ವಕೀಲ್ ಸಾಬ್‌ಗೆ ಇಬ್ಬರು ಹೆಂಡತಿಯರು..!‌? ಐಶ್ವರ್ಯಾ ಮುಂದೆ ಸಂಸಾರದ ಗುಟ್ಟು ಬಿಚ್ಚಿಟ್ಟ ಜಗದೀಶ್‌.. ಕಣ್ಣೀರಿಟ್ಟಿದ್ದು ಏಕೆ..?

Bigg Boss Kannada Season 11: ಬಿಗ್‌ ಬಾಸ್‌ ಮನೆಯಲ್ಲಿ ಈಗ ಲಾಯರ್‌ ಜಗದೀಶ್‌ ಸದ್ದು ಕಡಿಮೆಯಾಗುತ್ತಿದೆ.. ಮೊನ್ನೆವರೆಗೂ ಅಬ್ಬರಿಸಿ ಬೊಬ್ಬಿರಿದಿದ್ದ ವಕೀಲ್‌ ಸಾಬ್‌ ರಾತ್ರಿ ಕಳೆದು ಬೆಳಕು ಹರಿಯುವುದರ ಒಳಗೆ ಫುಲ್‌ ಚೇಂಜ್‌ ಆಗಿದ್ದಾರೆ.. ಇದರ ನಡುವೆ ಭಾವುಕರಾಗಿ ತಮ್ಮ ಸಂಸಾರದ ವಿಚಾರಗಳನ್ನು ಸಹ ಸ್ಪರ್ಧಿಗಳ ಮುಂದೆ ಬಿಚ್ಚಿಟ್ಟಿದ್ದಾರೆ..

1 /6

ಲಾಯರ್ ಜಗದೀಶ್ ಎರಡು ಮದುವೆಯಾಗಿದ್ದಾರೆ.. ಎಂಬ ವಿಚಾರ ಕೇಳಿ ಬಂದಿದೆ.. ಇದು ಬೇರೆ ಯಾರೂ ಹಬ್ಬಿಸಿದ ಸುದ್ದಿಯಲ್ಲ ಬದಲಿಗೆ ಜಗದೀಶ್‌ ಅವರು ಸ್ಪಷ್ಟವಾಗಿ ಹೇಳಿಕೊಳ್ಳದೆ ದೊಡ್ಡವಳು ಮತ್ತು ಹೆಂಡತಿಯಂತ ಹೇಳಿರುವ ಮಾತು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.  

2 /6

ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.. ಶೋ ಶುರುವಾದಾಗಿನಿಂದ ಸ್ಪರ್ಧಿಗಳ ಜೊತೆ ವಾಗ್ವಾದ ಮತ್ತು ಜಗಳಕ್ಕೆ ಬಿದ್ದಿದ್ದಾರೆ. ಕೇವಲ 3 ದಿನಗಳಲ್ಲೇ ದೊಡ್ಮನೆಯಲ್ಲಿ  ಹಂಗಾಮ ಕ್ರಿಯೇಟ್‌ ಮಾಡಿದ್ದಾರೆ.. ಇದರ ನಡುವೆ ಬಿಗ್‌ಬಾಸ್‌ಗೂ ಸಹ ಅವಾಜ್‌ ಹಾಕಿದ್ದರು..  

3 /6

ಇದೀಗ ಇಷ್ಟೇಲ್ಲ ಮಾಡಿ, ಬಿಗ್‌ ಬಾಸ್‌ನಿಂದ ಹೊರಗೆ ಹೋಗೋಕೆ ರೆಡಿಯಾಗಿದ್ದ ಲಾಯರ್‌ ಸಾಬ್‌, ಇದೀಗ ಏಕಾಏಕಿ ಸೈಲೆಂಟ್‌ ಆಗಿದ್ದಾರೆ.. ಅಲ್ಲದೆ, ತಾವು ಮಾಡಿದ ತಪ್ಪುಗಳಿಗೆ ಕ್ಷಮೇ ಕೇಳಿದ್ದಾರೆ.. ಆನಂತರ ಎಮೋಷನಲ್ ಆದ ಜಗದೀಶ್‌.. ಐಶ್ವರ್ಯಾ ಸಿಂಧೋಗಿ ಜೊತೆ ಮಾತಿಗಿಳಿದರು.. ಈ ವೇಳೆ ತಮ್ಮ ಪತ್ನಿಯರ ಬಗ್ಗೆ ಉಲ್ಲೇಖಿಸಿದರು.  

4 /6

ಐಶ್ವರ್ಯಾ ಜೊತೆ ಮಾತನಾಡುವಾಗ, "ಐ ವಾಸ್ ವೆರಿ ಲಕ್ಕಿ. ತಂದೆ - ತಾಯಿ ವಿಚಾರದಲ್ಲಿ... ಆದರೆ, ಅವರು ಜಾಸ್ತಿ ದಿನ ಇರಲಿಲ್ಲ. Wives ವಿಚಾರದಲ್ಲೂ ಅಷ್ಟೇ. ದೊಡ್ಡವಳು ತುಂಬಾ ಒಳ್ಳೆಯವಳು... ಆದರೆ.. ಈ ಹೋರಾಟಗಳನ್ನ ಮೈ ಮೇಲೆ ಹಾಕಿಕೊಂಡಾಗ ಅವಳ ಕೈಯಲ್ಲಿ ನೋಡೋಕೆ ಆಗಲಿಲ್ಲ" ಅಂತ ಲಾಯರ್ ಜಗದೀಶ್ ಭಾವುಕರಾದರು.  

5 /6

ಆಗ, ಐಶ್ವರ್ಯಾ, ಹೌದು.. ಸರ್‌.. ಎಲ್ಲರಿಗೂ ಒಂದು ಪಾಸ್ಟ್ ಇದ್ದೇ ಇರುತ್ತೆ. ಆ ಘಟನೆಗಳಿಂದ ನೀವು ಈ ತರಹ ಕನ್ವರ್ಟ್ ಆಗಿದ್ದೀರಾ ಅನಿಸುತ್ತೆ.. ನನ್ನ ಜೀವನದಲ್ಲಿಯೂ ಕೆಲವು ಘಟನೆಗಳು ನಡೆದಿದ್ದಾವೆ.. ಆದರೆ ನಿಮ್ಮಷ್ಟು ಅಲ್ಲ.. ಎಂದರು.. ಆಗ ಜಗದೀಶ್‌.. ʼನಾನು ಏನಕ್ಕೂ ಭಯ ಬೀಳೋದಿಲ್ಲ. ನಿನ್ನೆ ನಾನು ಅಷ್ಟು ಜನರನ್ನ ಡಿಫೆಂಡ್ ಮಾಡಿದೆ. ಬೇರೆ ಯಾರಾದರೂ ಆಗಿದ್ದಿದ್ದರೆ ಬ್ರೇಕ್ ಡೌನ್ ಆಗಿರೋರು. ನಾನು ಬ್ರೇಕ್ ಡೌನ್ ಆಗಲ್ಲ. ಯಾಕಂದ್ರೆ, ನಾನು ಅದಕ್ಕಿಂತ ಕೆಟ್ಟ ಸ್ಥಿತಿ ನೋಡಿದ್ದೇನೆ." ಎಂದರು..   

6 /6

ಒಟ್ಟಾರೆಯಾಗಿ ನಿನ್ನೆ ಮೊನ್ನೆ ರೆಬಲ್‌ ಆಗಿದ್ದ ಲಾಯರ್‌ ಇದೀಗ ಬಾಲ ಸುಟ್ಟ ಬೆಂಕಿನಂತೆ ಮೆತ್ತಗಾಗಿದ್ದಾರೆ.. ಎಲ್ಲೋ ಒಂದು ಕಡೆ ತಮ್ಮ ತಪ್ಪಿನ ಅರಿವಾಗಿರಬೇಕು ಅಂತ ಅನಿಸುತ್ತದೆ.. ಇಲ್ಲ ಬಿಗ್‌ಬಾಸ್‌ ಕ್ಲಾಸ್‌ ತೆಗೆದುಕೊಂಡಿಬೇಕು ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.. ಒಟ್ಟಾರೆಯಾಗಿ ಲಾಯರ್‌ ಸಾಬ್‌ ಬದಲಾವಣೆ.. ಮನೆ ಮಂದಿಗೆ ಶಾಕ್‌ ನೀಡಿದ್ದಂತು ನಿಜ... ಮುಂದೆನಾಗುತ್ತೆ.. ಕಾಯ್ದು ನೋಡೋಣ..