ನಿತ್ಯ ನೀರು ಹಾಕುತ್ತಿದ್ದರೂ ಮನೆಯಂಗಳದ ತುಳಸಿ ಒಣಗುತ್ತಿದ್ದರೆ ಸ್ವಯಂ ಲಕ್ಷ್ಮೀಯೇ ಈ ಸಂದೇಶ ನೀಡುತ್ತಿದ್ದಾಳೆ ಎಂದರ್ಥ!ತಕ್ಷಣ ಈ ಕೆಲಸ ಮಾಡಿ

ಉಳಿದ ಎಲ್ಲಾ ಸಸ್ಯಗಳು ಉತ್ತಮ ಸ್ಥಿತಿಯಲ್ಲಿದ್ದು,ಮನೆಯ ತುಳಸಿ ಮಾತ್ರ ಬಾಡಿ ಹೋಗುತ್ತಿದೆ ಅಥವಾ ಸೊರಗುತ್ತಿದೆ ಎಂದಾದರೆ,ಇದು ಭವಿಷ್ಯದ ಸಮಸ್ಯೆಗಳನ್ನು ಸೂಚಿಸುತ್ತದೆ.

ಬೆಂಗಳೂರು : ಪ್ರತಿ ಭಾರತೀಯ ಮನೆಯ ಅವಿಭಾಜ್ಯ ಅಂಗವಾಗಿದೆ. ಪ್ರತಿ ಮನೆಯ ಅಂಗಳದಲ್ಲಿ ತುಳಸಿ ಸಸಿ ಇದ್ದೇ ಇರುತ್ತದೆ.ತುಳಸಿ ಅಂದರೆ ಲಕ್ಷ್ಮೀ. ಪ್ರತೀ ಮನೆಯಲ್ಲೂ ಮುಂಜಾನೆ ಮತ್ತು ಮುಸ್ಸಂಜೆ ತುಳಸಿಗೆ ಪೂಜೆ ನೆರವೇರಿಸಲಾಗುತ್ತದೆ. ಪವಿತ್ರ ತುಳಸಿ ಗಿಡವನ್ನು ಮನೆಯಂಗಳದಲ್ಲಿ ನೆಡುವುದರಿಂದ  ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ತುಳಸಿ ಇರುವ ಪ್ರತಿ ಮನೆಯಲ್ಲಿಯೂ ದಿನಕ್ಕೆ ಎರಡು ಬಾರಿ ಅಂದರೆ ಮುಂಜಾನೆ ಮತ್ತು ಮುಸ್ಸಂಜೆ ತುಳಸಿಗೆ ಪೂಜೆ ಮಾಡಲಾಗುತ್ತದೆ. ನಿತ್ಯ ಮುಂಜಾನೆ ತುಳಸಿಗೆ ನೀರು ಅರ್ಪಿಸುವುದು ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ನಡೆಯುತ್ತದೆ. 

2 /8

ಆದರೆ ಕೆಲವೊಮ್ಮೆ ದಿನನಿತ್ಯ  ತುಳಸಿ ಸಸ್ಯಕ್ಕೆ ನೀರು ಅರ್ಪಿಸಿದರೂ ತುಳಸಿ ಬಾಡುತ್ತಾ ಬರುತ್ತದೆ. ಸರಿಯಾಗಿ ನೀರು, ಸೂರ್ಯನ ಬೆಳಕು ಬೀಳುತ್ತಿದ್ದರೂ ತುಳಸಿ ಒಣಗುವುದಕ್ಕೆ ಶುರುವಾಗುತ್ತದೆ.   

3 /8

ಉಳಿದ ಎಲ್ಲಾ ಸಸ್ಯಗಳು ಉತ್ತಮ ಸ್ಥಿತಿಯಲ್ಲಿದ್ದು,ಮನೆಯ ತುಳಸಿ ಮಾತ್ರ ಬಾಡಿ ಹೋಗುತ್ತಿದೆ ಅಥವಾ ಸೊರಗುತ್ತಿದೆ ಎಂದಾದರೆ,ಇದು ಭವಿಷ್ಯದ ಸಮಸ್ಯೆಗಳನ್ನು ಸೂಚಿಸುತ್ತದೆ.  

4 /8

ನಾವು ಪೂಜಿಸುವ ತುಳಸಿ ಯಾವತ್ತೂ ಒಣಗಬಾರದು.ತುಳಸಿ ಅಂದರೆ ಲಕ್ಷ್ಮೀ ನೆಲೆಯಾಗಿರುವ ಮನೆಗೆ ಏನಾದರೂ ಸಮಸ್ಯೆಗಳು ಎದುರಾದರೆ, ಆ ಸಮಸ್ಯೆಯ ತಾಪವನ್ನು ಮೊದಲು ತುಳಸಿ ತನ್ನತ್ತ ಸೆಳೆದುಕೊಳ್ಳುತ್ತಾಳಂತೆ.ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಿ ಹೋಗುತ್ತದೆ ಎನ್ನಲಾಗಿದೆ.   

5 /8

ಇನ್ನೊಂದು ನಂಬಿಕೆಯ ಪ್ರಕಾರ, ಮನೆಗೆ ಸಮಸ್ಯೆಗಳು ಎದುರಾಗುವುದಾದರೆ ಮೊದಲು ಲಕ್ಷ್ಮೀ ಸಮಾನಳಾಗಿರುವ ತುಳಸಿ ಎದ್ದು ನಡೆಯುತ್ತಾಳೆ ಎನ್ನುವುದು. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಲು ಆರಂಭಿಸಿದರೆ ಅಶುಭ ಸಂಭವಿಸಲಿದೆ ಎಂದೇ ಅರ್ಥ. 

6 /8

ತುಳಸಿ ಸಸಿ  ಒಣಗುವುದಕ್ಕೂ ಬುಧ ಗ್ರಹಕ್ಕೂ ಸಂಬಂಧವಿದೆ.ಜ್ಯೋತಿಷ್ಯದ ಪ್ರಕಾರ, ಬುಧನ ಬಣ್ಣ ಹಸಿರು.ಯಾವುದೇ ಗ್ರಹವು ಅಶುಭ ಫಲಗಳನ್ನು ನೀಡುವುದಾದರೆ, ಇದರ ಪ್ರಭಾವ ಮೊದಲು ಗ್ರಹಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಆಗುತ್ತದೆ. ತುಳಸಿ ಕೂಡಾ ಬುಧ ಗ್ರಹಕ್ಕೆ ಸಂಬಂಧಿಸಿದ್ದು.  

7 /8

ತುಳಸಿ ಗಿಡ ಒಣಗಿದೆ ಎನ್ನುವುದು ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆದು ಹರಿಯುವ ನೀರಿನಲ್ಲಿ ಬಿಡಿ.ಹೊಸ ತುಳಸಿ ಸಸ್ಯವನ್ನು ನೆಡಿ.ನೀರು ಅರಶಿನ, ಕುಂಕುಮ ಹಚ್ಚಿ ಮತ್ತೆ ಎಂದಿನಂತೆ ಪೂಜೆ ಮಾಡುವ ಕಾರ್ಯವನ್ನು ಆರಂಭಿಸಿ.

8 /8

ಸೂಚನೆ:ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.