Astro Tips : ಈ ಮರಗಳಿಗೆ ದಾರ ಸುತ್ತಿ, ಪೂಜೆ ಮಾಡಿದ್ರೆ ಅದೃಷ್ಟ ಬದಲಾಗುತ್ತೆ, ಆರ್ಥಿಕ ವೃದ್ಧಿಯಾಗುತ್ತೆ

Auspicious trees : ದಾರವನ್ನು ಮರಕ್ಕೆ ಸುತ್ತುವುದರ ಬಹ್ಹೆ ವಿಶೇಷ ಮಹತ್ವವನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಸನಾತನ ಧರ್ಮದಲ್ಲಿ ಇಂತಹ ಹಲವು ಪೂಜೆಗಳಿದ್ದು, ಅದರಲ್ಲಿ ಮರ-ಗಿಡಗಳಿಗೆ ದಾರವನ್ನು ಕಟ್ಟುವ ಸಂಪ್ರದಾಯವಿದೆ. ಇಂತಹ ಅನೇಕ ಮರಗಳು ಮತ್ತು ಸಸ್ಯಗಳು ಇವೆ.

Auspicious trees : ದಾರವನ್ನು ಮರಕ್ಕೆ ಸುತ್ತುವುದರ ಬಹ್ಹೆ ವಿಶೇಷ ಮಹತ್ವವನ್ನು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಸನಾತನ ಧರ್ಮದಲ್ಲಿ ಇಂತಹ ಹಲವು ಪೂಜೆಗಳಿದ್ದು, ಅದರಲ್ಲಿ ಮರ-ಗಿಡಗಳಿಗೆ ದಾರವನ್ನು ಕಟ್ಟುವ ಸಂಪ್ರದಾಯವಿದೆ. ಇಂತಹ ಅನೇಕ ಮರಗಳು ಮತ್ತು ಸಸ್ಯಗಳು ಇವೆ, ಅವು ಧರ್ಮಗ್ರಂಥಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಅವುಗಳನ್ನು ಪೂಜಿಸುವುದರಿಂದ ದೇವತೆಗಳ ಅನುಗ್ರಹ ದೊರೆಯುತ್ತದೆ. ಈ ಮರಗಳನ್ನು ನೆಟ್ಟು ಸೇವೆ ಮಾಡುವುದರಿಂದ ಜೀವನದಲ್ಲಿ ಹಣದ ಕೊರತೆಯಿರುವುದಿಲ್ಲ ಎಂಬ ನಂಬಿಕೆ ಇದೆ. ಇದರೊಂದಿಗೆ ಸಂಪತ್ತು ಪ್ರಾಪ್ತಿಯಾಗುತ್ತದೆ.  

1 /5

ಗುರುವಾರದಂದು ಬಾಳೆಗಿಡಕ್ಕೆ ಪೂಜೆ ಸಲ್ಲಿಸುವುದರ ವಿಶೇಷ ಮಹತ್ವವನ್ನು ಪುರಾಣಗಳಲ್ಲಿ ತಿಳಿಸಲಾಗಿದೆ. ಆಲದ ಮರವನ್ನು ಪೂಜಿಸುವುದರ ಜೊತೆಗೆ ಅದರ ಮೇಲೆ ದಾರವನ್ನು ಕಟ್ಟಿದರೆ ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಲಕ್ಷ್ಮಿಯ ಆಶೀರ್ವಾದವೂ ಸಿಗುತ್ತದೆ.

2 /5

ಈ ಸಸ್ಯವು ಶಿವನಿಗೆ ಬಹಳ ಪ್ರಿಯವಾಗಿದೆ. ಶನಿ ದೇವ ಕೂಡ ಶಮಿಯ ಗಿಡವನ್ನು ಪ್ರೀತಿಸುತ್ತಾನೆ. ಶಿವನ ಆಶೀರ್ವಾದ ಪಡೆಯಲು ಮತ್ತು ಶನಿ ದೋಷವನ್ನು ತೊಡೆದುಹಾಕಲು, ಮನೆಯಲ್ಲಿ ಶಮಿ ಗಿಡವನ್ನು ನೆಡಲು ಸಲಹೆ ನೀಡಲಾಗುತ್ತದೆ. 

3 /5

ಆಲದ ಮರದ ವಿಶೇಷ ಪ್ರಾಮುಖ್ಯತೆಯನ್ನು ಜ್ಯೋತಿಷ್ಯದಲ್ಲಿಯೂ ವಿವರಿಸಲಾಗಿದೆ. ವಟ ಸಾವಿತ್ರಿ ವ್ರತದ ಸಮಯದಲ್ಲಿ ಮಾತ್ರ ಮಹಿಳೆಯರು ಆಲದ ಮರವನ್ನು ಪೂಜಿಸುತ್ತಾರೆ. ಆಲದ ಮರವನ್ನು ಪೂಜಿಸಿ ಅದರಲ್ಲಿ ದಾರವನ್ನು ಕಟ್ಟುವುದರಿಂದ ಸ್ತ್ರೀಯರ ಮಾಂಗಲ್ಯ ರಕ್ಷಣೆಯಾಗುತ್ತದೆ ಎಂಬುದು ಪ್ರತೀತಿ. ಅಷ್ಟೇ ಅಲ್ಲ ಅಕಾಲ ಮರಣದಂತಹ ಯೋಗಗಳೂ ದೂರವಾಗುತ್ತವೆ. ಅವರ ಪತಿಯ ಆಯಸ್ಸು ವೃದ್ಧಿಯಾಗುತ್ತದೆ.

4 /5

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿ ಗಿಡದಲ್ಲಿ ತಾಯಿ ತುಳಸಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಇದು ಅತ್ಯಂತ ಪವಿತ್ರವಾದ ಸಸ್ಯವಾಗಿದೆ. ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ನಿತ್ಯ ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ತುಳಸಿ ಗಿಡಕ್ಕೆ ದಾರವನ್ನು ಕಟ್ಟಿದರೆ ಆ ಕುಟುಂಬಕ್ಕೆ ಯಾವುದೇ ವಿಪತ್ತು ಬರುವುದಿಲ್ಲ ಎಂಬ ಪ್ರತೀತಿಯೂ ಇದೆ.

5 /5

ಹಿಂದೂ ಧರ್ಮದಲ್ಲಿ ಅರಳಿ ಮರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಶಿವನು ಈ ಮರದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಇದರ ಎಲೆಗಳಲ್ಲಿ ದೇವತೆಗಳು ನೆಲೆಸಿದ್ದಾರೆ. ಮಂಗಳವಾರ ಮತ್ತು ಶುಕ್ರವಾರದಂದು ಅರಳಿ ಮರವನ್ನು ಪೂಜಿಸಿ, ಅದರ ಮೇಲೆ ದಾರವನ್ನು ಕಟ್ಟಿದರೆ, ವ್ಯಕ್ತಿಯ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ ಎಂಬ ನಂಬಿಕೆಯಿದೆ.