ಮುಂಬೈಯಲ್ಲಿ ಶಿವಸೇನೆ ನಾಯಕನ ಕೊಲೆ

ಅಶೋಕ್ ಸಾವಂತ್ ಅವರು ಮುಂಬೈನ ಸಮತಾ ನಗರ ಕ್ಷೇತ್ರದಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿದ್ದಾರೆ. ಭಾನುವಾರ ರಾತ್ರಿ ತನ್ನ ಸ್ನೇಹಿತನನ್ನು ಭೇಟಿ ಮಾಡಿದ ಬಳಿಕ ಅಶೋಕ್ ಸಾವಂತ್ ಅವರು ಹಿಂದಿರುಗುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಸವಾರರು ಅಶೋಕ್ ಸಾವಂತ್ ಅವರನ್ನು ಹತ್ಯೆ ಮಾಡಿದ್ದಾರೆ.

Last Updated : Jan 8, 2018, 10:14 AM IST
ಮುಂಬೈಯಲ್ಲಿ ಶಿವಸೇನೆ ನಾಯಕನ ಕೊಲೆ title=

ನವ ದೆಹಲಿ: ಮುಂಬೈಯಲ್ಲಿ, ಶಿವಸೇನೆಯ ಮಾಜಿ ಕೌನ್ಸಿಲರ್ನ ಕೊಲೆ ನಗರದಲ್ಲಿ ಸಂವೇದನೆಯನ್ನು ಸೃಷ್ಟಿಸಿದೆ. ಕಂಡಿವಲಿ ಪ್ರದೇಶದಲ್ಲಿ, ಶಿವಸೇನೆಯ ಮಾಜಿ ಕೌನ್ಸಿಲರ್ ಅಶೋಕ್ ಸಾವಂತ್ ಅವರನ್ನು ಕಳೆದ ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಅಜ್ಞಾನಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅಶೋಕ್ ಸಾವಂತ್ ಅವರು ಮುಂಬೈದ ಸಮತಾ ನಗರ ಕ್ಷೇತ್ರದಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿದ್ದಾರೆ. ಭಾನುವಾರ ರಾತ್ರಿ ತನ್ನ ಸ್ನೇಹಿತನನ್ನು ಭೇಟಿ ಮಾಡಿದ ಬಳಿಕ ಅಶೋಕ್ ಸಾವಂತ್ ಅವರು ಹಿಂದಿರುಗುತ್ತಿದ್ದಾಗ ಈ ದಾಳಿ ನಡೆದಿದೆ. ಈ ಘಟನೆಯು ಸುಮಾರು 10:45 ರ ವೇಳೆಗೆ ನಡೆಯಿತು, ಸಾವಂತ್ ಅವರ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದೆ ಈ ಘಟನೆ ನಡೆದಿದೆ.

ಸಾವಂತ್ ಮೇಲೆ ಹಲವು ಬಾರಿ ಚಾಕುವಿನಿಂದ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸುವುದರ ಮೂಲಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಾವಂತ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಘಟನೆಯ ನಂತರ, ಪೊಲೀಸರು ಸ್ಥಳಕ್ಕೆ ತಲುಪಿದರು ಮತ್ತು ನ್ಯಾಯ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದರು. ಸಾವಂತ್ ದೇಹವನ್ನು ಪೋಸ್ಟ್ಮಾಂಟಮ್ಗಾಗಿ ಶತಾಬ್ದಿ ಆಸ್ಪತ್ರೆಗೆ ಕಳುಹಿಸಲಾಗಿದೆ.

Trending News