ತ್ಯಾಗವೀರ ಶ್ರೀ ಲಿಂಗರಾಜರ 118ನೇ ಸ್ಮರಣೋತ್ಸವ

‘ತ್ಯಾಗವೀರ ಶ್ರೀ ಸಿರಸಂಗಿ ಲಿಂಗರಾಜರ 118 ನೇ ಸ್ಮರಣೋತ್ಸವ’ ಗದಗ ಜಿಲ್ಲೆ ಮುಂಡರಗಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಚಿವ ಎಂಬಿ ಪಾಟೀಲ್   ಲಿಂಗರಾಜರ ಮೂರ್ತಿ ಲೋಕಾರ್ಪಣೆ ಹಾಗೂ ಲಿಂಗರಾಜ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು" ನಮ್ಮ ಪೂರ್ವಜರೂ ಆದ ಲಿಂಗರಾಜರು ಈ ನಾಡಿಗೆ ಹಾಗೂ ಲಿಂಗಾಯತ-ವೀರಶೈವ ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಭಕ್ತಿಪೂರ್ವಕವಾಗಿ ಸ್ಮರಿಸುತ್ತೇನೆ" ಎಂದರು

ಕಾರ್ಯಕ್ರಮದಲ್ಲಿ ಕಿತ್ತೂರು ಶಾಸಕರಾದ ಶ್ರೀ ಬಾಬಾ ಸಾಹೇಬ ಡಿ. ಪಾಟೀಲ, ರೋಣ ಶಾಸಕರಾದ ಶ್ರೀ ಜಿ.ಎಸ್. ಪಾಟೀಲ, ಮಾಜಿ ಸಚಿವರಾದ ಶ್ರೀ ಎಸ್. ಎಸ್. ಪಾಟೀಲರು, ಮಾಜಿ ಶಾಸಕರುಗಳಾದ ಶ್ರೀ ರಾಮಣ್ಣ ಲಮಾಣಿ, ಶ್ರೀರಾಮಕೃಷ್ಣ ದೊಡ್ಡಮನಿ, ಹಿರಿಯರು,ತಾಯಂದಿರು ಸೇರಿದಂತೆ ಸಹಸ್ರಾರು ಜನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

1 /5

2 /5

3 /5

4 /5

5 /5