BBK 11 : ಬಿಗ್‌ ಬಾಸ್‌ 11ರ ಮನೆಗೆ ʼಹಿಂದೂ ಪರ ಫೈರ್‌ ಬ್ರಾಂಡ್‌ʼ ಎಂಟ್ರಿ..! ಸ್ಪರ್ಧಿಗಳಿಗೆ ನಡುಕ ಫಿಕ್ಸ್‌

Bigg Boss Kannada Season 11 Contestants : ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.. ಈ ಬಾರಿ ಬಿಗ್‌ಹೌಸ್‌ ಒಳಗೆ ಯಾರ್‌ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಸಧ್ಯ ಈ ಸೀಸನ್‌ನ 3ನೇ ಸ್ಪರ್ಧಿ ಯಾಗಿ ಹಿಂದೂ ಪರ ಫೈರ್‌ ಬ್ರಾಂಡ್‌, ವಾಗ್ಮಿಯೊಬ್ಬರು ಪ್ರವೇಶ ಮಾಡಲಿದ್ದಾರೆ..
 

1 /8

ಸಮಯ ಸುದ್ದಿವಾಹಿನಿ, ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿ.. ಇದಲ್ಲದೆ ಉಡುಪಿಯ ಮುಕ್ತ ನ್ಯೂಸ್ ಅನ್ನೋ ಸ್ಥಳೀಯ ಸುದ್ದಿ ವಾಹಿನಿಯಲ್ಲೂ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದಾರೆ.. ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಕಾರ್ಯನಿರ್ವಹಿಸಿದ್ದರು.  

2 /8

ಇನ್ನು ಚೈತ್ರಾ ಕುಂದಾಪುರ ಅವರು ಹಿನ್ನಲೆ ನೋಡುವುದಾದರೆ, ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿದ್ದಾರೆ.. ಮಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.  

3 /8

ಇನ್ನು ಈ ಬಾರಿ ಲಾಯರ್‌ ಜಗದೀಶ್‌ ಸಹ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದು.. ಚೈತ್ರಾ ಕುಂದಾಪುರ ಸಹ ಸ್ಪರ್ಧಿಯಾಗಿ ಆಯ್ಕೆಯಾಗಿದ್ದು ಜನರಲ್ಲಿ ಕುತೂಹಲ ಕೆರಳಿಸಿದೆ.. ಮುಂದಿನ ದಿನ ಏನಾಗುತ್ತೆ ಅಂತ ಕಾಯ್ತು ನೋಡಬೇಕಿದೆ..  

4 /8

ಚೈತ್ರಾ ಹಲವಾರು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದರು. ಅಲ್ಲದೆ, ತಮ್ಮ ಭಾಷಣಗಳ ಮೂಲಕ ಯುವ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದರು.. ಇವರ ಭಾಷಣಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದವು.  

5 /8

ಚೈತ್ರಾ ಕುಂದಾಪುರ ಅವರು ಉಡುಪಿ ಜಿಲ್ಲೆ ಕುಂದಾಪುರದವರು. ಪ್ರಖರ ಭಾಷಣಕಾರ್ತಿಯಾಗಿ ಕರ್ನಾಟಕದ ಜನಗ ಗಮನ ಸೆಳೆದವರು.. ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕೆಲ ಕಾಲ ಚೈತ್ರಾ ಕುಂದಾಪುರ ಕೆಲಸ ಮಾಡಿದ್ದರು.  

6 /8

ಇದರ ನಡುವೆ ಇದೀಗ ಮೂರನೇ ಸ್ಪರ್ಧಿಯ ಹೆಸರು ರವೀಲ್‌ ಮಾಡಲಾಗಿದೆ.. ಯಸ್‌... ದೊಡ್ಮನೆ ಮೂರನೇ ಸ್ಪರ್ಧಿಯಾಗಿ ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಆಯ್ಕೆಯಾಗಿದ್ದಾರೆ.  

7 /8

ಈ ಹಿಂದೆ ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡುವುದಾಗಿ ಕಲರ್ಸ್ ಕನ್ನಡ ವಾಹಿನಿ ತಿಳಿಸಿತು. ಮೊದಲ ಸ್ಪರ್ಧಿಯಾಗಿ ಗೌತಮಿ ಜಾಧವ್‌ ಹೆಸರನ್ನು ಬಹಿರಂಗ ಗೊಳಿಸಲಾಗಿದೆ.. ಎರಡನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌ ಆಯ್ಕೆಯಾಗಿದ್ದಾರೆ..  

8 /8

ಹೌದು.. ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್‌ ಓಪನಿಂಗ್ ಇದೇ ಸೆಪ್ಟೆಂಬರ್ 29 ಅಂದ್ರೆ ನಾಳೆ ಭಾನುವಾರ ನಡೆಯಲಿದೆ. ಬಿಗ್ ಬಾಸ್ ಆರಂಭಕ್ಕೆ ಕೇವಲ ಒಂದು ರಾತ್ರಿ ಮಾತ್ರ ಬಾಕಿ ಇದೆ. ಇದರ ನಡುವೆ ಕಲರ್‌ ವಾಹಿತಿ ಬಿಗ್‌ ಬಾಸ್‌ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡುತ್ತಿದೆ.