Jaggery Tips: ಬೆಲ್ಲದ ಈ ಉಪಾಯಗಳನ್ನು ಅನುಸರಿಸಿದರೆ, ಹಣಕಾಸಿನ ಮುಗ್ಗಟ್ಟು ತಕ್ಷಣ ದೂರಾಗುತ್ತದೆ

Jaggery Mythological Benefits - ಬೆಲ್ಲ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ (Jaggery Health Benefits) ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಆಧ್ಯಾತ್ಮಿಕವಾಗಿಯೂ (Mythological Benefits Of Using Jaggery) ಕೂಡ ಬೆಲ್ಲ ಅಷ್ಟೇ ಅದ್ಭುತ ಹಾಗೂ ಪರಿಣಾಮಕಾರಿಯಾಗಿದೆ. ಲಾಲ್ ಕಿತಾಬ್ ಪ್ರಕಾರ, ಬೆಲ್ಲದ ಬಳಕೆ ಜೀವನವನ್ನು ಸುಖಮಯವಾಗಿಸುತ್ತದೆ (Happy Life) ಎನ್ನಲಾಗಿದೆ.

Jaggery Mythological Benefits - ಬೆಲ್ಲ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ (Jaggery Health Benefits) ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಆಧ್ಯಾತ್ಮಿಕವಾಗಿಯೂ (Mythological Benefits Of Using Jaggery) ಕೂಡ ಬೆಲ್ಲ ಅಷ್ಟೇ ಅದ್ಭುತ ಹಾಗೂ ಪರಿಣಾಮಕಾರಿಯಾಗಿದೆ. ಲಾಲ್ ಕಿತಾಬ್ ಪ್ರಕಾರ, ಬೆಲ್ಲದ ಬಳಕೆ ಜೀವನವನ್ನು ಸುಖಮಯವಾಗಿಸುತ್ತದೆ (Happy Life) ಎನ್ನಲಾಗಿದೆ. ಬೆಲ್ಲದ ವಿವಿಧ ಉಪಾಯಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಬರುವ ಆರ್ಥಿಕ ಸಮಸ್ಯೆಗಳಿಂದ (Financial Problem) ಮುಕ್ತಿಪಡೆಯಬಹುದು. ಬೆಲ್ಲದ ಕುರಿತಾದ ಈ ಉಪಾಯಗಳು (Jaggery Upaya) ಯಾವುವು ತಿಳಿದುಕೊಳ್ಳೋಣ ಬನ್ನಿ.

 

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನೂ ಆಧರಿಸಿದೆ. ಅನುಸರಿಸುವ ಮುನ್ನ  ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )

 

ಇದನ್ನೂ ಓದಿ-Vastu Tips: Kitchenನಲ್ಲಿ ಅಪ್ಪಿ-ತಪ್ಪಿಯೂ ಕೂಡ ಈ ವಸ್ತುಗಳನ್ನಿಡಬೇಡಿ, ಇಲ್ದಿದ್ರೆ ಆರ್ಥಿಕ ಸಂಕಷ್ಟದಿಂದ ಜೀವನವೇ ಗೋಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

1. ಹಣಕಾಸಿನ ಮುಗ್ಗಟ್ಟು ನಿವಾರಿಸುತ್ತದೆ - ತುಣುಕು ಬೆಲ್ಲ ಮತ್ತು ಒಂದು ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ದೇವಿ ಲಕ್ಷ್ಮಿಯ ಚರಣಗಳಲ್ಲಿ ಅರ್ಪಿಸಿ. ಈ ಗಂಟಿಗೆ ಧೂಪ-ದೀಪ ಬೆಳಗಿ ತಿಜೋರಿ ಅಥವಾ ಬೀರುವಿನಲ್ಲಿ ಅಥವಾ ಹಣವಿಡುವ ಯಾವುದೇ ಜಾಗದಲ್ಲಿ ಇರಿಸಿ. ಇದರಿಂದ ಜೀವನದಲ್ಲಿನ ಹಣಕಾಸಿನ ಮುಗ್ಗಟ್ಟು ದೂರವಾಗುತ್ತದೆ.

2 /5

2. ಸಾಲಬಾಧೆ ರೂರಾಗಿಸುತ್ತದೆ - ಬೆಲ್ಲದಿಂದ ತಯಾರಿಸಿದ ಸಿಹಿಯನ್ನು ಮಾಡಿ ಮಂಗಳವಾರ ಹನುಮಂತನಿಗೆ ಅರ್ಪಿಸಿ. ನೀವು ಬಯಸಿದರೆ, ಬೆಲ್ಲ ಮತ್ತು ಬೇಳೆಯನ್ನು ಸಹ ನೀಡಬಹುದು. ಈ ರೀತಿ ಮಾಡುವುದರಿಂದ ಮಂಗಳದ ಅಶುಭ ಪರಿಣಾಮವನ್ನು ಕೊನೆಗೊಳಿಸುತ್ತದೆ ಮತ್ತು ಜೀವನದಲ್ಲಿ ಸ್ಥಿರತೆ ಬರುತ್ತದೆ. ಅಲ್ಲದೆ, ಇದು ಹಣಕಾಸಿನ ತೊಂದರೆಗಳನ್ನು ನಿವಾರಿಸಿ, ಸಾಲದ ಹೊರಯನ್ನು ಕಡಿಮೆ ಮಾಡುತ್ತದೆ.

3 /5

3. ಕುಟುಂಬ ಸದಸ್ಯರ ನಡುವಿನ ವೈಮನಸ್ಯ ಅಂತ್ಯ ಮಾಡುತ್ತದೆ - ಕುಟುಂಬದ ಸದಸ್ಯರ ನಡುವೆ ವೈಮನಸ್ಯ ಅಥವಾ ಯಾವುದೇ ರೀತಿಯ ವಿವಾದಗಳಿದ್ದರೆ, ಅದನ್ನು ತೆಗೆದುಹಾಕಲು, ಮಂಗಳವಾರ ಅಥವಾ ಶನಿವಾರದಂದು, ಒಂದೂವರೆ ಕಿಲೋಗ್ರಾಂಗಳಷ್ಟು ಬೆಲ್ಲವನ್ನು ನೆಲದಲ್ಲಿ ಹೂತುಹಾಕಿ. ಕೌಟುಂಬಿಕ ಕಲಹಗಳು ಮತ್ತು ವಿವಾದಗಳು ಬೆಲ್ಲದ ಈ ಉಪಾಯದಿಂದ  ಕೊನೆಗೊಳ್ಳುತ್ತವೆ.

4 /5

4. ಶೀಘ್ರ ಕಂಕಣಬಲ ಕೂಡಿ ಬರಲು ಈ ಉಪಾಯ ಅನುಸರಿಸಿ - ಬೇಗನೆ ಕಂಕಣ ಬಲ ಕೂಡಿ ಬರಲು ಹಾಗೂ ದಾಂಪತ್ಯ ಜೀವನದಲ್ಲಿ ಬರುವ ಅಡೆತಡೆಗಳನ್ನೂ ನಿವಾರಿಸಲು ಬೆಲ್ಲ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಹಸುವಿಗೆ ಬೆಲ್ಲ ಮತ್ತು ಕಾಳು ತಿನ್ನಿಸಿ. ಇದಲ್ಲದೆ, ಹಿಟ್ಟಿನಲ್ಲಿ ಬೆಲ್ಲವನ್ನು ಬೆರೆಸಿ ಪೇಡಾ ಮಾಡಿ, ನಂತರ ಅದರ ಮೇಲೆ ಸ್ವಲ್ಪ ಅರಿಶಿನವನ್ನು ಹಚ್ಚಿ ಮತ್ತು ಅದನ್ನು ಹಸುವಿಗೆ ತಿನ್ನಿಸಿ.

5 /5

5. ನೌಕರಿಗಾಗಿ ಈ ಉಪಾಯ ಅನುಸರಿಸಿ - ನೀವು ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಹಲವಾರು ಸಂದರ್ಶನದ ನಂತರವೂ ನಿಮಗೆ ಕೆಲಸದಲ್ಲಿ ಯಶಸ್ಸು ಸಿಗದಿದ್ದರೆ, ಕೆಲಸ ಹುಡುಕುವ ಮೊದಲು, ರೊಟ್ಟಿಯಲ್ಲಿ ಬೆಲ್ಲವನ್ನು ಬೆರೆಸಿ ಹಸುವಿಗೆ ತಿನ್ನಿಸಿ.