Money Tips: ಕಡಿಮೆ ಸಮಯದಲ್ಲಿ ಶ್ರೀಮಂತರಾಗಬೇಕೆಂದರೆ ಇಂದೇ ಈ ಜ್ಯೋತಿಷ್ಯ ಪರಿಹಾರ ಪಾಲಿಸಿ

Vastu Tips For Money Saving: ಈ ಸಲಹೆ ಪಾಲಿಸುವ ಮೂಲಕ ನಿಮ್ಮ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ನಿಮ್ಮ ಗಳಿಕೆಯು ಹೆಚ್ಚಾಗುತ್ತದೆ.

ಹಣ ಉಳಿತಾಯಕ್ಕಾಗಿ ವಾಸ್ತು ಸಲಹೆಗಳು: ಯಾವುದೇ ವ್ಯಕ್ತಿ ರಾಜನಂತೆ ಬದುಕಲು ಮತ್ತು ಪ್ರಪಂಚದ ಎಲ್ಲಾ ಸೌಕರ್ಯಗಳನ್ನು ಆನಂದಿಸಲು ಬಯಸುತ್ತಾನೆ. ಇದಕ್ಕಾಗಿ ಬಹುತೇಕರು ರಕ್ತ ಮತ್ತು ಬೆವರು ಸುರಿಸಿ ಕೆಲಸ ಮಾಡಿ ಹಣ ಸಂಪಾದಿಸುತ್ತಾರೆ. ಆದರೆ ಕೆಲವೇ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಹಣ ಗಳಿಸಿ ಯಶಸ್ವಿಯಾಗುತ್ತಾರೆ. ಆದರೆ ಕೆಲವರು ಕಷ್ಟಪಟ್ಟು ದುಡಿದರೂ ಪ್ರಯೋಜವಾಗುವುದಿಲ್ಲ. ಅವರು ಹಣಕಾಸಿನ ಸಮಸ್ಯೆಯಿಂದ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಂದು ನಾವು ನಿಮಗೆ ಜ್ಯೋತಿಷ್ಯದ ಕೆಲವು ಪರಿಹಾರಗಳನ್ನು ತಿಳಿಸಿಕೊಡಲಿದ್ದೇವೆ. ಈ ಸಲಹೆ ಪಾಲಿಸುವ ಮೂಲಕ ನಿಮ್ಮ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ನಿಮ್ಮ ಗಳಿಕೆಯು ಹೆಚ್ಚಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಿಗಬೇಕೆಂದರೆ ಮತ್ತು ನೀವು ಬಹಳಷ್ಟು ಹಣ ಗಳಿಸಲು ಬಯಸಿದರೆ, ಮನೆಯ ಕಮಾನುಗಳಲ್ಲಿ ತಾಯಿ ಲಕ್ಷ್ಮಿದೇವಿ ಕುಳಿತುಕೊಳ್ಳುವ ಪ್ರತಿಮೆಯ ಜೊತೆಗೆ ಅರಳಿ ಮರದ ಎಲೆಯ ಮೇಲೆ ಸ್ವಸ್ತಿಕ ಚಿಹ್ನೆ ಇರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯ ಕೃಪೆಯಿಂದ ಸಂಪತ್ತಿನಲ್ಲಿ ಸಾಕಷ್ಟು ಪ್ರಗತಿಯಾಗುತ್ತದೆ.

2 /6

ನಿಮ್ಮ ಯಾವುದೇ ಕೆಲಸ ಬಹಳ ಸಮಯದಿಂದ ನಿಂತಿದ್ದರೆ ಮತ್ತು ನಿಮ್ಮ ಪ್ರಯತ್ನಗಳ ಹೊರತಾಗಿಯೂ ಯಶಸ್ಸು ಸಿಗದಿದ್ದರೆ, ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಬೇಕು. ಮಂಗಳವಾರ ಸುಂದರಕಾಂಡವನ್ನು ಪಠಿಸಿ ಮತ್ತು ಹನುಮಂತನಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸುವ ಮೂಲಕ ಪ್ರಸಾದವನ್ನು ವಿತರಿಸಿ. ಹೀಗೆ ಮಾಡುವುದರಿಂದ ನಿಮ್ಮ ಅತ್ಯಂತ ಕಷ್ಟಕರವಾದ ಕೆಲಸ ಯಶಸ್ವಿಯಾಗುತ್ತದೆ.      

3 /6

ಲಕ್ಷ್ಮಿದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರಬೇಕೆಂದು ಬಯಸಿದರೆ, ಪ್ರತಿದಿನ ಬೆಳಗ್ಗೆ ಎದ್ದು ನಿಮ್ಮ ಅಂಗೈಗಳನ್ನು ನೋಡಿ. ಹಾಗೆಯೇ ತಾಯಿ ಲಕ್ಷ್ಮಿದೇವಿಯ "ಕರಾಗ್ರೇ ವಸತೇ ಲಕ್ಷ್ಮಿ" ಮಂತ್ರವನ್ನು ಜಪಿಸಿ. ಇದರ ನಂತರ ಭೂಮಿಗೆ ಕಾಲಿಡುವ ಮೊದಲು ನಮಸ್ಕರಿಸಿ. ಹೀಗೆ ಮಾಡುವುದರಿಂದ ನಿಮ್ಮ ಇಡೀ ದಿನ ಸಂತೋಷವಾಗಿರುತ್ತದೆ.

4 /6

ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆ ಮತ್ತು ಯಾವಾಗಲೂ ಸಂತೋಷದಿಂದ ಬದುಕಬೇಕೆಂದು ಬಯಸಿದರೆ, ಪ್ರತಿ ಶನಿವಾರ ಅರಳಿ ಮರಕ್ಕೆ ನೀರನ್ನು ಅರ್ಪಿಸಿ. ಅಲ್ಲದೆ ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.

5 /6

ನೀವು ಬಹಳಷ್ಟು ಹಣ ಗಳಿಸಿದರೂ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲವಾ? ನೀವು ಗಳಿಸಿದ ಹಣ ಬಹುಬೇಗನೆ ಖರ್ಚಾಗುತ್ತಿದ್ದರೆ 21 ಅಕ್ಕಿಯನ್ನು ನಿಮ್ಮ ಪರ್ಸ್‌ನಲ್ಲಿರಿಸಿ. ಹೀಗೆ ಮಾಡುವುದರಿಂದ ಅನಗತ್ಯ ಖರ್ಚು ನಿಲ್ಲುತ್ತದೆ.

6 /6

ನಿಮ್ಮ ಯಾವುದೇ ಆಸೆಗಳು ಬಹಳ ದಿನಗಳಿಂದ ನೆರವೇರದಿದ್ದರೆ, ಕೆಂಪು ಬಣ್ಣದ ಕಾಗದದ ಮೇಲೆ ನಿಮ್ಮ ಆಸೆಯನ್ನು ಬರೆದು ಮನೆಯ ದೇವಸ್ಥಾನದಲ್ಲಿ ಇರಿಸಿ. ಇದರೊಂದಿಗೆ ನಿತ್ಯವೂ ಧೂಪದೀಪದಿಂದ ಪೂಜೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಈಡೇರುತ್ತದೆ. (ಗಮನಿಸಿರಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ವಿವಿಧ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ದೃಢಪಡಿಸುವುದಿಲ್ಲ.)