇಬ್ಬರು ಸುತ್ತಾಡಿದ್ದರಂತೆ ಬಳಿಕ ನವೀನ್‌ ಜೊತೆ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಳು. ಬ್ರೇಕ್‌ ವಿಚಾರ ತಿಳಿದ ಹರಿ ಮರಳಿ ಅದೇ ಯುವತಿಗೆ ಲವ್‌ ಪ್ರಪೋಸ್‌ ಮಾಡಿದ್ದ. ಆಕೆ ಒಪ್ಪಿಕೊಂಡಿದ್ದಳು. 

ನಂತರ ನವೀನ್​ ಬ್ರೇಕ್​ ಅಪ್​ ಮಾಡಿಕೊಂಡಿದ್ದರು ಯುವತಿಗೆ ನಿರಂತವಾಗಿ ಫೋನ್, ಮೆಸೇಜ್ ಮಾಡೋದನ್ನು ಮುಂದುವರಿಸಿದ್ದನಂತೆ. ಇದರಿಂದ ಹರಿ ಅಸಮಾಧಾನಗೊಂಡಿದ್ದನಂತೆ. ಫೆ.17 ರಂದು ನವೀನ್​ ಜೊತೆ ಹರಿ ಎಣ್ಣೆ ಪಾರ್ಟಿ ಮಾಡಿದ್ದ. ಈ ವೇಳೆ ಯುವತಿಯ ವಿಚಾರವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ರೊಚ್ಚಿಗೆದ್ದ ಹರಿ, ಸ್ನೇಹಿತನನ್ನೇ ಭರ್ಬರವಾಗಿ ಹತ್ಯೆಗೈದಿದ್ದಾನೆ. ಅಲ್ಲದೆ ಕೊಲೆ ಮಾಡಿದ ಬಳಿಕ ಆತನ ಮೃತದೇಹವನ್ನು ನಗ್ನಗೊಳಿಸಿ, ಬೆರಳು, ತಲೆ, ಖಾಸಗಿ ಅಂಗ ಹಾಗೂ ಹೃದಯವನ್ನು ತುಂಡು ತುಂಡಾಗಿ ಕತ್ತರಿಸಿದ್ದನು.

ಇದನ್ನೂ ಓದಿ: Saurav Ganguly : ಐಪಿಎಲ್ 2023 ರಲ್ಲಿ ಭರ್ಜರಿ ಪ್ರದರ್ಶನ ನೀಡಲಿದ್ದಾರೆ ಈ 5 ಆಟಗಾರರು : ಗಂಗೂಲಿ

ಇಷ್ಟೇ ಅಲ್ಲ, ಕಟ್‌ ಮಾಡಿದ್ದ ನವೀನ್‌ ದೇಹದ ಅಂಗಾಂಗಗಳನ್ನು ಫೋಟೋ ತೆಗೆದು ಪ್ರೇಯಸಿಗೆ ವಾಟ್ಸಾಪ್​​ ಮಾಡಿದ್ದನು. ಈ ಫೋಟೋಗಳನ್ನು ನೋಡಿ ಖುಷಿಗೊಂಡ ಯುವತಿ, ಒಳ್ಳೆಯದನ್ನೇ ಮಾಡಿದೆ ಅಂತ ಪ್ರತಿಕ್ರಿಯೆ ಕೂಡ ನೀಡಿದ್ದಳು ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಕೋರ್ಟ್​ ಎದುರು ಹಾಜರುಪಡಿಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News