100 ವರ್ಷಗಳ ಬಳಿಕ ಅದೃಷ್ಟದ ರಾಜಯೋಗಗಳು: ಮಹಾಲಕ್ಷ್ಮೀ ಪೂರ್ಣ ಆಶೀರ್ವಾದದಿಂದ ಈ ರಾಶಿಗೆ ಧನವೈಭವ-ಸುಖೀ ಜೀವನ ಸಿದ್ಧಿ

Karwa Chauth 2023 Shubh Rajyog: ಇಂದು ಕರ್ವಾ ಚೌತ್ ಶುಭದಿನ. ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಈ ದಿನದಂದು ನಿರ್ಜಲ ವ್ರತವನ್ನು ಆಚರಿಸುವ ಮೂಲಕ ಪತಿವ್ರತೆಯರು ಪತಿಗೆ ದೀರ್ಘಾಯುಷ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಬಾರಿಯ ಕರ್ವಾ ಚೌತ್ ತುಂಬಾ ವಿಶೇಷವಾಗಿದೆ. ಏಕೆಂದರೆ 100 ವರ್ಷಗಳ ನಂತರ ಅಪರೂಪದ ರಾಜಯೋಗವೊಂದು ರೂಪುಗೊಂಡಿದೆ.

2 /6

ಬುಧಾದಿತ್ಯ ಯೋಗ, ಆದಿತ್ಯ ಯೋಗ, ಶಿವಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳ ಅಪರೂಪದ ಸಂಯೋಜನೆಯು ಕರ್ವಾ ಚೌತ್‌ ದಿನದಂದೇ ಸಂಭವಿಸಲಿದೆ. ಈ ಶುಭ ಯೋಗಗಳಿಂದ ಕೆಲವು ರಾಶಿಯ ಜನರಿಗೆ ಭಾರೀ ಪ್ರಯೋಜನಗಳು ಸಿಗಲಿವೆ. ಅಂತಹ ಅದೃಷ್ಟ ತುಂಬಿದ ರಾಶಿಗಳ ಬಗ್ಗೆ ತಿಳಿಯೋಣ...

3 /6

ಮೇಷ ರಾಶಿ: ಕರ್ವಾ ಚೌತ್ ದಿನವು ಮೇಷ ರಾಶಿಯ ಜನರಿಗೆ ಮಂಗಳಕರ ಮತ್ತು ಪ್ರಯೋಜನಕಾರಿಯಾಗಿದೆ. ಈ ದಿನ ಧನಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುತ್ತಾರೆ. ಜೊತೆಗೆ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.

4 /6

ಕನ್ಯಾ ರಾಶಿ: 100 ವರ್ಷಗಳ ನಂತರ ಸಂಭವಿಸಿರುವ ಗ್ರಹಗಳ ಅಪರೂಪದ ಸಂಯೋಜನೆಯು ಕನ್ಯಾ ರಾಶಿಯ ಜನರಿಗೆ ಅತ್ಯಂತ ಮಂಗಳಕರ ಮತ್ತು ಪ್ರಯೋಜನಕಾರಿಯಾಗಲಿದೆ. ವೃತ್ತಿಯಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುತ್ತಾರೆ. ವ್ಯಾಪಾರದಲ್ಲಿ  ಅಥವಾ ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.

5 /6

ಮಕರ ರಾಶಿ: ಜ್ಯೋತಿಷ್ಯದ ಪ್ರಕಾರ, ಮಕರ ರಾಶಿಯವರಿಗೆ ವ್ಯವಹಾರದಲ್ಲಿ ಸಾಕಷ್ಟು ಲಾಭ ಇರುತ್ತದೆ. ಆರ್ಥಿಕ ಸ್ಥಿತಿಯು ಮೊದಲಿಗಿಂತ ಬಲವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂಪೂರ್ಣ ಸಂತಸ ಇರಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.

6 /6

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)