Vastu tips: ಪ್ರತಿದಿನ ಬೆಳಿಗ್ಗೆ ಈ ಕೆಲಸ ಮಾಡಿದರೆ, ಮನೆಯಲ್ಲಿ ಸದಾ ತುಂಬಿರುತ್ತೆ ಸಂಪತ್ತು-ಸಂತೋಷ

                       

Vastu tips: ಸಂತೋಷ ಮತ್ತು ಸಮೃದ್ಧಿಗಾಗಿ (Prosperity)   ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು (Positive Energy) ಹೊಂದಿರುವುದು ಬಹಳ ಮುಖ್ಯ, ಆದರೆ ವಾಸ್ತು ದೋಷ (Vastu Dosh)  ಸೇರಿದಂತೆ ಹಲವು ಕಾರಣಗಳಿಂದ ಹಲವು ಬಾರಿ ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ, ಮನೆಯಲ್ಲಿ ಹರಡುವ ನಕಾರಾತ್ಮಕತೆಯು (Negativity)  ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದು ಹಣದ ತೊಂದರೆ, ರೋಗಗಳು ಮತ್ತು ದುಃಖಗಳಿಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ (Vastu Shastra), ಮನೆಯ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕಿ ಧನಾತ್ಮಕ ಶಕ್ತಿಯನ್ನು ಪಡೆಯಲು ಕೆಲವು ಖಚಿತವಾದ ಮಾರ್ಗಗಳನ್ನು ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಈ ಸುಲಭ ಕೆಲಸಗಳನ್ನು ಪ್ರತಿದಿನ ಮಾಡಿ: ಮನೆಯಲ್ಲಿ ಯಾವಾಗಲೂ ಸಕಾರಾತ್ಮಕತೆಯನ್ನು ಕಾಯ್ದುಕೊಳ್ಳಲು, ಪ್ರತಿದಿನ ಈ ಪರಿಹಾರಗಳನ್ನು ಮಾಡುವುದು ಅವಶ್ಯಕ. ಈ ಪರಿಹಾರಗಳು ತುಂಬಾ ಸುಲಭ ಮತ್ತು ಅವುಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 

2 /5

ಪ್ರತಿದಿನ ಬೆಳಿಗ್ಗೆ ಮನೆಯ ಬಾಗಿಲನ್ನು ತೊಳೆಯಿರಿ: ಪ್ರತಿದಿನ ಬೆಳಿಗ್ಗೆ ಮನೆಯ ಮುಖ್ಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ. ಇದರ ನಂತರ ಮುಖ್ಯ ಬಾಗಿಲಿನ ಹೊಸ್ತಿಲನ್ನು ಒಂದು ಚಿಟಿಕೆ ಅರಿಶಿನ ಬೆರೆಸಿದ ನೀರಿನಿಂದ ತೊಳೆಯಿರಿ. ಇದನ್ನು ಮಾಡುವುದರಿಂದ, ಲಕ್ಷ್ಮಿ ದೇವಿಯು ಸಂತಸಗೊಂಡು ಸಂಪತ್ತನ್ನು ಸುರಿಸುತ್ತಾಳೆ ಎಂದು ಹೇಳಲಾಗುತ್ತದೆ.

3 /5

ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆ : ಪ್ರತಿದಿನ ಬೆಳಿಗ್ಗೆ ಬಾಗಿಲಿನ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಿರಿ. ಇದರಿಂದ ಮುಖ್ಯ ಬಾಗಿಲಿನಿಂದ ಧನಾತ್ಮಕ ಶಕ್ತಿಯ ಹರಿವು ಯಾವಾಗಲೂ ಇರುತ್ತದೆ. ಈ ಕಾರಣದಿಂದಾಗಿ, ಮನೆಯಲ್ಲಿ ಎಂದಿಗೂ ಹಣ ಮತ್ತು ಆಹಾರದ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಇದನ್ನೂ ಓದಿ- Astrology: ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ ಈ 3 ರಾಶಿಯ ಜನ

4 /5

ಮನೆಯ ಮುಂದೆ ರಂಗೋಲಿ ಬಿಡಿಸಿ : ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಸಣ್ಣ ರಂಗೋಲಿಗಳನ್ನು ಬಿಡಿಸಿ. ಇದು ಬಹಳ ಮಂಗಳಕರ. ಅಂದಹಾಗೆ, ಈ ಕೆಲಸವನ್ನು ಪ್ರತಿದಿನ ಮಾಡಿ, ಆದರೆ ಅದು ಸಾಧ್ಯವಾಗದಿದ್ದರೆ, ವಾರಕ್ಕೊಮ್ಮೆಯಾದರೂ ಮನೆಯ ಮುಂದೆ ನೀರು ಹಾಕಿ ರಂಗೋಲಿ ಬಿಡಿಸಿ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದನ್ನು ತಡೆಯಬಹುದು ಎಂಬ ನಂಬಿಕೆ ಇದೆ. ಇದನ್ನೂ ಓದಿ- Sun Transit October 2021: ಅಕ್ಟೋಬರ್ 17 ರಂದು ಸೂರ್ಯನ ರಾಶಿ ಪರಿವರ್ತನೆ, ಈ 5 ರಾಶಿಯವರಿಗೆ ಸಂಕಷ್ಟ

5 /5

ಕರ್ಪೂರವನ್ನು ಹಚ್ಚಿ: ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಹಚ್ಚಿ ಅದರ ದೂಪ ಮನೆಯಲ್ಲಿ ಹರಡಿ. ವಾಸ್ತು ಪ್ರಕಾರ, ಸಕಾರಾತ್ಮಕತೆಯನ್ನು ತರಲು ಇದು ಖಚಿತವಾದ ಮಾರ್ಗವಾಗಿದೆ.  (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)