Mahalakshmi Yog 2024: ಹತ್ತು ವರ್ಷಗಳ ಬಳಿಕ ಮಹಾಲಕ್ಷ್ಮೀ ರಾಜಯೋಗ ನಿರ್ಮಾಣ, ಈ ಜನರಿಗೆ ಪ್ರಾಪ್ತಿಯಾಗಲಿದೆ ಕುಬೇರ ನಿಧಿ!

Mahalakshmi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಹಾಲಕ್ಷ್ಮೀ ರಾಜಯೋಗ ರಚನೆಯಾಗಿದ್ದು, ಇದು ಹಲವು ಜಾತಕದವರ ಮೇಲೆ ಪ್ರಭಾವ ಬೀರಲಿದ್ದು, ಮೂರು ರಾಶಿಗಳ ಜನರಿಗೆ ಧನ ಕುಬೇರ ನಿಧಿ ಪ್ರಾಪ್ತಿಯ ಯೋಗವನ್ನು ರೂಪಿಸುತ್ತಿದೆ.  (Spiritual News In Kannada)
 

ಬೆಂಗಳೂರು: ಜನವರಿ 18, 2024 ರಂದು ಧನ-ವೈಭವದಾತ ಶುಕ್ರನು ಧನು ರಾಶಿಗೆ ಪ್ರವೇಶಿಸಿದ್ದಾನೆ. ಆದರೆ, ಧನು ರಾಶಿಯಲ್ಲಿ ಈಗಾಗಲೇ ಮಂಗಳ ಹಾಗೂ ಬುಧರು ವಿರಾಜಮಾನನಾಗಿರುವ ಕಾರಣ ಅಲ್ಲಿ ಮಂಗಳ, ಬುಧ ಹಾಗೂ ಶುಕ್ರರ ತ್ರಿಗ್ರಹಿ ಯೋಗ, ಲಕ್ಷ್ಮಿನಾರಾಯಣ ಯೋಗ, ಮಹಾಲಕ್ಷ್ಮೀ ಯೋಗ ಸೇರಿದಂತೆ ಹಲವು ಶುಭಯೋಗಗಳು ಏಕಕಾಲಕ್ಕೆ ರಚನೆಯಾಗುತ್ತಿದ್ದು, ಅವುಗಳ ಪ್ರಭಾವ ಎಲ್ಲಾ ರಾಶಿಗಳ ಜನರ ಮೇಲೆ ಗೋಚರಿಸಲಿದೆ. ಅದರಲ್ಲಿಯೂ ವಿಶೇಷವಾಗಿ, ಮೂರು ರಾಶಿಗಳ ಜನರಿಗೆ ಅಪಾರ ಆಕಸ್ಮಿಕ ಧನಲಾಭ ಸಿಗುವ ಸಾಧ್ಯತೆ ಇದೆ. ಬನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-Suya Sharavan Gochar 2024: ಶ್ರವಣ ನಕ್ಷತ್ರಕ್ಕೆ ಸೂರ್ಯನ ಪ್ರವೇಶ ಈ ರಾಶಿಗಳ ಜನರ ಮೇಲೆ ಹಣದ ಭಾರಿ ಸುರಿಮಳೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Mahalakshmi Yog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಹಾಲಕ್ಷ್ಮೀ ರಾಜಯೋಗ ರಚನೆಯಾಗಿದ್ದು, ಇದು ಹಲವು ಜಾತಕದವರ ಮೇಲೆ ಪ್ರಭಾವ ಬೀರಲಿದ್ದು, ಮೂರು ರಾಶಿಗಳ ಜನರಿಗೆ ಧನ ಕುಬೇರ ನಿಧಿ ಪ್ರಾಪ್ತಿಯ ಯೋಗವನ್ನು ರೂಪಿಸುತ್ತಿದೆ.  (Spiritual News In Kannada)  

2 /5

ಮೇಷ ರಾಶಿ: ಶುಕ್ರ ನಿಮ್ಮ ಜಾತಕದ ನವಮ ಭಾವದಲ್ಲಿ ಷಂಚರಿಸುತ್ತಿದ್ದಾನೆ. ಇದರಿಂದ ನಿಮ್ಮ ನಿಂತುಹೋದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸ-ಕಾರ್ಯಗಳ ನಿಮಿತ್ತ ದೇಶ-ವಿದೇಶಕ್ಕೆ ಯಾತ್ರೆ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ಲವ್ ಲೈಫ್ ಇರುವವರಿಗೆ ಈ ಗೋಚರ ಕಾಲದಲ್ಲಿ ಸಕಾರಾತ್ಮಕ ಪರಿಣಾಮಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನೀವು ಯಾವುದಾದರೊಂದು ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಶುಕ್ರ ನಿಮ್ಮ ಜಾತಕದ ಎರಡನೇ ಹಾಗೂ ಸಪ್ತಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಅಪಾರ ಆಕಸ್ಮಿಕ ಧನಲಾಭ ಸಿಗಲಿದೆ. ವಿವಾಹಿತರ ವೈವಾಹಿಕ ಜೀವನ ಸುಮಧುರತೆಯಿಂದ ಕೂಡಿರಲಿದೆ.   

3 /5

ಧನು ರಾಶಿ: ಮಹಾಲಕ್ಷ್ಮೀ ರಾಜಯೋಗದ ಈ ಅವಧಿಯಲ್ಲಿ ಶುಕ್ರ ನಿಮ್ಮ ರಾಶಿಗೆ ಪ್ರವೇಶಿಸಿರುವುದು ತುಂಬಾ ವಿಶೇಷವಾಗಿದೆ. ಇದರಿಂದ ನಿಮಗೆ ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡರ್ಲ್ಲಿಯೋ ಕೂಡ ಹೊಸ ಗುರುತು ಸಿಗಲಿದೆ. ಸ್ವಂತ ವ್ಯಾಪಾರ ಮಾಡುತ್ತಿದ್ದರೆ, ಈ ಗೋಚರ ಕಾಲದಲ್ಲಿ ನಿಮಗೆ ಮನಸೋಇಚ್ಛೆ ಲಾಭ ಸಿಗಲಿದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಹೆಚ್ಚು ಬಲಿಷ್ಠವಾಗಲಿದೆ. ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ., ಆಸೆ ಆಕಾಂಕ್ಷೆಗಳು ಈಡೇರಲಿವೆ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ನೋಡಲು ಸಿಗಲಿದೆ.   

4 /5

ವೃಶ್ಚಿಕ ರಾಶಿ: ಮಹಾಲಕ್ಷ್ಮೀ ರಾಜಯೋಗದ ಈ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಸಂಚರಿಸಲಿದ್ದಾನೆ, ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕಾಲಕಾಲಕ್ಕೆ ಅಪಾರ ಆಕಸ್ಮಿಕ ಧನ ಪ್ರಾಪ್ತಿಯಾಗಲಿದೆ. ನೌಕರಿಯ ಹುಡುಕಾಡದಲ್ಲಿದ್ದರೆ, ಈ ಗೋಚರ ಕಾಲದಲ್ಲಿ ನಿಮಗೆ ಒಳ್ಳೆಯ ನೌಕರಿಯ ಪ್ರಸ್ತಾಪಗಳು ಸಿಗಲಿವೆ. ಆದಾಯ ಹೆಚ್ಚಳಕ್ಕೆ ಇತರ ಮಾರ್ಗಗಳೂ ಕೂಡ ತೆರೆದುಕೊಳ್ಳಲಿವೆ. ಬಾಳಸಂಗಾತಿಯ ಬೆಂಬಲ ನಿಮಗೆ ಸಿಗಲಿದೆ. ಈ ಗೋಚರ ಕಾಲದಲ್ಲಿ ಹೊಸ ಸಂಬಂಧಗಳನ್ನು ಮಾಡಿಕೊಳ್ಳುವಿರಿ ಮತ್ತು ಭವಿಷ್ಯದಲ್ಲಿ ಅವುಗಳಿಂದ ನಿಮಗೆ ಲಾಭ ಸಿಗಲಿದೆ.    

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)