Diabetes: ಯಾವ ಔಷಧಿಯೂ ಬೇಡ.. ಮಜ್ಜಿಗೆಗೆ ಈ ಪುಡಿ ಬೆರಸಿ ಕುಡಿಯಿರಿ ಸಾಕು! ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ

Diabetes Tips: ಮಧುಮೇಹ ಇದು ಇತ್ತೀಚೆಗೆ ಎಲ್ಲರಿಗೂ ಕಾಡುತ್ತಿರುವ ಸಾಮಾನ್ಯ ತಲೆನೋವು. ದಿನನಿತ್ಯ ಬ್ಲಡ್‌ ಶುಗರ್‌ನಲ್ಲಿ ಏರಿಳಿತ, ಶುಗರ್‌ ಕಂಟ್ರೋಲ್‌ನಲ್ಲಿಡಲು ನಾನಾ ರೀತಿಯ ಔಷಧಿಯ ಬಳಕೆ ಮಾಡಲಾಗುತ್ತದೆ. ಆದರೆ ಔಷಧಿಯ ಬಳಕೆಯ ನಂತರವೂ ಕೂಡ ಕೆಲವು ಸಂದರ್ಭಗಳಲ್ಲಿ ಶುಗರ್‌ ಅನ್ನು ಕಂಟ್ರೋಲ್‌ಗೆ ತರುವುದು ಕಷ್ಟವಾಗಿರುತ್ತದೆ. ಇಂತಹ ಸಮಯದಲ್ಲಿ ಮಜ್ಜಿಗೆಗೆ ಜಸ್ಟ್‌ ಈ ಪುಡಿ ಬೆರಸಿ ಕುಡಿದರೆ ಬ್ಲಡ್‌ ಶುಗರ್‌ ನಾರ್ಮಲ್‌ ಆಗಿ ಇರುತ್ತದೆ.
 

1 /8

 ಮಧುಮೇಹ ಇದು ಇತ್ತೀಚೆಗೆ ಎಲ್ಲರಿಗೂ ಕಾಡುತ್ತಿರುವ ಸಾಮಾನ್ಯ ತಲೆನೋವು. ದಿನನಿತ್ಯ ಬ್ಲಡ್‌ ಶುಗರ್‌ನಲ್ಲಿ ಏರಿಳಿತ, ಶುಗರ್‌ ಕಂಟ್ರೋಲ್‌ನಲ್ಲಿಡಲು ನಾನಾ ರೀತಿಯ ಔಷಧಿಯ ಬಳಕೆ ಮಾಡಲಾಗುತ್ತದೆ. ಆದರೆ ಔಷಧಿಯ ಬಳಕೆಯ ನಂತರವೂ ಕೂಡ ಕೆಲವು ಸಂದರ್ಭಗಳಲ್ಲಿ ಶುಗರ್‌ ಅನ್ನು ಕಂಟ್ರೋಲ್‌ಗೆ ತರುವುದು ಕಷ್ಟವಾಗಿರುತ್ತದೆ. ಇಂತಹ ಸಮಯದಲ್ಲಿ ಮಜ್ಜಿಗೆಗೆ ಜಸ್ಟ್‌ ಈ ಪುಡಿ ಬೆರಸಿ ಕುಡಿದರೆ ಬ್ಲಡ್‌ ಶುಗರ್‌ ನಾರ್ಮಲ್‌ ಆಗಿ ಇರುತ್ತದೆ.

2 /8

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಕ್ರಮೇಣ ಮಧುಮೇಹವನ್ನು ನಿಯಂತ್ರಿಸಲು ಹಾಲಕಾಯಿಯ ಪುಡಿಯನ್ನು ಮಿಕ್ಸ್‌ ಮಾಡಿ ಕುಡಿಯಬೇಕು. ಇದರಿಂದ ನೀವು ಸಾಕಷ್ಟು ಬದಲಾವಣೆ ಕಾಣ ಬಹುದು. 

3 /8

ಹಾಗಲಕಾಯಿಯನ್ನು ಸೇವಿಸುವುದರಿಂದ ಶುಗರ್‌ ಕಂಟ್ರೋಲ್‌ಗೆ ಬರುತ್ತದೆ ಎನ್ನು ನಂಬಿಕೆ ಹಲವರಲ್ಲಿದೆ, ಮಧುಮೇಹವನ್ನು ನಾವು ಕೇವಲ ಮನೆಮದ್ದುಗಳಿಂದ ಮಾತ್ರ ನಿಯಂತ್ರಿಸಲು ಸಾಧ್ಯವೇ ಇಲ್ಲ, ಇದಕ್ಕೆ ಔಷಧಿ ಬೇಕೇ ಬೇಕು. ಆದರೆ ಈ ಔಷಧಿಗಳೊಂದಿಗೆ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಲು, ಮನೆಮದ್ದುಗಳು ಸಹಾಯ ಮಾಡುತ್ತದೆ.

4 /8

ಹಾಗಲಕಾಯಿಯಲ್ಲಿನ  'ಕ್ಯಾರೋಟಿನ್' ಮತ್ತು 'ಮಾಮೊರ್ಡಿಸಿನ್' ಎಂಬ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹಾಗಲಕಾಯಿಯ ಬೀಜಗಳಲ್ಲಿ ಪಾಲಿಪೆಪ್ಟೈಡ್-ಪಿ ಎಂಬ ಇನ್ಸುಲಿನ್ ತರಹದ ವಸ್ತುವೂ ಇದೆ. ಇದು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಸ್ವಲ್ಪ ಮಟ್ಟಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.

5 /8

ಹಾಗಲಕಾಯಿಯನ್ನು ಜ್ಯೂಸ್ ಮಾಡಿ ಕುಡಿಯಬಹುದು. ಅಥವಾ ಇದರಲ್ಲಿ ಪಲ್ಯ ಮಾಡಿ ಸೇವಿಸಬಹುದು. ಹಾಗಲಕಾಯಿಯನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಶೇಕರಿಸಿ ಇಡಿ. ಒಂದು ಲೋಟ ಮಜ್ಜಿಗೆಯಲ್ಲಿ ಒಂದು ಚಮಚ ಹಾಗಲಕಾಯಿ ಪುಡಿಯನ್ನು ಮಿಕ್ಸ್‌ ಮಾಡಿ ಕುಡಿಯಬಹುದು. ಈ ಪುಡಿ ಮಾರುಕಟ್ಟೆಯಲ್ಲಿ ಕೂಡ ಸಿಗುತ್ತದೆ, ಆದರೆ ಇದನ್ನು ಮನೆಯಲ್ಲಿಯೇ ಮಾಡುವುದು ಉತ್ತಮ.

6 /8

ಹಾಗಲಕಾಯಿಯನ್ನು  ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೆ, ಶೀತ, ಕೆಮ್ಮು ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. 

7 /8

ಹಾಗಲಕಾಯಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುವ ಕಾರಣ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಷ್ಟೆ ಅಲ್ಲದೆ  ಕೊಬ್ಬಿನಂಶವನ್ನು ಕಡಿಮೆ ಮಾಡಿ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

8 /8

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ