ಈ 1 ಕಷಾಯ ಕುಡಿದರೆ ಕೊಲೆಸ್ಟ್ರಾಲ್, ಮಧುಮೇಹ, ಸೇರಿದಂತೆ 5 ಕಾಯಿಲೆಗಳು ಗುಣವಾಗುತ್ತವೆ..!

Betel leaves Health benefits : ವೀಳ್ಯದೆಲೆಗಳ ಕಷಾಯವನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರ ಕಷಾಯ ಮಾಡಿ ಸೇವಿಸಿದರೆ 5 ಗಂಭೀರ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ..
 

1 /8

ವೀಳ್ಯದೆಲೆಗಳನ್ನು ಹೆಚ್ಚಾಗಿ ಸುಣ್ಣ ಮತ್ತು ಅಡಿಕೆ ಬೆರಸಿ ಸೇವಿಸಲಾಗುತ್ತದೆ. ಈ ಎಲೆಯನ್ನು ಅಗಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ ತಂಬಾಕು ಮುಂತಾದವುಗಳನ್ನು ಸೇರಿಸಿ ತಿಂದರೆ ಹಾನಿಯಾಗುತ್ತದೆ. ಎಲೆಗಳನ್ನು ಹೀಗೆ ಉಪಯೋಗಿಸುವ ಬದಲು ಕಷಾಯ ಮಾಡಿ ಸೇವಿಸಿದರೆ ದೇಹಕ್ಕೆ ಆರೋಗ್ಯ ಎಂಬುದು ಸಾಬೀತಾಗುತ್ತದೆ. ಈ ಕಷಾಯ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ನೆಗಡಿ ಮತ್ತು ಕೆಮ್ಮುಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಈ ಎಲೆಯ ಕಷಾಯವನ್ನು ಕುಡಿದರೆ 5 ಸಮಸ್ಯೆಗಳು ದೂರವಾಗುತ್ತವೆ.   

2 /8

ಈ ಎಲೆಯಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಈ ಎಲೆಯಲ್ಲಿರುವ ಯುಜೆನಾಲ್ ಹೆಚ್ಚಿನ ಲಿಪಿಡ್ ಮಟ್ಟವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಈ ಕಷಾಯವನ್ನು ಕುಡಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳೂ ದೂರಾಗುತ್ತವೆ.

3 /8

ಈ ಎಲೆಯ ಕಷಾಯವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ. ಈ ಎಲೆಯು ಮಧುಮೇಹ-ವಿರೋಧಿ ಗುಣಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.   

4 /8

ಈ ಎಲೆಯ ಕಷಾಯವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ. ಈ ಎಲೆಯು ಮಧುಮೇಹ-ವಿರೋಧಿ ಗುಣಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.   

5 /8

ಈ ಎಲೆಯ ಕಷಾಯವನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕವೂ ಕಡಿಮೆಯಾಗುತ್ತದೆ. ಈ ಎಲೆಯ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ಕ್ಯಾಟೆಕೋಲ್ ಮೈನ್ಸ್ ಬಿಡುಗಡೆಯಾಗುತ್ತದೆ, ಇದು ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.   

6 /8

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ಈ ಎಲೆಯ ಕಷಾಯವನ್ನು ಸೇವಿಸಬೇಕು. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಈ ಎಲೆಯ ಕಷಾಯವನ್ನು ಕುಡಿಯುವುದರಿಂದ ಮಲಬದ್ಧತೆಯೂ ನಿವಾರಣೆಯಾಗುತ್ತದೆ. ಅಲ್ಲದೆ, ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳು ಬರುವುದಿಲ್ಲ. 

7 /8

ಈ ಎಲೆಯ ಕಷಾಯವನ್ನು ತಯಾರಿಸಲು, ಒಂದು ಲೋಟ ನೀರಿನಲ್ಲಿ ಎರಡರಿಂದ ಮೂರು ಎಲೆಗಳನ್ನು ಸೇರಿಸಿ. ಅದರ ನಂತರ, ಕಡಿಮೆ ಶಾಖದಲ್ಲಿ ನೀರನ್ನು ಕುದಿಸಿ. ಅರ್ಧದಷ್ಟು ನೀರು ಆವಿಯಾದಾಗ ಸೋಸಿ ತಣ್ಣಗಾಗಿಸಿ ನಂತರ ಸೇವಿಸಿ.  

8 /8

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)