/kannada/photo-gallery/anchor-anushree-marriage-video-goes-viral-on-social-media-249530  Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?! Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?! 249530

ದಿನಭವಿಷ್ಯ 07-10-2024: ನವರಾತ್ರಿಯ ಐದನೇ ದಿನ ಅನುರಾಧಾ ನಕ್ಷತ್ರ, ಪ್ರೀತಿ ಯೋಗದಿಂದ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ

Today Horoscope 07th October 2024: ನವರಾತ್ರಿಯ ಐದನೇ ದಿನ ಅನುರಾಧಾ ನಕ್ಷತ್ರ, ಪ್ರೀತಿ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 7, 2024, 08:03 AM IST
  • ದಿನ: ಸೋಮವಾರ
  • ಪಕ್ಷ: ಶುಕ್ಲ ಪಕ್ಷ
  • ತಿಥಿ, ನಕ್ಷತ್ರ: ಚತುರ್ಥಿ ತಿಥಿ, ಅನುರಾಧಾ ನಕ್ಷತ್ರ
ದಿನಭವಿಷ್ಯ 07-10-2024:  ನವರಾತ್ರಿಯ ಐದನೇ ದಿನ ಅನುರಾಧಾ ನಕ್ಷತ್ರ, ಪ್ರೀತಿ ಯೋಗದಿಂದ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿ  title=

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿಯ ಈ ದಿನ ಸೋಮವಾರ ಅನುರಾಧಾ ನಕ್ಷತ್ರ ಪ್ರೀತಿ ಯೋಗ, ಬವ ಕರಣ ಇರಲಿದೆ. ಇಂದು ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಬೆಟ್ಟದಷ್ಟು ಆಕಾಂಕ್ಷೆಗಳೊಂದಿಗೆ ನಿಮ್ಮನ್ನೇ ಎದುರು ನೋಡುತ್ತಿರುವ ನಿಮ್ಮ ಸಂಗಾತಿಗೆ ನಿರಾಶೆ ಮಾಡದಿರಿ. ಕುಟುಂಬ ಸದಸ್ಯರ ನಿರೀಕ್ಷೆಗಳನ್ನು ಹುಸಿಗೊಳಿಸದೆ ಕಷ್ಟಪಟ್ಟು ನಿಮ್ಮ ಗುರಿ ಸಾಧಿಸಿ. ಯಾವುದೇ ವಿಚಾರಗಳನ್ನು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಆರ್ಥಿಕ ವಿಷಯಗಳ ಬಗ್ಗೆ ಕುಟುಂಬದವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿ. ಹಣಕಾಸಿನ ಸ್ಥಿತಿ ಬಿಗಿಯಾಗಿರುವುದರಿಂದ ಯೋಚಿಸಿ ಖರ್ಚು ಮಾಡಿ. ಜೀವನಶೈಲಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವ ಮೂಲಕ ಧನಾತ್ಮಕ ಫಲಗಳನ್ನು ಅನುಭವಿಸುವಿರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಹೆಚ್ಚಿನ ಆತ್ಮವಿಶ್ವಾಸವು ಜೀವನದ ಕಡೆಗೆ ನಿಮ್ಮ ಸಂಪೂರ್ಣ ದೃಷ್ಟಿಕೋನವನ್ನು ಬದಲಾಯಿಸುತ್ತದೆ.  ಸರಿಯಾದ ಸಮಯದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಇದ್ದಲ್ಲಿ ಅವಕಾಶಗಳು ಕೈತಪ್ಪಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಉದ್ಯೋಗ ಬದಲಾವಣೆಗಾಗಿ ಯೋಚಿಸುತ್ತಿರುವವರಿಗೆ ಶುಭ ಸಮಯ. ಕೆಲಸಕ್ಕೆ ಸಂಬಂಧಿಸಿದ ನಿಮ್ಮ ಪ್ರಯತ್ನಗಳು ಫಲಪ್ರದ ಫಲಿತಾಂಶಗಳನ್ನು ನೀಡುತ್ತವೆ. ಕುಟುಂಬದಲ್ಲಿ ಆತ್ಮೀಯರೊಂದಿಗೆ ಮೂಡಿದ್ದ ಭಿನ್ನಾಭಿಪ್ರಾಯಗಳಿಂದ ಮುಕ್ತಿ ದೊರೆಯಲಿದೆ. 

ಇದನ್ನೂ ಓದಿ- ಈ ರಾಶಿಯವರಿಗೆ ಶನಿ ಬಲ: ಕೈಗೂಡುವುದು ಹಿಡಿದೆಲ್ಲಾ ಕೆಲಸ, ಹರಿಯುವುದು ಹಣದ ಹೊಳೆ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ವೃತ್ತಿಪರರಿಗೆ ಹೊಸ ಜವಾಬ್ದಾರಿಗಳು ಲಭಿಸಲಿವೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲದಿಂದಾಗಿ ಮನಸ್ಸಿಗೆ ಉಲ್ಲಾಸವಾಗಲಿದೆ. ವೈಯಕ್ತಿಕ ಜೀವನದಲ್ಲಿ ವಿಷಯಗಳು ಧನಾತ್ಮಕವಾಗಿ ಬದಲಾಗಲಿವೆ. ಕೆಟ್ಟ ಸಮಯ ಕಳೆದು ಒಳ್ಳೆಯ ಸಮಯ ಕೂಡಿ ಬರುವ ಸುವರ್ಣ ಸಮಯ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಉದ್ಯೋಗಸ್ಥರು ಕಚೇರಿ ಸಹೋದ್ಯೋಗಿಗಳೊಂದಿಗೆ ಉತ್ಸಾಹಭರಿತವಾಗಿ ಕೆಲಸ ನಿರ್ವಹಿಸುವಿರಿ. ಜೀವನದ ಬಗೆಗಿನ ನಿಮ್ಮ ಸಂಪೂರ್ಣ ಮನೋಭಾವವು ಸಂಪೂರ್ಣ ಬದಲಾವಣೆಗೆ ಒಳಗಾಗುವ ಸಾಧ್ಯತೆ ಇದೆ. ಇದು ನಿಮ್ಮನ್ನು ಕಾಲಕ್ಕೆ ತಕ್ಕಂತೆ ವಿಭಿನ್ನ ವ್ಯಕ್ತಿಯಾಗಿ ಬದಲಾಯಿಸಲಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯ ಜನರಿಗೆ ಇಂದು ಅಹಿತಕರ ಸುದ್ದಿ ಮನಸ್ಸನ್ನು ಗಾಸಿಗೊಳಿಸಬಹುದು. ಉದ್ಯೋಗಸ್ಥರಿಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಕೆಲಸದಲ್ಲಿನ ನಿರ್ಲಕ್ಷ್ಯವು ನಿಮ್ಮ ಮೇಲಾಧಿಕಾರಿಗಳ ಕೋಪಕ್ಕೆ ಕಾರಣವಾಗಬಹುದು. ಹಣಕಾಸಿನ ವಿಷಯದಲ್ಲಿ ಯಾರನ್ನೂ ನಂಬಬೇಡಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ನಿಮಗಿಂದು ವಿಶೇಷವಾದ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದ ಇರಬಹುದು. ಆದರೆ, ಸರಿಯಾದ ದಾರಿಯಲ್ಲಿ ಮುಂದುವರೆಯುವುದರಿಂದ ಹಿಂಜರಿಯಬೇಡಿ. ಎಂತದ್ದೇ ಸನ್ನಿವೇಶದಲ್ಲಿ ಬೇರೆಯವರ ಕುತಂತ್ರಕ್ಕೆ ಬಲಿಯಾಗುವುದನ್ನು ತಪ್ಪಿಸಿ. 

ಇದನ್ನೂ ಓದಿ- ವಾಸ್ತು ಪ್ರಕಾರ ಇದು ಮಲಗಲು ಅತ್ಯಂತ ಶ್ರೇಷ್ಠ ದಿಕ್ಕು, ಆದರೆ.. ಈ ದಿಕ್ಕಿನಲ್ಲಿ ಮಲಗಲೇಬಾರದು..!  

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯ ಜನರಿಗೆ ಇಂದು ಅದೃಷ್ಟದ ದಿನ. ಏಕಾಂತದಲ್ಲಿ ಓದಲು ಮತ್ತು ಬರೆಯಲು ನೀವು ಬಯಸಬಹುದು. ಆದಾಯದಲ್ಲಿ ಹೆಚ್ಚಳವಾಗಲಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದ್ದು, ಶಾಪಿಂಗ್ ಗಾಗಿ ಪ್ಲಾನ್ ಮಾಡಬಹುದು. ಡಿನ್ನರ್ ನೈಟ್ ಗಾಗಿ ಯೋಜಿಸಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಕುಟುಂಬದಲ್ಲಿ ಹಿರಿಯ ವ್ಯಕ್ತಿಯಿಂದ ಹಣಕಾಸಿನ ನೆರವು ದೊರೆಯಬಹುದು. ನಿಮ್ಮ ಉದಾರತೆಯಿಂದಾಗಿ ಯಾವುದೇ ಸಂಕಷ್ಟಗಳು ಕೂಡ ಬೇಗ ಬಗೆಹರಿಯಲಿವೆ. ನಿಮ್ಮೊಂದಿಗೆ ಬರುವವರೆಲ್ಲರೂ ನಿಮ್ಮ ನಿಷ್ಪಾಪ ನಡವಳಿಕೆಯಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನಿಮಗೆ ಅತ್ಯಂತ ಅದೃಷ್ಟದ ದಿನ ಇದಾಗಿದೆ. ಆರ್ಥಿಕ ಮೂಲಗಳು ಹೆಚ್ಚಾಗಿ ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. ಕುಟುಂಬದಲ್ಲಿ ನಡೆಯುತ್ತಿರುವ ಕೆಲವು ವಿವಾದಗಳು ಬಗೆಹರಿಯುತ್ತವೆ. ನಿಮ್ಮ ಮನಸ್ಥಿತಿಗೆ ಒಗ್ಗುವ ಕೆಲವು ಜನರೊಂದಿಗೆ ನೀವು ಸಂಪರ್ಕಕ್ಕೆ ಬರುವ ಸಾಧ್ಯತೆಯಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯ ಜನರು ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹ್ದೂ. ಮೇಲಾಧಿಕಾರಿಗಳ ಕೋಪಕ್ಕೆ ಬಲಿಯಾಗುವುದನ್ನು ತಪ್ಪಿಸಲು ಕೆಲಸದಲ್ಲಿ ಗಮನವಿರಲಿದೆ. ಅನಿರೀಕ್ಷಿತ ನಷ್ಟದಿಂದಾಗಿ ಬಜೆಟ್ ನಿರ್ವಹಣೆ ಪ್ರಾಸದಾಯಕವಾಗಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.