ಮರ್ಯಾದಾ ಹತ್ಯೆ ಅಪರಾಧವಲ್ಲ, ಅದು ಪೋಷಕರು ತಮ್ಮ ಮಕ್ಕಳ ಮೇಲಿಟ್ಟಿರುವ ಪ್ರೀತಿ..! ಖ್ಯಾತ ನಟನ ವಿವಾದಾತ್ಮಕ ಹೇಳಿಕೆ

Ranjith on Honour Killing : ಮರ್ಯಾದಾ ಹತ್ಯೆ ಅಪರಾಧವಲ್ಲ, ಒಂದು ಒಂದು ರೀತಿಯ ಪ್ರೇಮ ಅಂತ ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.. ಅಲ್ಲದೆ, ಈ ರೀತಿಯ ಹತ್ಯೆಗಳನ್ನು ಪೋಷಕರು ತಮ್ಮ ಮಕ್ಕಳ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದನ್ನು ತೋರುತ್ತದೆ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ..

1 /7

ಮರ್ಯಾದಾ ಹತ್ಯೆಗಳನ್ನು ಕೂಡ ಪೋಷಕರು ತಮ್ಮ ಮಕ್ಕಳ ಮೇಲೆ ತೋರುವ ಪ್ರೀತಿಯಂತೆ ನೋಡಬೇಕು ಎಂದು ತಮಿಳು ಖ್ಯಾತ ನಟ ರಂಜಿತ್‌ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..  

2 /7

ಮರ್ಯಾದಾ ಹತ್ಯೆ ಕುರಿತು ತಮಿಳು ನಟ ರಂಜಿತ್‌ ಹೇಳಿಕೆ ವಿವಾದಾತ್ಮಕವಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡುವಾಗ, ರಂಜಿಂತ್, ಮರ್ಯಾದಾ ಹತ್ಯೆಗಳು ಅಪರಾಧವಲ್ಲ. ಅವುಗಳನ್ನು ಕೊಲೆ ಎಂದು ಪರಿಗಣಿಸಬಾರದು. ಈ ರೀತಿಯ ಹತ್ಯೆಗಳನ್ನು ಪೋಷಕರು ತಮ್ಮ ಮಕ್ಕಳ ಮೇಲೆ ತೋರುವ ಪ್ರೀತಿಯಂತೆ ನೋಡಬೇಕು ಎಂದು ವಿವಾದಾತ್ಮಕ ಕಾಮೆಂಟ್ ಮಾಡಿದ್ದಾರೆ.  

3 /7

ಈ ಹೇಳಿಕೆಯನ್ನು ನಟ ಆಗಸ್ಟ್ 9 ರಂದು ನೀಡಿದ್ದರು, ಈಗ ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಬೇರೆ ಜಾತಿಯ ಹುಡುಗಿ ಅಥವಾ ಹುಡುಗನಿಗೆ ಮದುವೆ ಮಾಡುವ ನೋವು ಪೋಷಕರಿಗೆ ಮಾತ್ರ ಗೊತ್ತು ಎಂದು ನಟ ರಂಜಿತ್ ಹೇಳಿದ್ದಾರೆ. ಸಧ್ಯ ರಂಜಿತ್ ವಿರುದ್ಧ ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

4 /7

ತಮ್ಮ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಮಕ್ಕಳು ಅನ್ಯ ಜಾತಿಯವರನ್ನು ಮದುವೆಯಾದಾಗ ಆದ ನೋವು ಪೋಷಕರಿಗೆ ಮಾತ್ರ ಗೊತ್ತು.. ತಂದೆ-ತಾಯಿಗಳಿಗೆ ಮಕ್ಕಳು ಕಾಣದಿದ್ದರೆ ನೋವಾಗುವುದಿಲ್ಲವೇ? ಆ ಸಮಯ ಅವರು ಕೋಪಗೊಳ್ಳುತ್ತಾರೆ, ಕೊಲ್ಲುತ್ತಾರೆ ಎಂದು ನಟ ಹೇಳಿದ್ದಾರೆ..  

5 /7

ರಂಜಿತ್ ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕಿರಿದಾದ ಬಟ್ಟೆ ತೊಡುವ ಮಹಿಳೆಯರು ಯಾರ ಮುಂದೆ ಬೇಕಾದರೂ ಕುಣಿಯುತ್ತಾರೆ ಎಂದು ಕಾಮೆಂಟ್‌ ಮಾಡಿದ್ದರು. ಆ ಸಮಯದಲ್ಲಿ, ಈ ಕಾಮೆಂಟ್ಗಳನ್ನು ತೀವ್ರವಾಗಿ ಟೀಕಿಸಲಾಯಿತು. ಇವರು ನಟಿಸಿ ನಿರ್ದೇಶಿಸಿದ "ಕವುಂಡಂಪಲಯಲಂ" ಚಿತ್ರವೂ ಹಲವು ವಿವಾದಾತ್ಮಕ ವಿಷಯಗಳನ್ನು ಹೊಂದಿತ್ತು.   

6 /7

ಅಲ್ಲದೆ, ಮಹಿಳೆಯರ ಕುರಿತಾದ ಸಂಭಾಷಣೆ ಈಗಾಗಲೇ ವಿವಾದಕ್ಕೀಡಾಗಿದೆ. ನೆಟ್ಟಿಗರು ರಂಜಿತ್ ಅವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಮರ್ಯಾದಾ ಹತ್ಯೆಯನ್ನು ಪ್ರೀತಿ ಎಂದು ಭಾವಿಸಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಇಂತಹವರು ಸಮಾಜಕ್ಕೆ ಅಪಾಯಕಾರಿ ಎನ್ನುತ್ತಾರೆ ನೆಟ್ಟಿಗರು.  

7 /7

ಇಂತಹವರನ್ನು ಜೈಲಿಗೆ ಹಾಕಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮರ್ಯಾದಾ ಹತ್ಯೆಗಳು ಸಮರ್ಥನೀಯವೇ..? ಕೆಲವರು ನೇರವಾಗಿ ನಟನಿಗೆ ಪ್ರಶ್ನಿಸುತ್ತಿದ್ದಾರೆ. ರಂಜಿತ್ ನಿಯಂತ್ರಣ ತಪ್ಪಿ ಮಾತನಾಡುತ್ತಿದ್ದು, ಮುಂದೆ ಇಂತಹ ಹೇಳಿಕೆ ನೀಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.