ಮಳೆ ಸೀನ್ ಮಾಡುವಾಗ ಒಳಉಡುಪು ಇರ್ಲಿಲ್ಲ… ರಜನಿಕಾಂತ್ ಎತ್ತಿಕೊಂಡೇ ಬಿಟ್ರು!

Actress Shobana: ದಕ್ಷಿಣ ಭಾರತದ ನಟಿ ಶೋಭನಾ ಇತ್ತೀಚೆಗೆ ತಮಿಳಿನ 'ಶಿವ' ಸಿನಿಮಾ ಶೂಟಿಂಗ್ ವೇಳೆ ತಮಗಾದ ಅನುಭವವನ್ನು ತೆರೆದಿಟ್ಟಿದ್ದಾರೆ. ಮಳೆಯಲ್ಲಿ ನಡೆಯುವ ಹಾಡುಗಳ ಚಿತ್ರೀಕರಣವು ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಎಂದು ನನಗನಿಸುತ್ತದೆ ಎಂದು ನಟಿ ಶೋಭನಾ ಹೇಳಿದ್ದಾರೆ.

1 /8

ದಕ್ಷಿಣ ಭಾರತದ ನಟಿ ಶೋಭನಾ ಇತ್ತೀಚೆಗೆ ತಮಿಳಿನ 'ಶಿವ' ಸಿನಿಮಾ ಶೂಟಿಂಗ್ ವೇಳೆ ತಮಗಾದ ಅನುಭವವನ್ನು ತೆರೆದಿಟ್ಟಿದ್ದಾರೆ

2 /8

ಮಳೆಯಲ್ಲಿ ನಡೆಯುವ ಹಾಡುಗಳ ಚಿತ್ರೀಕರಣವು ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಎಂದು ನನಗನಿಸುತ್ತದೆ ಎಂದು ನಟಿ ಶೋಭನಾ ಹೇಳಿದ್ದಾರೆ.

3 /8

ಟ್ರಾನ್ಸ್’ಪರೆಂಟ್ ಸೀರೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ನಟಿಯರನ್ನು ಕತ್ತಲೆಯಲ್ಲಿ ಇಡಲಾಗುತ್ತದೆ ಎಂದು ನಟಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

4 /8

ಸುಹಾಸಿನಿ ಮಣಿರತ್ನಂ ಅವರೊಂದಿಗಿನ ಸಂದರ್ಶನದಲ್ಲಿ ನಟಿ ಮಾತನಾಡಿದ್ದು, ನನಗೆ ಮೊದಲು ಮಳೆಯಲ್ಲಿ ಶೂಟಿಂಗ್ ಇರುವುದರ ಬಗ್ಗೆ ಹೇಳಲಿಲ್ಲ. ಆ ಬಳಿಕ ನಾನು ಕಾಸ್ಟ್ಯೂಮ್ ನೋಡಿದೆ. ನನಗೆ ಆಗ ಅನಿಸಿತು, ಈಗ ಏನೋ ಒಂದು ನಡೆಯುತ್ತದೆ ಎಂದು. ಅದು ಬಿಳಿಯ ಟ್ರಾನ್ಸ್’ಪರೆಂಟ್ ಸೀರೆಯಾಗಿತ್ತು” ಎಂದು ಹೇಳಿದ್ದಾರೆ.

5 /8

ಮಾತು ಮುಂದುವರೆಸಿದ ಅವರು, ಈ ಬಟ್ಟೆ ಧರಿಸಲು ನನ್ನ ಬಳಿ ಏನೂ ಇಲ್ಲ, ನಾನು ಮನೆಗೆ ಹೋಗಿ ರೆಡಿಯಾಗಿ ಬರಬಹುದೇ ಎಂದು ನಾನು ಕಾಸ್ಟ್ಯೂಮ್ ಹುಡುಗನ ಬಳಿ ಕೇಳಿದೆ. ಅದಕ್ಕೆ ಆತ ಮುಂದಿನ 10 ನಿಮಿಷಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದ.

6 /8

ಇದನ್ನು ಕೇಳಿದ ನನಗೆ ಮಳೆಯಲ್ಲಿ ನಡೆಯುವ ಹಾಡುಗಳ ಚಿತ್ರೀಕರಣವು ಒಂದು ರೀತಿಯಲ್ಲಿ ಪೂರ್ವಯೋಜಿತ ಕೊಲೆಯಂತೆ ಎಂದನಿಸಿತು.

7 /8

ಮಳೆಯ ಸೀಕ್ವೆನ್ಸ್ ಅನ್ನು ರಜನಿಕಾಂತ್ ಸರ್ ಜೊತೆ ಚಿತ್ರೀಕರಿಸಲಾಗಿದೆ. ಅವರು ಜಂಟಲ್ ಮ್ಯಾನ್ ವ್ಯಕ್ತಿ. "ಶೂಟ್‌’ಗೆ ತಡ ಮಾಡಬಾರದು ಎಂದು ನಾನು ಪ್ಲಾಸ್ಟಿಕ್ ಟೇಬಲ್ ಕವರ್ ಅನ್ನು ಒಳ ಉಡುಪಾಗಿ ಧರಿಸಿದೆ.

8 /8

ಆದರೆ ಡ್ಯಾನ್ಸ್ ಸ್ಟೆಪ್‌ ಮಾಡುತ್ತಾ ರಜನಿ ಸರ್ ನನ್ನನ್ನು ಎತ್ತಿಕೊಂಡರು. ಆಗ ಅದು ಸದ್ದು ಮಾಡಿತು. ಒಂದು ಕ್ಷಣ ರಜನಿ ಸರ್ ಗೊಂದಲಕ್ಕೊಳಗಾದರು. ಆದರೆ ಅದೃಷ್ಟವಶಾತ್ ಅವರು ಎಲ್ಲರ ಮುಂದೆ ಏನೂ ನಡೆಯದಂತೆ ಇದ್ದರು. ಅವರಿಗೆ ನನ್ನ ಪರಿಸ್ಥಿತಿ ಅರ್ಥವಾಗಿತ್ತು ಎಂದು ಶೋಭನಾ ಸಂದರ್ಶನದಲ್ಲಿ ಹೇಳಿದ್ದಾರೆ.