ನೀವು ಸಿರಿವಂತರಾಗುವ ದಿನ ಹತ್ತಿರವಾದಾಗಲೇ ಈ ಕನಸುಗಳು ಬೀಳುತ್ತವೆಯಂತೆ ! ಲಕ್ಷ್ಮೀ ಕಟಾಕ್ಷಕ್ಕೂ ಮುನ್ನ ಬೀಳುವ ಕನಸುಗಳು ಇವು !

ಈ ಕನಸುಗಳು ನೀವು ಸಿರಿವಂತರಾಗುತ್ತೀರಿ ಎನ್ನುವುದನ್ನು ತೋರಿಸುತ್ತವೆ. ಯಾವ ಕನಸಿನ ಅರ್ಥ ಏನು ಎನ್ನುವುದನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಿ ಹೇಳಲಾಗಿದೆ.    

Written by - Ranjitha R K | Last Updated : Aug 20, 2024, 04:20 PM IST
  • ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ.
  • ಕನಸುಗಳ ಅರ್ಥಗಳನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಲಾಗಿದೆ.
  • ಶುಭ ಕನಸುಗಳು ಯಾವುವು ?
ನೀವು ಸಿರಿವಂತರಾಗುವ ದಿನ ಹತ್ತಿರವಾದಾಗಲೇ ಈ ಕನಸುಗಳು ಬೀಳುತ್ತವೆಯಂತೆ ! ಲಕ್ಷ್ಮೀ ಕಟಾಕ್ಷಕ್ಕೂ ಮುನ್ನ ಬೀಳುವ ಕನಸುಗಳು ಇವು ! title=

Auspicious Dreams :ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ.ಕನಸುಗಳ ಅರ್ಥಗಳನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಲಾಗಿದೆ.ಕೆಲವು ಕನಸುಗಳು ತುಂಬಾ ಮಂಗಳಕರವಾಗಿದ್ದು,ನಮ್ಮ ಜೀವನದಲ್ಲಿ ಸಂಪತ್ತು,ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವ ಮುನ್ನ ಮಾತ್ರ ಈ ಕನಸು ಬೀಳುತ್ತವೆಯಂತೆ. ಈ ಕನಸುಗಳು ಬಿದ್ದಿವೆ ಎಂದಾದರೆ  ನಿಮ್ಮ ಜೀವನದ ಒಳ್ಳೆಯ ಸಮಯ ಪ್ರಾರಂಭವಾಗಲಿದೆ ಎಂದರ್ಥ ಎನ್ನುತ್ತದೆ ಸ್ವಪ್ನ ಶಾಸ್ತ್ರ.  

ಶುಭ ಕನಸುಗಳು ಯಾವುವು ?: 
ಹಾಲಿನೊಂದಿಗೆ ಸ್ನಾನ  :ನಿಮ್ಮ ಕನಸಿನಲ್ಲಿ ನೀವು ಹಾಲಿನ ಸ್ನಾನವನ್ನು ಮಾಡುವುದನ್ನು ಕಂಡರೆ ಅದು ತುಂಬಾ ಶುಭ ಸಂಕೇತವಾಗಿದೆ.ದೊಡ್ಡ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ ಎನ್ನುವ ಮುನ್ಸೂಚನೆಯಾಗಿ ಆ ಕನಸು ಬಂದಿರುತ್ತದೆ.ಅಲ್ಲದೆ,ನಿಮ್ಮ ವೃತ್ತಿಜೀವನದಲ್ಲಿ  ಯಶಸ್ಸಿನ ಉತ್ತುಂಗಕ್ಕೆ ಏರಲಿದ್ದೀರಿ ಎನ್ನುವುದನ್ನು ಕೂಡಾ ಇದು ತೋರಿಸುತ್ತದೆ. 

ಇದನ್ನೂ ಓದಿ : ಶುಕ್ರದೆಸೆಯೊಂದಿಗೆ ಕುಬೇರ ರಾಜಯೋಗ!ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಉಕ್ಕಿ ಬರುವುದು ಧನ ಸಂಪತ್ತು!ಸ್ವಂತ ಮನೆ, ವಾಹನ, ಬಡ್ತಿ ಎಲ್ಲಾ ಸುಖವೂ ನಿಮ್ಮದೇ

ಕಮಲದ ಹೂ :ಕಮಲದ ಹೂವು ಲಕ್ಷ್ಮೀ ದೇವಿಗೆ ತುಂಬಾ ಪ್ರಿಯವಾದುದು. ನಿಮ್ಮ ಕನಸಿನಲ್ಲಿ ಕಮಲದ ಹೂವನ್ನು ಕಂಡರೆ,ಲಕ್ಷ್ಮೀ ದೇವಿಯ ಪ್ರವೇಶ ನಿಮ್ಮ ಜೀವನದಲ್ಲಿ ಆಗುತ್ತಿದೆ ಎಂದರ್ಥ.ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಲಿವೆ ಎನ್ನುವುದನ್ನು ಕೂಡಾ ಈ ಕನಸು  ಹೇಳುತ್ತದೆ. 

ಕೊಳಲಿನ ಸದ್ದು :ಕನಸಿನಲ್ಲಿ ಕೊಳಲಿನ ಸದ್ದು ಕೇಳುವುದು ಜೀವನದಲ್ಲಿ ಐಶ್ವರ್ಯ ಮತ್ತು ಮಾಧುರ್ಯವನ್ನು ಹೆಚ್ಚಿಸುವ ಸಂಕೇತವಾಗಿದೆ.ನಿಮ್ಮ ಜೀವನವು ಸಂತೋಷದಿಂದ ತುಂಬಿರುತ್ತದೆ ಎನ್ನುವ ಅಂಶದ ಸೂಚಕ ಈ ಸದ್ದು. 

ಇದನ್ನೂ ಓದಿ:  ರಾಹು-ಕೇತು ಗೋಚಾರ: 2025ರವರೆಗೆ ಈ ರಾಶಿಯವರ ಬದುಕಿನಲ್ಲಿ ಬರೀ ಶುಭವೇ! ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ!

ದೇವಾಲಯದ ಗಂಟೆ ಶಬ್ದ :ಕನಸಿನಲ್ಲಿ ಶಂಖ ಅಥವಾ ದೇವಾಲಯದ ಗಂಟೆಯ ಶಬ್ದವನ್ನು ಕೇಳುವುದು ತುಂಬಾ ಮಂಗಳಕರವಾಗಿದೆ.ಇದು ನಿಮ್ಮ ಮನದ ಆಸೆ ಪೂರೈಸಲಿದೆ ಎನ್ನುವುದನ್ನು ತೋರಿಸುತ್ತದೆ.

ಮಳೆ ನೋಡುವುದು:ಕನಸಿನಲ್ಲಿ ಮಳೆ ಕಂಡರೆ ಆ ವ್ಯಕ್ತಿ ಪಕ್ಕಾ ಸಿರಿವಂತನಾಗುತ್ತಾನೆ ಎಂದರ್ಥ. ಯಾವುದೇ ವ್ಯಕ್ತಿ ಮಳೆಯ ಕನಸನ್ನು ಕಂಡಾಗ ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯಲಿದ್ದಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News