ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2017ರ ಗೋರಖ್ ಪುರ ದುರಂತದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಮತ್ತು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ವೈದ್ಯ ಕಫೀಲ್ ಖಾನ್ ಆರೋಪಿಸಿದರು.
ಯೋಗಿ ಅವರು ಆಸ್ಪತ್ರೆಯಲ್ಲಿ ಆಕ್ಸಿಜೆನ್ ಕೊರತೆ ಇರಲಿಲ್ಲ ಎನ್ನುವ ಹೇಳಿಕೆಗೆ ಕಿಡಿಕಾರಿದ ಅವರು " ಸಿಎಂ ಹೇಳುತ್ತಿರುವುದು ಸುಳ್ಳು ಆಕ್ಸಿಜೆನ್ ವಿತರಣೆ ಮಾಡುವವರು ಆಸ್ಪತ್ರೆಯ ಪಧಾದಿಕಾರಿಗಳಿಗೆ ಪತ್ರ ಬರೆದು ವಿತರಣೆಯನ್ನು ಮುಂದೆವರಿಸಲು ಈ ಹಿಂದಿನ ಬಾಕಿಯನ್ನು ತೀರಿಸಬೇಕೆಂದು ಹೇಳಿದ್ದರು" ಎಂದು ವೈದ್ಯ ಕಫೀಲ್ ತಿಳಿಸಿದ್ದಾರೆ.
ಬಾಬಾ ರಾಘವ ವೈದ್ಯಕೀಯ ಕಾಲೇಜನಲ್ಲಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಕಫೀಲ್ ಖಾನ್ ಅವರ ವಿರುದ್ದ ಕೇಸ್ ದಾಖಲಾಗಿತ್ತು ಇತ್ತೀಚಿಗಷ್ಟೇ ಅವರು ಜೈಲಿನಿಂದ ಹೊರಬಂದಿದ್ದರು.