ಸೈನಿಕರ ನಿಧಿಗೆ ಸಹಾಯ ಮಾಡಲು ಸಂಸದ ಸುಭಾಶ್ ಚಂದ್ರ ಮನವಿ

    

Last Updated : Dec 7, 2017, 01:30 PM IST
ಸೈನಿಕರ  ನಿಧಿಗೆ ಸಹಾಯ ಮಾಡಲು ಸಂಸದ ಸುಭಾಶ್ ಚಂದ್ರ ಮನವಿ title=

ನವದೆಹಲಿ: ರಾಜ್ಯಸಭಾ ಸದಸ್ಯ ಸುಭಾಶ್ ಚಂದ್ರ ಸೈನಿಕರ ನಿಧಿಗೆ ಪ್ರತಿಯೊಬ್ಬರು ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು.

ಡಿಸೆಂಬರ್ 7 ಸಶಸ್ತ್ರ ಸೇನಾ ಧ್ವಜದ ದಿನದ ನಿಮಿತ್ತ ಮಾತನಾಡಿದ ಅವರು ಹಲವಾರು ಸಾರಿ ನಾವು ದೇಶಕ್ಕಾಗಿ ಅಥವಾ ಸಮಾಜಕ್ಕಾಗಿ ಒಳಿತನ್ನು ಮಾಡಬೇಕೆಂದು ಕೇಳಿಕೊಂಡಾಗ ನಾವು ಅದಕ್ಕೆ ಸಮಯವಿಲ್ಲವೆಂದು ಜಾರಿಕೊಳ್ಳುತ್ತೇವೆ. ಸೈನಿಕರು ನಮಗೋಸ್ಕರ ಆ ಹಿಮದ ನಡುವೆ ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತಾರೆ.ಆದ್ದರಿಂದ ನಾವು ಇಂದು ನೆಮ್ಮದಿಯ ನಿದ್ರೆಯನ್ನು ಮಾಡಬಹುದಾಗಿದೆ ಎಂದರು. ಆದ್ದರಿಂದ ಅವರ ಸಮರ್ಪಣೆ ಮತ್ತು ತ್ಯಾಗಕ್ಕಾಗಿ ಅವರಿಗಾಗಿ ಮತ್ತು ಅವರ ಕುಟುಂಬಗಳಿಗಾಗಿ ನಾವು ಆರ್ಥಿಕ ಸಹಾಯವನ್ನು ಮಾಡಬೇಕಾಗಿದೆ ವಿನಂತಿಸಿಕೊಂಡಿದ್ದಾರೆ.

ಆದ್ದರಿಂದ ಧನ ಸಹಾಯಕ್ಕೆ  ನೀವು ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ 

1) ಇಲ್ಲಿ ಕ್ಲಿಕ್ಕಿಸಿ- http://www.ksb.gov.in/PaymentListRMDF.htm
2) UPI ಕೊಡ್ ಬಳಸುಬಹುದು- armedforceesflagdayfund@sbi
3) ಪೆಟಿಎಂ ಮೂಲಕವು ಹಣ ಕಳುಹಿಸಬಹುದು-8800462175
4) ಚೆಕ್ ಮೂಲಕ ಈ ಅಕೌಂಟ್ ನಂಬರಿಗೆ ಹಣ ಸಂದಾಯ ಮಾಡಿ-34420400623 (SBI ಆರ್ ಕೆ ಪುರಂ ಶಾಖೆ)

ಈ ಸೇನಾ ನಿಧಿಗೆ ಮಾಡಲಾಗುವ ಸಹಾಯಧನವನ್ನು  ಸೆಕ್ಷನ್ 80 ಜಿ (5) (vi) ರ ಅಡಿಯಲ್ಲಿ  ಆಧಾಯ ತೆರಿಗೆಯಿಂದ ವಿನಾಯ್ತಿಗೊಳಿಸಲಾಗಿದೆ 

Trending News