/kannada/photo-gallery/gruhalakshmi-money-release-date-this-month-249277 ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ? 249277

ಅಲ್ಪಸಂಖ್ಯಾತರ ಸುತ್ತೋಲೆ ವಿಷಯದಲ್ಲಿ ಬಿಜೆಪಿಯವರು ಸುಮ್ಮನೆ ರಾದ್ಧಾಂತ ಮಾಡುತ್ತಿದ್ದಾರೆ- ಸಚಿವ ರಾಮಲಿಂಗ ರೆಡ್ಡಿ

   

Last Updated : Jan 27, 2018, 06:01 PM IST
ಅಲ್ಪಸಂಖ್ಯಾತರ ಸುತ್ತೋಲೆ ವಿಷಯದಲ್ಲಿ ಬಿಜೆಪಿಯವರು ಸುಮ್ಮನೆ ರಾದ್ಧಾಂತ ಮಾಡುತ್ತಿದ್ದಾರೆ-  ಸಚಿವ ರಾಮಲಿಂಗ ರೆಡ್ಡಿ title=

ಬೆಂಗಳೂರು: ಅಲ್ಪಸಂಖ್ಯಾತರ ಸುತ್ತೋಲೆ ವಿಷಯದಲ್ಲಿ ಬಿಜೆಪಿಯವರು ಸುಮ್ಮನೆ ರಾದ್ಧಾಂತ ಮಾಡುತ್ತಿದ್ದಾರೆ, ಸರ್ಕಾರವು ಅಲ್ಪಸಂಖ್ಯಾತರ ಸಮುದಾಯಗಳ ವಿರುದ್ದ ದಾಖಲಾದ ಪ್ರಕರಣಗಳ ಬಗ್ಗೆ ಎಲ್ಲ ಜಿಲ್ಲಾ ಪೋಲಿಸ್ ಅಧಿಕಾರಿಗಳಿಗೆ ಜ್ನಾಪಕಪತ್ರವನ್ನು ಮಾತ್ರ ಬರೆದಿದ್ದು, ಈ ವಿಷಯವಾಗಿ ಬಗ್ಗೆ ಬಿಜೆಪಿಯು ಸುಮ್ಮನೆ ಆರೋಪ ಮಾಡುತ್ತಿದೆ ಎಂದು ಗೃಹ ಸಚಿವ ರಾಮಲಿಂಗ ರೆಡ್ಡಿ ಟೀಕಿಸಿದ್ದಾರೆ.

ಕೋಮುಗಲಭೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯಗಳ ವಿರುದ್ಧದ ದಾಖಲಾದ ಪ್ರಕರಣಗಳ ಬಗ್ಗೆ  ಎಲ್ಲ ಜಿಲ್ಲಾ ಪೋಲಿಸ್ ಮುಖ್ಯಸ್ಥರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಸರ್ಕಾರ ಅವರಿಗೆ ಜ್ಞಾಪಕ ಪತ್ರವನ್ನು ಮಾತ್ರ ಕಳುಹಿಸಿದೆ, ಆದರೆ ಬಿಜೆಪಿಯವರು ಇದನ್ನು ಸುತ್ತೋಲೆ ಎಂದು ರಾದ್ದಾಂತ ಮಾಡುತ್ತಿದ್ದಾರೆ ಎಂದು ತಿಳಿಸಿದರು.   

ಬಿಜೆಪಿಯವರಿಗೆ ಇಂಗ್ಲಿಷನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ, ಆದ್ದರಿಂದಾಗಿ ಇದನ್ನು ಅವರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದರು. ಅಲ್ಪಸಂಖ್ಯಾತರ ವಿರುದ್ಧವಾಗಿ ಕೆಲವು ಸುಳ್ಳು ಪ್ರಕರಣಗಳನ್ನು ದಾಖಲಾಗಿವೆ. ಈ ವಿಷಯವಾಗಿ ಚರ್ಚಿಸಲು ಎಲ್ಲ ಜಿಲ್ಲಾ ಪೋಲಿಸ್ ಮುಖ್ಯಸ್ಥರಿಗೆ ಜ್ಞಾಪನ ಪತ್ರ ಬರೆಯಲಾಗಿದೆ ಅಷ್ಟೇ ಎಂದು ಗೃಹ ಸಚಿವರು ಸುದ್ದಿಗಾರಿಗೆ ತಿಳಿಸಿದರು.