ತಿಮ್ಮಪ್ಪನ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು, ʼಧರ್ಮ ಸಂರಕ್ಷಣಾ ಮಂಡಳಿ' ಬೇಕು ಎಂದ ಪವನ್‌ ವಿರುದ್ಧ ರಾಜ್‌ ಕಿಡಿ..! 

Prakash Raj on Pawan Kalyan : ದೇಶದ ದೇವಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ನಿಗಾ ಇಡಲು ರಾಷ್ಟ್ರಮಟ್ಟದಲ್ಲಿ ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಸ್ಥಾಪಿಸುವಂತೆ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಲಹೆ ನೀಡಿದ್ದಾರೆ. ಇದರ ಬೆನ್ನಲ್ಲೆ ನಟ, ರಾಜಕಾರಣಿ ಪ್ರಕಾಶ್ ರಾಜ್ ಪವನ್‌ ಅವರ ಮಾತನ್ನು ಟೀಕಿಸಿದ್ದಾರೆ...

Written by - Krishna N K | Last Updated : Sep 21, 2024, 05:01 PM IST
    • ನಟ ಪ್ರಕಾಶ್ ರಾಜ್ ತಮ್ಮ ನೇರ ಮಾತುಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ.
    • ‘ಸನಾತನ ಧರ್ಮ ರಕ್ಷಣಾ ಮಂಡಳಿ’ ಅವಶ್ಯಕ ಎಂದ ಡಿಸಿಎಂ ಪವನ್‌ ಕಲ್ಯಾಣ್‌
    • ಪವನ್‌ ಕಲ್ಯಾಣ್‌ ಮಾತಿಗೆ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ ಪ್ರಕಾಶ್‌ ರಾಜ್‌
ತಿಮ್ಮಪ್ಪನ ಲಡ್ಡುವಿನಲ್ಲಿ ದನ, ಹಂದಿ ಕೊಬ್ಬು, ʼಧರ್ಮ ಸಂರಕ್ಷಣಾ ಮಂಡಳಿ' ಬೇಕು ಎಂದ ಪವನ್‌ ವಿರುದ್ಧ ರಾಜ್‌ ಕಿಡಿ..!  title=

Tirupati laddu controversy : ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮ ನೇರ ಮಾತುಗಳಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ರಾಜಕೀಯ ಮತ್ತು ವಿಭಿನ್ನ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಲವಾಗಿ ವ್ಯಕ್ತಪಡಿಸುವ ನಟ, ಇತ್ತೀಚಿಗೆ ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ್ದಾರೆ. 

ಪವನ್ ಕಲ್ಯಾಣ್ ಟ್ವೀಟ್ : ತಿರುಪತಿ ದೇವಸ್ಥಾನದ ಪ್ರಸಾದ ವಿಚಾರ ಕುರಿತು ಟ್ವೀಟ್‌ ಮಾಡಿರುವ ಡಿಸಿಎಂ ಪವನ್ ಕಲ್ಯಾಣ್, "ತಿರುಪತಿ ಬಾಲಾಜಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿಮಾಂಸ ಮತ್ತು ದನದ ಕೊಬ್ಬು) ಮಿಶ್ರಣವಾಗಿದ್ದು, ನಮಗೆಲ್ಲರಿಗೂ ಅಚ್ಚರಿ ಮೂಡಿಸಿದೆ, ವೈಸಿಪಿ ಸರ್ಕಾರ ಸ್ಥಾಪಿಸಿದ ಟಿಟಿಡಿ ಮಂಡಳಿಯಲ್ಲಿ ಹಲವು ಪ್ರಶ್ನೆಗಳಿವೆ. ನಮ್ಮ ಸರ್ಕಾರವು ಕಟ್ಟುನಿಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ, ಆದರೆ ಇದು ದೇವಾಲಯಗಳ ಅಪವಿತ್ರತೆ, ಇತರ ಧಾರ್ಮಿಕ ಆಚರಣೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ಇದನ್ನೂ ಓದಿ: ಅವರು ಪ್ಯಾಂಟ್‌ ಬಿಚ್ಚಿ ಅದನ್ನು ತೋರಿಸಿದರು, ನೋಡಿ ನನಗೆ ಭಯವಾಯ್ತು...!! ʼವೀರ ಕನ್ನಡಿಗʼ ನಟಿಯ ಶಾಕಿಂಗ್‌ ಹೇಳಿಕೆ

"ಭಾರತದಾದ್ಯಂತ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರ ಮಟ್ಟದಲ್ಲಿ 'ಸನಾತನ ಧರ್ಮ ಸಂರಕ್ಷಣಾ ಮಂಡಳಿ' ಸ್ಥಾಪಿಸುವ ಸಮಯ ಬಂದಿದೆ, ನೀತಿ ನಿರೂಪಕರು, ಧಾರ್ಮಿಕ ಮುಖಂಡರು, ನ್ಯಾಯಾಂಗ, ನಾಗರಿಕರು, ಮಾಧ್ಯಮಗಳು ಮತ್ತು ಇತರರು ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚಿಸಬೇಕು. 'ಸನಾತನ ಧರ್ಮ'ದ ಯಾವುದೇ ರೀತಿಯ ಅಪವಿತ್ರತೆಯನ್ನು ತಡೆಯಲು ನಾವೆಲ್ಲರೂ ಒಗ್ಗೂಡಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಪ್ರಕಾಶ್ ರಾಜ್ ಟೀಕೆ : ಪವನ್ ಕಲ್ಯಾಣ್ ಪೋಸ್ಟ್ ಬಗ್ಗೆ ಪ್ರಕಾಶ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಪ್ರೀತಿಯ ಪವನ್ ಕಲ್ಯಾಣ್... ನೀವು ಉಪಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಇದು ನಡೆದಿದೆ. ದಯವಿಟ್ಟು ಈ ಬಗ್ಗೆ ತನಿಖೆ ಮಾಡಿ. ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿ. ನೀವು ಯಾಕೆ ಭಯವನ್ನು ಹರಡಿ ಈ ವಿಷಯವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತಿದ್ದೀರಿ..? ಮೊದಲೇ ರಾಷ್ಟ್ರದಲ್ಲಿ ಸಾಕಷ್ಟು ಕೋಮು ಉದ್ವಿಗ್ನತೆ ಇದೆ." ಎಂದು ಪ್ರಕಾಶ್ ರಾಜ್ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News