ಮಹಾದಾಯಿ ಸಮಸ್ಯೆಗೆ ಸಿದ್ದರಾಮಯ್ಯ ಕಾರಣ-ಅಮಿತ್ ಶಾ

    

Last Updated : May 6, 2018, 06:43 PM IST
ಮಹಾದಾಯಿ ಸಮಸ್ಯೆಗೆ ಸಿದ್ದರಾಮಯ್ಯ ಕಾರಣ-ಅಮಿತ್ ಶಾ title=

ಬೆಳಗಾವಿ: ಇಲ್ಲಿನ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ರವರು ಮಹಾದಾಯಿ ಸಮಸ್ಯೆ ಸಿದ್ದರಾಮಯ್ಯ ಕಾರಣ ಎಂದು ಅವರು ಆಪಾಧಿಸಿದರು.

ಸಿದ್ದರಾಮಯ್ಯನವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದರೆ  ಮಹಾದಾಯಿ ನದಿ ನೀರು  ರೈತರ ಭೂಮಿಗೆ ಹರಿದಿರುತ್ತಿತ್ತು ಎಂದರು. ಇನ್ನು ಮುಂದುವರೆದು ಬಿಜೆಪಿಯ ಯಡಿಯೂರಪ್ಪ ನವರನ್ನು ಅಧಿಕಾರಕ್ಕೆ ತಂದರೆ ಕೇವಲ 6 ತಿಂಗಳಲ್ಲಿ ಮಹಾದಾಯಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದರು.

ಇದಕ್ಕೊ ಮುಂಚೆ ಮಹಾದಾಯಿ ವಿಚಾರವಾಗಿ ಮುಂಬೈ ಕರ್ನಾಟಕದ ಸುಮಾರು 400 ರೈತರು ಇತ್ತೀಚಿಗೆ ರಾಷ್ಟ್ರಪತಿಯವರನ್ನು ಭೇಟಿ ನೀಡಲು ನಿರ್ಧರಿಸಿದ್ದರು.ಈ ವೇಳೆ ಅವರು ದಯಾಮರಣಕ್ಕಾಗಿ ಅರ್ಜಿ ಸಲ್ಲಿಸುವ ನಿರ್ಧಾರವನ್ನು ಕೈಗೊಂಡಿದ್ದರು. ನರಗುಂದ ಮತ್ತು ನವಲಗುಂದ ಪ್ರದೇಶದಲ್ಲಿ ಸುಮಾರು ಮೂರು ವರ್ಷಗಳಿಂದ ರೈತರು ಮಹಾದಾಯಿಗಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ಪ್ರಧಾನಿ ಮೋದಿ ಗದಗನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಈ ಸಮಸ್ಯೆಗೆ ಸೋನಿಯಾ ಗಾಂಧಿ ಕಾರಣ ಎಂದು ಆರೋಪಿಸಿದ್ದರು.

 

Trending News