ಸ್ವಂತ ತಮ್ಮನ ಮೇಲೆಯೇ ಕೈ ಮಾಡಿದ ನಟ ಚಿರಂಜೀವಿ..! ರಾಮ-ಲಕ್ಷ್ಮಣರಂತಿದ್ದ ಅಣ್ಣ-ತಮ್ಮಂದಿರ ಮಧ್ಯ ಏನಾಯಿತು..?

Chiranjeevi beat Nagababu : ಟಾಲಿವುಡ್‌ನಲ್ಲಿ ಒಟ್ಟಿಗೆ ಬಾಳುತ್ತಿರುವ ಕುಟುಂಬದಲ್ಲಿ ಮೆಗಾ ಫ್ಯಾಮಿಲಿಯೂ ಒಂದು.. ಪವನ್‌ ಕಲ್ಯಾಣ್‌, ನಾಗಬಾಬು, ಚಿರಂಜೀವಿ ಒಟ್ಟಾಗಿ, ರಾಮ ಲಕ್ಷ್ಮಣ, ಭರತಂತೆ ಬಾಳುತ್ತಿದ್ದಾರೆ.. ಆದ್ರೆ ಇತ್ತೀಚಿಗೆ ಚಿರು ಸ್ವತಃ ತಮ್ಮನಿಗೆ ಹೊಡೆದ ವಿಚಾರವೊಂದು ಟಾಲಿವುಡ್‌ನಲ್ಲಿ ಸಂಚಲನ ಮೂಡಿಸುತ್ತಿದೆ..
 

1 /7

ಚಿರಂಜೀವಿ ತಮ್ಮ ಸ್ವಂತ ಪ್ರಯತ್ನದಿಂದ ಟಾಲಿವುಡ್‌ನಲ್ಲಿ ಅಪ್ರತಿಮ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರು ಹಾಕಿದ ದಾರಿಯಲ್ಲಿಯೇ ಇಂದು ಮೆಗಾ ಹೀರೋಗಳು ಯಶಸ್ವಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಅದರಲ್ಲೂ ಚಿರಂಜೀವಿ ತಮ್ಮ ಕಿರಿಯ ಸಹೋದರರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನಾಗಬಾಬು ಮತ್ತು ಪವನ್ ಕಲ್ಯಾಣ್ ಚಿರುಗೆ ತುಂಬಾ ಇಷ್ಟ.   

2 /7

ನಾಗಬಾಬು ಅವರನ್ನು ಹೀರೋ ಮಾಡಲು ಚಿರಂಜೀವಿ ಬಹಳ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ, ಹಾಗಾಗಿ ಅವರು ನಿರ್ಮಾಪಕರಾದರು. ಆದರೆ, ಚಿರಂಜೀವಿ ಅಭಿನಯದ ನಾಗಬಾಬು ನಿರ್ಮಿಸಿದ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಮತ್ತೊಂದೆಡೆ, ಗೀತಾ ಆರ್ಟ್ಸ್ ಚಿರಂಜೀವಿ ಜೊತೆ ಬ್ಲಾಕ್ ಬಸ್ಟರ್ ನಿರ್ಮಿಸುವ ಮೂಲಕ ದೊಡ್ಡ ನಿರ್ಮಾಣ ಕಂಪನಿಯಾಗಿ ಬೆಳೆದಿದೆ.  

3 /7

ಇನ್ನೊಂದೆಡೆ ಪವನ್ ಕಲ್ಯಾಣ್ ಸ್ಟಾರ್ ಹೀರೋ ಆದರು. ಪವರ್‌ ಸ್ಟಾರ್‌ ಟಾಲಿವುಡ್ ಸ್ಟಾರ್‌ ಹೀರೋಗಳಲ್ಲಿ ಒಬ್ಬರು. ಸಧ್ಯ ಅವರು ಆಂಧ್ರ ಪ್ರದೇಶ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪವನ್‌ಗೆ ಜೊತೆಯಾಗಿ ನಾಗಬಾಬು ಅವರು ಸದಾ ಜೊತೆಯಲ್ಲಿರುತ್ತಾರೆ..  

4 /7

ಸಂದರ್ಭ ಬಂದಾಗಲೆಲ್ಲಾ... ಚಿರಂಜೀವಿ ತಮ್ಮ ಇಬ್ಬರು ಕಿರಿಯ ಸಹೋದರರೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಳ್ಳುತ್ತಾರೆ. ಈ ಪೈಕಿ ಒಮ್ಮೆ ನಾಗಬಾಬು ಅವರನ್ನು ಚಿರಂಜೀವಿ ಹೊಡೆದ ವಿಚಾರವನ್ನು ಹೇಳಿಕೊಂಡಿದ್ದಾರೆ. ತಮ್ಮ ಬಾಲ್ಯದಲ್ಲಿ ನಡೆದ ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಮೆಗಾಸ್ಟಾರ್‌ ಬಹಿರಂಗಪಡಿಸಿದ್ದಾರೆ.   

5 /7

ಬಾಲ್ಯದ ದಿನಗಳಲ್ಲಿ ನನ್ನ ತಾಯಿಗೆ ನಾನು ಸಹಾಯ ಮಾಡುತ್ತಿದೆ. ಒಂದು ದಿನ ಬಟ್ಟೆಯನ್ನು ಲಾಂಡ್ರಿಯಿಂದ ತೆಗೆದುಕೊಂಡು ಬರಬೇಕಾಗಿತ್ತು. ಅದೇ ಸಮಯದಲ್ಲಿ ನನಗೆ ಮುಖ್ಯವಾದ ಕೆಲಸ ಇತ್ತು. ಹಾಗಾಗಿ ನಾನು ಹೊರಗೆ ಹೋಗುತ್ತಿದ್ದೇನೆ, ಲಾಂಡ್ರಿಗೆ ಹೋಗಿ ಬಟ್ಟೆ ತೆಗೆದುಕೊಂಡು ಬಾ ಅಂತ ನಾಗಬಾಬುಗೆ ಹೇಳಿದ್ದೆ..  

6 /7

ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ನಾಗಬಾಬುಗೆ ಬಟ್ಟೆ ತಂದಿದ್ದೀಯಾ..? ಅಂತ ಕೇಳಿದೆ. ಆಗ ಅವನು ಇಲ್ಲ ಎಂ.. ಹೇಳಿದ ಒಂದು ಕೆಲಸವನ್ನ ಏಕೆ ಮಾಡಲಿಲ್ಲ ಎಂದು ನಾನು ಕೇಳಿದೆ. ನಾನು ಮಲಗಿದ್ದೇ ಅಂತ ನಾಗಬಾಬು ಉತ್ತರಿಸಿದ. ನಾನು ಕೋಪಗೊಂಡು ಅವನಿಗೆ ಹೊಡೆದೆ.. ತಮ್ಮನಿಗೆ ಹೊಡೆದಿದ್ದಕ್ಕೆ ಅಮ್ಮನಿಗೆ ನನ್ನ ಮೇಲೆ ಕೋಪ ಬಂದಿತ್ತು.   

7 /7

ಸಂಜೆ ಅಪ್ಪ ಬಂದಾಗ ನಡೆದದ್ದನ್ನೆಲ್ಲ ಹೇಳಿದೆ. ತಂದೆ ನಾಗಬಾಬುಗೆ ಗದರಿಸಿದರು. ಆಗ ನನಗೆ ತೃಪ್ತಿಯಾಯಿತು.. ಅಂತ ತಮ್ಮ ಬಾಲ್ಯದಲ್ಲಿ ನಡೆದ ಘಟನೆಯನ್ನು ಮೆಗಾಸ್ಟಾರ್‌ ಚಿರಂಜೀವಿ ನೆನಪಿಸಿಕೊಂಡರುವ..  ಇಂದಿಗೂ ಮೆಗಾ ಫ್ಯಾಮಿಲಿ ತುಂಬಾ ಅನ್ಯೋನ್ಯವಾಗಿ, ಸಂತೋಷವಾಗಿ ಒಟ್ಟಾಗಿ ಸುಖ ಜೀವನ ನಡೆಸುತ್ತಿದೆ..