ಬೆಂಗಳೂರು: ಒಂದೆಡೆ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರಚಾರ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ರಾಜ್ಯದ ಜನತೆಗೆ ಬಿಜೆಪಿ ನೀಡಿರುವ ಭರವಸೆಗಳನ್ನು ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ನೆನಪಿಸುತ್ತಿದೆ.
ಹೌದು, ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ಪರ ಪ್ರಚಾರ ಮಾಡಲು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ಸಭೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಏತನ್ಮಧ್ಯೆ '#ಉತ್ತರಕೊಡಿಶಾ' ಎಂಬ ಹ್ಯಾಶ್ ಟ್ಯಾಗ್ ಮೂಲಕ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಗೈದಿದೆ.
@AmitShah ಅವರೇ, ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿವಾದ ಬಗೆ ಹರಿಯಲಿದೆ ಎಂದಿದ್ದಿರಿ, ಗೋವಾ ಸಿಎಂ ನೀರು ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ @BSYBJP ಅವರಿಗೆ ಪತ್ರ ಬರೆದಿದ್ದರು. ಇದೆಲ್ಲಾ ಕೇವಲ ಚುನಾವಣಾ ಕುತಂತ್ರವೇ? ಇನ್ನೂ ಮಹದಾಯಿ ವಿವಾದ ಬಗೆಹರಿಸಲಿಲ್ಲವೇಕೆ? #ಉತ್ತರಕೊಡಿಶಾ ಎಂದು ಪ್ರಶ್ನಿಸಿರುವ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
' @AmitShah ಅವರೇ,
ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿವಾದ ಬಗೆ ಹರಿಯಲಿದೆ ಎಂದಿದ್ದಿರಿ,
ಗೋವಾ ಸಿಎಂ ನೀರು ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ @BSYBJP ಅವರಿಗೆ ಪತ್ರ ಬರೆದಿದ್ದರು.
ಇದೆಲ್ಲಾ ಕೇವಲ ಚುನಾವಣಾ ಕುತಂತ್ರವೇ?
ಇನ್ನೂ ಮಹದಾಯಿ ವಿವಾದ ಬಗೆಹರಿಸಲಿಲ್ಲವೇಕೆ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
.@AmitShah ಅವರೆ,
ಭೀಕರ ನೆರೆ ಸಮೀಕ್ಷೆಗೆ "ಗಿಮಿಕ್ ಭೇಟಿ" ಕೊಟ್ಟಿರಿ, ನಿಮ್ಮ ನೆರೆ ವೀಕ್ಷಣೆಯ ಫಲವೇನು?
ರಾಜ್ಯಕ್ಕಾಗಿರುವ ನಷ್ಟ ₹ 35,500 ಕೋಟಿ,
ಕೇಂದ್ರ ಕೊಟ್ಟಿರುವ ಪರಿಹಾರ ಚಿಲ್ಲರೆ ₹1869 ಕೋಟಿ.ರಾಜ್ಯಕ್ಕೆ ಕೇಂದ್ರದಿಂದ ಈ ರೀತಿಯ ವಂಚನೆ ಮಾಡುತ್ತಿರುವುದೇಕೆ?
ಅಗತ್ಯ ನೆರೆ ಪರಿಹಾರ ಕೊಡುವುದಿಲ್ಲವೇ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
.@AmitShah ಅವರೆ,@BJP4Karnataka ಸರ್ಕಾರದ ಗೂಂಡಾಗಿರಿ ಮಿತಿ ಮೀರಿದೆ.
▪ಮಂಗಳೂರು ಗೋಲಿಬಾರ್
▪ಇತಿಹಾಸಕಾರ ರಾಮಚಂದ್ರ ಗುಹಾರಿಗೆ ಅವಮಾನಿಸಿದ್ದು
▪ಜ್ಯೋತಿನಿವಾಸ್ ಕಾಲೇಜ್ ಪ್ರಕರಣ
▪ಶಾಸಕ ವಿಶ್ವನಾಥ್ ಕಲಾ ಸಂಸ್ಥೆಗೆ ನುಗ್ಗಿದ್ದುಈ ಪ್ರಕರಣಗಳು, "ಗುಜರಾತ್ ಮಾದರಿ" ಅಂದರೆ ಇದೆಯೇನು?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
.@AmitShah ಅವರೆ,
▪ ₹5600 ಕೋಟಿ ಜಿಎಸ್ಟಿ ಬಾಕಿ
▪ ₹2700 ಕೋಟಿ ಕುಡಿಯುವ ನೀರಿನ ಬಾಕ
▪ ಭಾಗ್ಯಲಕ್ಷ್ಮಿ ಯೋಜನೆಯ ₹ 309 ಕೋಟಿ
▪ ಪ್ರಧಾನಮಂತ್ರಿ ಅವಾಸ್ ಯೋಜನೆಯ ₹240 ಕೋಟಿ▪ ವಸತಿ, ಶಿಕ್ಷಣ, ಶಿಶು ಅಭಿವೃದ್ಧಿ ಮುಂತಾದ ಯೋಜನೆಗಳ ಹಣವನ್ನು ಬಿಡುಗಡೆಗೊಳಿಸದೆ ಕೇಂದ್ರವು ಕರ್ನಾಟಕಕ್ಕೆ ವಂಚಿಸುತ್ತಿರುವುದೇಕೆ?#ಉತ್ತರಕೊಡಿಶಾ pic.twitter.com/BknrP87U0h
— Karnataka Congress (@INCKarnataka) January 18, 2020
◼ಭಯೋತ್ಪಾದಕ ದಾವಿಂದರ್ ಸಿಂಗ್ ಬಗ್ಗೆ
ನಿಮ್ಮ ಹಾಗೂ ಪ್ರಧಾನ ಮಂತ್ರಿಯ ಮೌನವೇಕೆ?
◼ಪುಲ್ವಾಮಾ ದಾಳಿಯಲ್ಲಿ ದಾವಿಂದರ್ ಸಿಂಗ್ ಪಾತ್ರವೇನು?
◼ಈತ ಇನ್ನೂ ಅದೆಷ್ಟು ಉಗ್ರರ ಜೊತೆ ಕೈಜೋಡಿಸಿದ್ದಾನೆ?
◼ಈತನ ರಕ್ಷಣೆಗೆ ನಿಂತವರು ಯಾರು ಏಕೆ?
◼ದೇಶದ ಭದ್ರತೆಯ ಗಂಭೀರ ವಿಷಯದಲ್ಲಿ ಜನರಿಂದ ನೀವು ಏನನ್ನು ಮುಚ್ಚಿಡುತ್ತಿರುವಿರಿ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
.@AmitShah ಅವರೆ,
ಪೌರತ್ವ ತಿದ್ದುಪಡಿಯು ಡಾ.ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ.
೧೯೫೫ ರ ಕಾಯ್ದೆಯು ಪೌರತ್ವ & ಆಶ್ರಯ ನೀಡುವುದರಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡುವುದಿಲ್ಲ.
೨೦೧೯ರ ತಿದ್ದುಪಡಿಯು ತಾರತಮ್ಯದಿಂದ ಕೂಡಿದ್ದು ಪರಿಚ್ಚೇದ ೧೪ರ ವಿರುದ್ಧವಾಗಿದೆ.
ಸಂವಿಧಾನದ ಜೊತೆ ಚೆಲ್ಲಾಟವೇಕೆ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
.@AmitShah ಅವರೇ
ಸಿಎಎ/ಎನ್ಆರ್ ಸಿ ವಿರೋಧಿಸಿ ದೇಶಾದಾಧ್ಯಂತ ೧ ತಿಂಗಳಿಂದ ನಿರಂತರವಾಗಿ, ಎಲ್ಲಾ ಜಾತಿ-ಧರ್ಮಗಳ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಜನಸಾಮಾನ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಜನಾಭಿಪ್ರಾಯದ ವಿರುದ್ಧ ಸರ್ವಾಧಿಕಾರಿ ಧೋರಣೆ ಏಕೆ?
ಬಿಜೆಪಿಯು ಪ್ರಜಾಪ್ರಭುತ್ವ & ಸಂವಿಧಾನವನ್ನು ಗೌರವಿಸುತ್ತಿಲ್ಲವೇಕೇ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ @BJP4Karnataka ಸರ್ಕಾರವು ಟೇಕ್ ಆಫ್ ಆಗಿಲ್ಲ.
◼ಬಿಜೆಪಿ ಆರೆಸ್ಸೆಸ್ ಕಿತ್ತಾಟ
◼ಮಂತ್ರಿ ಮಂಡಲ ರಚನೆಗೆ ನಿಮ್ಮ ತಡೆ ಮತ್ತು ದಬ್ಬಾಳಿಕೆ
◼ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರುಗಳ ಹೊಂದಾಣಿಕೆ ಕೊರತೆಯಿಂದ
ರಾಜ್ಯದ ಅಭಿವೃದ್ಧಿ ಕುಂಠಿತ ಗೊಳಿಸುತ್ತಿರುವುದೇಕೆ?#ಉತ್ತರಕೊಡಿಶಾ— Karnataka Congress (@INCKarnataka) January 18, 2020