ಮಧುಮೇಹಿಗಳು ಬೆಳಿಗ್ಗೆ ಮೊಸರಿನ ಜೊತೆ ಈ 5 ಪದಾರ್ಥಗಳನ್ನು ತಿಂದ್ರೆ ಸಕ್ಕರೆ ನಿಯಂತ್ರಣದಲ್ಲಿರುತ್ತದೆ..!

Curd for Diabetes : ಮಧುಮೇಹ ಇಂದು ಜನರ ಜೀವವನ್ನು ಹಿಂಡುವ ಕಾಯಿಲೆಯಾಗಿದೆ. ಅದರಿಂದ ಸಂಪೂರ್ಣ ಗುಣಮುಖರಾಗದಿದ್ದರೂ ಸಹ, ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ತಿನ್ನುವ ಮೂಲಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

1 /8

ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದ್ದು, ಸಮಯೋಚಿತ ಚಿಕಿತ್ಸೆಯ ಅಗತ್ಯವಿರುತ್ತದೆ. ಮಧುಮೇಹವನ್ನು ಎಂದಿಗೂ ಗುಣಪಡಿಸಲು ಸಾಧ್ಯವಿಲ್ಲ ಆದರೆ ಅದನ್ನು ನಿಯಂತ್ರಿಸಬಹುದು. ಮಧುಮೇಹಕ್ಕೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಔಷಧಿಗಳ ಅಗತ್ಯವಿರುತ್ತದೆ. ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.   

2 /8

ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಮೊಸರಿನ ಜೊತೆ ಈ ಕೆಳಗೆ ನೀಡಿರುವ ಪದಾರ್ಥಗಳನ್ನು ಸೇವಿಸಿದರೆ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು. ಬನ್ನಿ ಅವುಗಳು ಯಾವುವು ಅಂತ ವಿವರವಾಗಿ ತಿಳಿದುಕೊಳ್ಳೋಣ..   

3 /8

ಮೊಸರು ಮತ್ತು ಕರಿಬೇವು : ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ ಒಂದು ಬಟ್ಟಲು ಬೇಯಿಸಿದ ಕಡಲೆ ಜೊತೆ ಮೊಸರು ಸೇರಿಸಿ ಮಿಶ್ರಣಮಾಗಿ ಬೆಳಿಗ್ಗೆ ಉಪಾಹಾರಕ್ಕೆ ಸೇವಿಸಿ. ಉಪ್ಪು ಮತ್ತು ಕರಿಮೆಣಸನ್ನು ಮೊಸರಿಗೆ ಸೇರಿಸಬಹುದು.   

4 /8

ಮೊಸರು ಮತ್ತು ಇಸಾಬ್ಗೋಲ್ : ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು 1 ರಿಂದ 2 ಟೀ ಚಮಚ ಇಸಾಬ್ಗೋಲ್ ಅನ್ನು ಮೊಸರು ಬಟ್ಟಲಿಗೆ ಸೇರಿಸಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಮಧುಮೇಹದಿಂದ ಉಂಟಾಗುವ ಇತರ ಸಮಸ್ಯೆಗಳನ್ನು ಸಹ ನಿಯಂತ್ರಿಸುತ್ತದೆ. ವಿಶೇಷವಾಗಿ ಇದು ಮಲಬದ್ಧತೆಯನ್ನು ನಿವಾರಿಸುತ್ತದೆ.  

5 /8

ಮೊಸರು ಮತ್ತು ಸೌತೆಕಾಯಿ : ಸಲಾಡ್‌ಗಳಲ್ಲಿ ಹಸಿಯಾಗಿ ತಿನ್ನುವ ಕೆಲವು ವಸ್ತುಗಳನ್ನು ಮೊಸರಿನೊಂದಿಗೆ ತಿನ್ನುವಾಗ ಸಹ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿ ಬೆಳಗಿನ ಉಪಾಹಾರಕ್ಕೆ ಒಂದು ಬೌಲ್ ಮೊಸರಿಗೆ ಸೌತೆಕಾಯಿ, ಟೊಮೇಟೊ ಇತ್ಯಾದಿಗಳನ್ನು ಸೇರಿಸಬಹುದು. ನೀವು ದಾಳಿಂಬೆಯನ್ನು ಮೊಸರಿನ ಜೊತೆಗೆ ತಿನ್ನಬಹುದು.   

6 /8

ಮೊಸರು ಮತ್ತು ದಾಲ್ : ದಾಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಇತರ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಊಟದಲ್ಲಿ ಮೊಸರು ಮತ್ತು ಬೇಳೆಯನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಿಗೂ ಪ್ರಯೋಜನವಾಗುತ್ತದೆ. ಇದು ದೇಹಕ್ಕೆ ಪೋಷಕಾಂಶಗಳನ್ನೂ ನೀಡುತ್ತದೆ.   

7 /8

ಮೊಸರು ಜೊತೆ ಹಣ್ಣು : ಮೊಸರಿನ ಜೊತೆ ಸೇವಿಸಿದರೆ ಪ್ರಯೋಜನಕಾರಿಯಾದ ಕೆಲವು ಹಣ್ಣುಗಳೂ ಇವೆ. ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಮತ್ತು ಮೊಸರು ತಿನ್ನಬೇಕು. ಇದು ಅನೇಕ ಹೊಟ್ಟೆಯ ಕಾಯಿಲೆಗಳನ್ನು ಗುಣಪಡಿಸುತ್ತದೆ.  

8 /8

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)