ಬಿಗ್‌ಬಾಸ್‌ ಮನೆಯಿಂದ ಲಾಯರ್‌ ಜಗದೀಶ್‌ ಔಟ್‌..!? ಕಿಚ್ಚ Vs ವಕೀಲ್‌ ವಾರ್‌..!!

Bigg Boss Lawyer Jagadish : ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್‌ ಜಗದೀಶ್‌ ಗಲಾಟೆ ಹೆಚ್ಚಾಗುತ್ತಲೇ ಇದೆ. ಇಡೀ ಮನೆ ಮಂದಿ ವಕೀಲನ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲದೆ, ಕಿತ್ತಾಟ ಆಡುತ್ತಲೇ ಇಡೀ ಮನೆ ಮಂದಿಯ ನೆಮ್ಮದಿ ಹಾಳುಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸ್ಪರ್ಧಿಗಳು ಮಾಡುತ್ತಿದ್ದಾರೆ.. 
 

1 /9

ಬಿಗ್ ಬಾಸ್ ಕನ್ನಡ ಸೀಸನ್‌ 11 (Bigg Boss Kannada Season 11) ದಿನದಿಂದ ದಿನಕ್ಕೆ ಕುತೂಹಲಕಾರಿಯಾಗುತ್ತಿದೆ.  

2 /9

ಲಾಯರ್‌ ಜಗದೀಶ್‌ ಹೊರಗೆ ಎಷ್ಟು ರೆಬಲ್‌ ಆಗಿದ್ದರೋ ಅಷ್ಟೇ ಆಂಗ್ರಿಮ್ಯಾನ್‌ ಆಗಿ ದೊಡ್ಮನೆಯಲ್ಲಿ ನಡೆದುಕೊಳ್ಳುತ್ತಿದ್ದಾರೆ.  

3 /9

ಅಲ್ಲದೆ, ನನಗೆ ನಾನೇ ಬಿಗ್‌ಬಾಸ್‌. ನನ್ನನ್ನು ಹೊರಗೆ ಕಳಿಸೋದು ಬೆಸ್ಟ್.. ಇಲ್ಲಾ ಅಂದ್ರೆ ಅಂತ ಸಿಟ್ಟಿನಲ್ಲಿ ಬಿಗ್‌ಬಾಸ್‌ಗೆ ಅವಾಜ್‌ ಹಾಕಿದ್ದಾರೆ..  

4 /9

ಇತ್ತೀಚಿಗೆ ಮನೆ ಮಂದಿ ಜೊತೆ ಜಗಳಕ್ಕೆ ಬಿದ್ದ ವಕೀಲ್‌ ನಾನು ಮನಸ್ಸು ಮಾಡಿದರೆ ನಿಮಗೆಲ್ಲಾ ಹೆಲಿಕಾಪ್ಟರ್‌ನಲ್ಲಿ ಊಟ ತರಿಸ್ತೀನಿ, ನನಗೆ ನಾನೇ ಬಿಗ್‌ ಬಾಸ್‌ ಅಂತ ಕೊಚ್ಚಿಕೊಂಡಿದ್ದಾರೆ.. ಈ ಕುರಿತ ದೃಶ್ಯ ಇತ್ತೀಚಿಗೆ ರಿಲೀಸ್‌ ಆದ ಪ್ರೋಮೋದಲ್ಲಿದೆ..  

5 /9

ಕ್ಯಾಮರಾಗೆ ಮುಂದೆ ಬಂದ ಲಾಯರ್‌, ನನಗೆ ಇಲ್ಲಿ ಇರಲು ಇಷ್ಟವಿಲ್ಲ, ನನ್ನ ಹೊರಗೆ ಕಳುಹಿಸಿ.. ಇಲ್ಲದಿದ್ದರೆ, ಒಳಗಡೆ ಏನೆಲ್ಲಾ ಮಾಫಿಯಾ ನಡೆಸುತ್ತಿದ್ದೀರಿ ಎಲ್ಲವೂ ಎಕ್ಸ್‌ಪೋಸ್‌ ಮಾಡುತ್ತೇನೆ.., ನಾನು ಸರ್ಕಾರವನ್ನೇ ಅಲುಗಾಡಿಸುವ ವ್ಯಕ್ತಿ ಅಂತ ಅವಾಜ್‌ ಹಾಕಿದ್ದಾರೆ..  

6 /9

ಅಲ್ಲದೆ, ಈ ಕಾರ್ಯಕ್ರಮವನ್ನು ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರನ್ನು ಬೇರೆ ಇಡಿ., ನನ್ನನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್‌ ನಡೆಸುತ್ತೀರಾ..?, ನನ್ನನ್ನು ಹೊರಗೆ ಕಳಿಸಿ" ಎಂದು ಕಿರುಚಾಡಿದ್ದರು ಜಗದೀಶ್‌..   

7 /9

ಇನ್ನು ಲಾಯರ್‌ ಜಗದೀಶ್‌ ಅವರ ಅತಿಯಾದ ವರ್ತನೆ ನೋಡುಗರಿಗೆ ಬೇಸರ ತರಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಜಗದೀಶ್‌ ವಿರುದ್ಧ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ..  

8 /9

ಜಗದೀಶ್ ಅವರನ್ನು ಬಿಗ್ ಬಾಸ್‌ಗೆ ಕರೆದುಕೊಂಡು ಬಂದಿದ್ದು ದೊಡ್ಡ ತಪ್ಪು.. ಬಿಗ್‌ ಬಾಸ್‌ ಈ ಸ್ಪರ್ಧಿಯನ್ನು ಎಲಿಮಿನೇಟ್‌ ಮಾಡಿ ಆಚೆ ಕಳಿಸಲಿಲ್ಲ ಅಂದ್ರೆ ನಿಮಗೆ ಮರ್ಯಾದೆ ಇರೋದಿಲ್ಲ ಸೇರಿದಂತೆ ಹಲವಾರು ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ..  

9 /9

ಇದರ ನಡುವೆ ಈ ವೀಕೆಂಡ್‌ನಲ್ಲಿ ಕಿಚ್‌ ಸುದೀಪ್‌ ಮತ್ತು ವಕೀಲ ಜಗದೀಶ್‌ ನಡುವೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಹೆಚ್ಚಿದೆ.. ಕಿಚ್ಚನ ತಲೆ ಕೆಟ್ರೆ ಲಾಯರ್‌ ಲಗೇಜ್‌ ಸಮೇತ ಮನೆಗೆ ಹೋಗಬೇಕಾಗುತ್ತದೆ.. ಆದ್ರೆ ಜಗದೀಶ್‌ ತಮ್ಮ ಮಾತಿಗೆ ಯಾವ ರೀತಿ ಪ್ರತಿಕ್ರಿಯೆ ಮತ್ತು ಸ್ಪಷ್ಟತೆ ನೀಡುತ್ತಾರೆ ಎನ್ನುವುದನ್ನ ಕಾಯ್ದು ನೋಡಬೇಕಿದೆ..