Guru Nakshatra Parivartan: ಭರಣಿ ನಕ್ಷತ್ರಕ್ಕೆ ಸುಖ-ಸೌಭಾಗ್ಯದಾತ ಗುರುವಿನ ಪ್ರವೇಶ, ಈ ಜನರ ಜೀವನದಲ್ಲಿ ಭಾರಿ ಧನಾಗಮನ!

Guru Nakshatra Parivartan 2024: ವೈದಿಕ ಜೋತಿಷ್ಯದಲ್ಲಿ ಗುರು ಬೃಹಸ್ಪತಿಗೆ ದೇವ-ದೇವತೆಗಳ ಗುರುವಿನ ಸ್ಥಾನ ಪ್ರಾಪ್ತಿ ಇದೆ. ಗುರು ತನ್ನ ರಾಶಿ ಪರಿವರ್ತಿಸಿದಂತೆ, ಒಂದು ನಿಶ್ಚಿತ ಕಾಲಾಂತರದಲ್ಲಿ ನಕ್ಷತ್ರವನ್ನು ಕೂಡ ಪರಿವರಿಸುತ್ತಾನೆ. ಪ್ರಸ್ತುತ ಗುರು ಭರಣಿ ನಕ್ಷತ್ರದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada)
 

Guru Nakshatra Parivartan 2024: ದೇವ ದೇವತೆಗಳ ಗುರು ಬೃಹಸ್ಪತಿಯ ರಾಶಿ ಪರಿವರ್ತನೆಯ ಪ್ರಭಾವ ಬಹುತೇಕ ಎಲ್ಲಾ ರಾಶಿಗಳ ಜಾತಕದವರ ಮೇಲೆ ಗೋಚರಿಸುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಭಾಗ್ಯದ ಕಾರಕ ಎಂದು ಭಾವಿಸಲಾಗಿದೆ. ಹೀಗಿರುವಾಗ ಆತನ ಸ್ಥಿತಿಗತಿಯಲ್ಲಿನ ಸ್ವಲ್ಪ ಬದಲಾವಣೆ ಕೂಡ ಎಲ್ಲಾ ದ್ವಾದಶ ರಾಶಿಗಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡುತ್ತದೆ. ಪ್ರಸ್ತುತ ಗುರು ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ ಮತ್ತು ಫೆಬ್ರುವರಿ 3, 2024 ರಂದು ಮದ್ಯಾಹ್ನ 2 ಗಂಟೆ 44 ನಿಮಿಷಕ್ಕೆ ಆತ ಭರಣಿ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. ಅಲ್ಲಿ ಆತ ಏಪ್ರಿಲ್ 17, 2024ರ ಮದ್ಯಾಹ್ನ 2 ಗಂಟೆ 57 ನಿಮಿಷದವರೆಗೆ ಇರಲಿದ್ದಾನೆ. ಭರಣಿ ನಕ್ಷತ್ರಕ್ಕೆ ಶುಕ್ರ ಅಧಿಪತಿ ಮತ್ತು ಯಮರಾಜ ಸ್ವಾಮಿಯಾಗಿದ್ದಾನೆ. ಶುಕ್ರನ ನಕ್ಷತ್ರಕ್ಕೆ ಗುರುವಿನ ಪ್ರವೇಶ ಕೆಲ ರಾಶಿಗಳ ಜನರ ಜೀವನವನ್ನು ಸಾಕಷ್ಟು ಹೆಚ್ಚಿಸಲಿದೆ. ಈ ರಾಶಿಗಳ ಜನರಿಗೆ ವೈವಾಹಿಕ ಸುಖದ ಜೊತೆಗೆ ಭೌತಿಕ ಸುಖ ಸೌಕರ್ಯಗಳ ಜೊತೆಗೆ ಗುರು ಅಪಾರ ಧನ-ಸಂಪತ್ತನ್ನು ಕರುಣಿಸಲಿದ್ದಾನೆ. ಗುರುವಿನ ಭರಣಿ ನಕ್ಷತ್ರ ಪ್ರವೇಶದಿಂದ ಯಾವ ರಾಶಿಗಳ ಜನರಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ. (Spiritual News In Kannada)

 

ಇದನ್ನೂ ಓದಿ-Vasanta Panchami 2024: ಇಂದು ತಾಯಿ ಶಾರದೆ ಕೃಪೆಯಿಂದ ಪಂಚ ಮಹಾಯೋಗಗಳ ರಚನೆ, ಈ ಜನರಿಗೆ ಅಷ್ಟೈಶ್ವರ್ಯ ಕರುಣಿಸುವಳು ತಾಯಿ ಲಕ್ಷ್ಮಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Guru Nakshatra Parivartan 2024: ವೈದಿಕ ಜೋತಿಷ್ಯದಲ್ಲಿ ಗುರು ಬೃಹಸ್ಪತಿಗೆ ದೇವ-ದೇವತೆಗಳ ಗುರುವಿನ ಸ್ಥಾನ ಪ್ರಾಪ್ತಿ ಇದೆ. ಗುರು ತನ್ನ ರಾಶಿ ಪರಿವರ್ತಿಸಿದಂತೆ, ಒಂದು ನಿಶ್ಚಿತ ಕಾಲಾಂತರದಲ್ಲಿ ನಕ್ಷತ್ರವನ್ನು ಕೂಡ ಪರಿವರಿಸುತ್ತಾನೆ. ಪ್ರಸ್ತುತ ಗುರು ಭರಣಿ ನಕ್ಷತ್ರದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. (Spiritual News In Kannada)  

2 /5

ಮೇಷ ರಾಶಿ: ಗುರುವಿನ ಭರಣಿ ನಕ್ಷತ್ರ ಪ್ರವೇಶ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ವಿದೇಶಕ್ಕೆ ಯಾತ್ರೆ ಕೈಗೊಳ್ಳುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಇದೆ. ಇದಲ್ಲದೆ ವಿದೇಶದಲ್ಲಿ ಕೆಲಸ ಅಥವಾ ವ್ಯಾಪಾರ ಮಾಡುವ ಜನರಿಗೆ ಇದು ಸಾಕಷ್ಟು ಲಾಭಗಳನ್ನು ತಂದು ಕೊಡಲಿದೆ. ಆರ್ಥಿಕ ಸ್ಥಿತಿ ಕೂಡ ಸಾಕಷ್ಟು ಉತ್ತಮವಾಗಿರಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ, ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಎಚ್ಚರಿಕೆವಹಿಸುವ ಆವಶ್ಯಕತೆ ಇದೆ. ಏಕೆಂದರೆ, ಆರೋಗ್ಯದ ಕಾರಣ ಅಧಿಕ ಹಣ ವೆಚ್ಚವಾಗುವ ಸಾಧ್ಯತೆ ಇದೆ.   

3 /5

ವೃಷಭ ರಾಶಿ: ಗುರಿವಿನ ಈ ನಕ್ಷತ್ರ ಪರಿವರ್ತನೆಯಿಂದ ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಇದೆ. ದ್ವಾದಶ ಭಾವದಲ್ಲಿರುವ ಗುರುವಿನ ದೃಷ್ಟಿ ನಿಮ್ಮ ಜಾತಕದ ಚತುರ್ಥ ಭಾವದ ಮೇಲೆ ನೆಟ್ಟಿದೆ. ಹೀಗಾಗಿ ಸಂಪತ್ತು ಖರೀದಿಸುವ ನಿಮ್ಮ ಕನಸು ನನಸಾಗುವ ಸಾಧ್ಯತೆ ಇದೆ. ಇದರ ಜೋತೆಗೆ ವ್ಯಾಪಾರ ಮಾಡುವ ಜನರಿಗೆ ಸಾಕಷ್ಟು ಲಾಭ ಸಿಗಲಿದೆ. ಗುರುವಿನ ಕೃಪೆಯಿಂದ ಆದ್ಯಾತ್ಮದತ್ತ ನಿಮ್ಮ ಒಲವು ಸಾಕಷ್ಟು ಹೆಚ್ಚಾಗಲಿದೆ. ಇದಲ್ಲದೆ ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗವಹಿಸುವಿರಿ. ಭಾಗ್ಯದ ಸಂಪೂರ್ಣ ಬೆಂಬಲ ಸಿಗುವ ಕಾರಣ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗುವ ಪ್ರಬಲ ಸಂಕೇತಗಳಿವೆ. ದೀರ್ಘ ಕಾಲದಿಂದ ನಿಂತುಹೋದ ಕೆಲಸಗಳಿಗೆ ಮತ್ತೆ ಗತಿ ಸಿಗಲಿದೆ. ವಿದೇಶದಲ್ಲಿ ಇಂಪೋರ್ಟ್ ಎಕ್ಸ್ಪೋರ್ಟ್ ಕೆಲಸದಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಸಿಗಲಿದೆ. ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ನೌಕರ ವರ್ಗದ ಜನರಿಗೂ ಕೂಡ ಇದರಿಂದ ಸಾಕಷ್ಟು ಲಾಭ ಸಿಗಲಿದೆ. ಕಾರ್ಯಸ್ಥಳದಲ್ಲಿ ವರಿಷ್ಠರ ಬೆಂಬಲ ಸಿಗಲಿದೆ. ಇದರಿಂದ ನೀವು ನಿಮ್ಮ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಎಚ್ಚರಿಕೆಯ ಅವಶ್ಯಕತೆ ಇದೆ.   

4 /5

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಅಷ್ಟಮ ಭಾವದಲ್ಲಿ ಗುರುವಿನ ಈ ನಕ್ಷತ್ರ ಗೋಚರ ನೆರವೇರುತ್ತಿದ್ದು, ಆತ ನಿಮ್ಮ ಧನ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಶುಕ್ರನ ನಕ್ಷ್ತತ್ರಕ್ಕೆ ಗುರುವಿನ ಪ್ರವೇಶದಿಂದ ಧನ ಹಾಗೂ ಭಾಗ್ಯದ ಸಂಪೂರ್ಣ ಬೆಂಬಲದಿಂದ ಪ್ರತಿಯೊಂದು ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಇದರ ಜೊತೆಗೆ ದೀರ್ಘಾವಧಿಯಿಂದ ನಿಂತು ಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಭಾಗ್ಯದ ಸಂಪೂರ್ಣ ಬೆಂಬಲ ಸಿಗುವ ಕಾರಣ ಹೂಡಿಕೆಯಿಂದ ನಿಮಗೆ ಅಪಾರ ಧನಲಾಭ ಸಿಗಲಿದೆ. ನೌಕರವರ್ಗದ ಜನರಿಗೆ ಯಶಸ್ಸಿನ ಜೊತೆಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿರುವ ಜನರಿಗೆ ಅಪಾರ ಯಶಸ್ಸು ಸಿಗಲಿದೆ. ಶಿಕ್ಷಣದ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಿಗುವ ನಿರೀಕ್ಷೆ ಇದೆ.    

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)