/kannada/photo-gallery/shubha-yoga-will-be-formed-by-venus-mercury-conjunction-people-of-this-zodiac-sign-will-get-a-lot-of-wealth-249438 ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ!  ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ! 249438

Crime News : ಶೌಚಾಲಯದಿಂದ ಬೇಗ ಬರಲಿಲ್ಲ ಎಂದು ತಮ್ಮನನ್ನೇ ಕೊಂದ ಅಣ್ಣಯ್ಯ.!

Crime News: ಆಸ್ತಿ ವಿವಾದದ ಸಂಬಂಧ ನಡೆದ ರಕ್ತಪಾತದ ಸುದ್ದಿಯನ್ನು ನೀವು ಕೇಳಿರಬಹುದು. ಆದರೆ ಇಂದೋರ್‌ನಲ್ಲಿ ನಡೆದ ಈ ಕೊಲೆ ಪ್ರಕರಣದ ಹಿಂದಿನ ಕಾರಣದ ಬಗ್ಗೆ ಯಾರೇ ಕೇಳಿದ್ರೂ ಒಮ್ಮೆ ಅಚ್ಚರಿ ಪಡ್ತಾರೆ.

Written by - Chetana Devarmani | Last Updated : Oct 14, 2022, 10:15 AM IST
  • ಆಸ್ತಿ ವಿವಾದದ ಸಂಬಂಧ ನಡೆದ ರಕ್ತಪಾತದ ಸುದ್ದಿಯನ್ನು ನೀವು ಕೇಳಿರಬಹುದು
  • ಈ ಕೊಲೆ ಪ್ರಕರಣದ ಹಿಂದಿನ ಕಾರಣದ ಬಗ್ಗೆ ಯಾರೇ ಕೇಳಿದ್ರೂ ಒಮ್ಮೆ ಅಚ್ಚರಿ ಪಡ್ತಾರೆ
  • ಶೌಚಾಲಯದಿಂದ ಬೇಗ ಬರಲಿಲ್ಲ ಎಂದು ತಮ್ಮನನ್ನೇ ಕೊಂದ ತಮ್ಮ
Crime News : ಶೌಚಾಲಯದಿಂದ ಬೇಗ ಬರಲಿಲ್ಲ ಎಂದು ತಮ್ಮನನ್ನೇ ಕೊಂದ ಅಣ್ಣಯ್ಯ.! title=
ಕೊಲೆ ಪ್ರಕರಣ

Crime News: ಮಧ್ಯಪ್ರದೇಶದ ವ್ಯಾಪಾರ ನಗರಿ ಇಂದೋರ್‌ನಲ್ಲಿ, ಶೌಚಾಲಯದಿಂದ ಹೊರಬರಲು ತಡವಾದ ಕಾರಣಕ್ಕೆ ಅಣ್ಣ ತಮ್ಮನನ್ನು ಕೊಂದಿದ್ದಾನೆ. ಸ್ಥಳೀಯ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಇಬ್ಬರು ಸಹೋದರರಾದ ಮಾಜಿದ್ ಮತ್ತು ಅಬ್ದುಲ್ ಹಮೀದ್ ಅವರ ಕುಟುಂಬವು ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಜುನಾ ರಿಸಾಲಾ ರಸ್ತೆ ಸಂಖ್ಯೆ ಒಂದರಲ್ಲಿ ವಾಸಿಸುತ್ತಿವೆ. ಈ ಕುಟುಂಬವು ಸುಮಾರು ಮೂವತ್ತು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ದಸರಾ ರಜೆಯಲ್ಲಿ ಗರ್ಭಪಾತಕ್ಕೆ ಕರೆತಂದು ಶಿಕ್ಷಕ ಎಸ್ಕೇಪ್!

ವಾಸ್ತವವಾಗಿ ಈ ಕೊಲೆಗೆ ಶೌಚಾಲಯವೇ ಮುಖ್ಯ ಕಾರಣ. ಈ ಶೌಚಾಲಯಕ್ಕೆ ಸಂಬಂಧಿಸಿದಂತೆ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಬುಧವಾರದಂದು ವಿವಾದ ಎಷ್ಟರಮಟ್ಟಿಗೆ ಹೆಚ್ಚಿತೆಂದರೆ ಒಬ್ಬ ಸಹೋದರನ ಪ್ರಾಣವೇ ಬಲಿಯಾಯಿತು. ಅಣ್ಣ ಶೌಚಾಲಯದ ಹೊರಗೆ ಕಾಯುತ್ತಿದ್ದ, ಕಿರಿಯ ಸಹೋದರ ಶೌಚಾಲಯದಿಂದ ಹೊರಗೆ ಬರುತ್ತಿಲ್ಲ. ಕಿರಿಯ ಸಹೋದರ ಅಬ್ದುಲ್ ಶೌಚಾಲಯದಿಂದ ಹೊರಗೆ ಬಂದ ಕೂಡಲೇ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಏಕಾಏಕಿ ಕೋಪಗೊಂಡ ಅಣ್ಣನು ತಮ್ಮನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಕಿರಿಯ ಸಹೋದರ ಅಬ್ದುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಅದೇ ಸಮಯದಲ್ಲಿ,  ಅಬ್ದುಲ್ ಅವರ ಪತ್ನಿ ಮಧ್ಯೆ ಪ್ರವೇಶಿಸಿದಾಗ ಆರೋಪಿಗಳು ಆಕೆಯನ್ನೂ ಮೇಲಿನ ಮಹಡಿಯಿಂದ ಕೆಳಗೆ ಎಸೆದರು. ಈ ಘಟನೆಯಲ್ಲಿ ಮಹಿಳೆ ಗಾಯಗೊಂಡಿದ್ದಾರೆ. ಇಂದೋರ್ ಜಿಲ್ಲಾ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಅಬ್ದುಲ್ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಅಣ್ಣ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳೋಣ.

ಇದನ್ನೂ ಓದಿ : ಕಳ್ಳತನ, ಪಾರ್ಟಿ ಮಾಡೊದೇ ಜೀವನ ಎಂದುಕೊಂಡಿದ್ದ ಯುವಕ ಬೀದಿ ಹೆಣವಾದ ಕಥೆ!

ಕೌಟುಂಬಿಕ ಆಸ್ತಿಯ ವಿವಾದದಲ್ಲಿ ಸಹೋದರರ ನಡುವೆ ಜಗಳ ಮತ್ತು ಕೊಲೆಗಳ ವರದಿಗಳು ಹೆಚ್ಚಾಗಿ ಕಂಡುಬರುತ್ತವೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಶೌಚಾಲಯದ ವಿವಾದದಲ್ಲಿ ಕೊಲೆಯಾಗಿರುವುದು ಅಕ್ಕಪಕ್ಕದ ಜನರಲ್ಲದೇ ಸ್ಥಳಕ್ಕಾಗಮಿಸಿದ ಪೊಲೀಸ್ ತಂಡಕ್ಕೂ ಅಚ್ಚರಿ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.