ಕಾಂಗ್ರೆಸ್ ಪಕ್ಷದ್ದು ಓಲೈಕೆಯ ರಾಜಕಾರಣ- ಅಮಿತ್ ಶಾ

     

Last Updated : Jan 25, 2018, 04:12 PM IST
ಕಾಂಗ್ರೆಸ್ ಪಕ್ಷದ್ದು ಓಲೈಕೆಯ ರಾಜಕಾರಣ- ಅಮಿತ್ ಶಾ title=
ಸಂಗ್ರಹ ಚಿತ್ರ

ಮೈಸೂರು: ಗುರುವಾರದಂದು ಮಹಾರಾಜ ಕಾಲೇಜಿನಲ್ಲಿ ಮೈದಾನದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾರವರು ಕಾಂಗ್ರೆಸ್ ಪಕ್ಷವು ಓಲೈಕೆಯ ರಾಜಕಾರಣ ಮಾಡುತ್ತದೆ ಎಂದು ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 

ಕಾಂಗ್ರೇಸ್ ಪಕ್ಷವು 60 ವರ್ಷಗಳಲ್ಲಿ ಮಾಡಲಾಗದ್ದನ್ನು ಬಿಜೆಪಿ ಮಾಡಿದೆ, ಮೋದಿಯವರು ಕಳುಹಿಸಿದ ಎಲ್ಲಾ  ಹಣವನ್ನು ಸಿದ್ದರಾಮಯ್ಯನವರು ನುಂಗಿಹಾಕಿದ್ದಾರೆ. ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯನವರು 70 ಲಕ್ಷ ರೂಪಾಯಿಯ ವಾಚನ್ನು ಕಟ್ಟುತ್ತಾರೆ, ಅಲ್ಲದೆ ಅನ್ನಭಾಗ್ಯದ ಹೆಸರಿನಲ್ಲಿ ಬಡವರಿಗೆ ನೀಡುವ ಅಕ್ಕಿಬೆಳೆಯಲ್ಲಿ  ಭಾರಿ ಹಗರಣ ಮಾಡಿದ್ದಾರೆ, ಎಂದು ಅಮಿತ್ ಶಾ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. 

ಇದೆ ಸಂದರ್ಭದಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಜೆಪಿ ಕಾರ್ಯಕರ್ತರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು  21 ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ತಿಳಿಸಿದರು. 

Trending News