Numerology: ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಶ್ರೀಮಂತರಾಗುತ್ತಾರೆ! ಅವರು ಏನು ಮಾಡಬೇಕು?

Numerology: 4, 13, 22 ಅಥವಾ 31ನೇ ದಿನಾಂಕದಂದು ಜನಿಸಿದವರು ದುರ್ಗಾದೇವಿಯ ಆರಾಧನೆ ಮಾಡಬೇಕು. 5, 14 ಅಥವಾ 23ನೇ ದಿನಾಂಕದಂದು ಜನಿಸಿದವರು ತಮ್ಮ ಪರ್ಸ್‌ನಲ್ಲಿ ಒಂದು ಚೂರು ಏಲಕ್ಕಿಯನ್ನು ಇಟ್ಟುಕೊಂಡರೆ ಸಕಲ ಐಶ್ವರ್ಯವೂ ವೃದ್ಧಿಯಾಗುತ್ತದೆ.

Written by - Puttaraj K Alur | Last Updated : Aug 19, 2024, 09:55 PM IST
  • 1, 10, 19 ಮತ್ತು 28ನೇ ದಿನಾಂಕದಂದು ಜನಿಸಿದರೆ ಪ್ರತಿನಿತ್ಯ ಸೂರ್ಯನಿಗೆ ಅರ್ಘ್ಯ ನೀಡಬೇಕು
  • 2, 11, 20 ಅಥವಾ 29ರಂದು ಜನಿಸಿದವರು ಪ್ರತಿನಿತ್ಯ ಬೆಳ್ಳಿ ಲೋಟದಲ್ಲಿ ನೀರು ಸೇವಿಸಬೇಕು
  • 4, 13, 22 ಅಥವಾ 31ನೇ ದಿನಾಂಕದಂದು ಜನಿಸಿದವರು ದುರ್ಗಾದೇವಿಯ ಆರಾಧನೆ ಮಾಡಬೇಕು
Numerology: ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಶ್ರೀಮಂತರಾಗುತ್ತಾರೆ! ಅವರು ಏನು ಮಾಡಬೇಕು? title=
ಶ್ರೀಮಂತಿಕೆ ಬರಬೇಕಾದರೆ ಏನು ಮಾಡಬೇಕು?

Numerology: ಕೆಲವರು ಹುಟ್ಟಿನಿಂದಲೇ ಶ್ರೀಮಂತರಾದರೆ ಮತ್ತೆ ಕೆಲವರು ತಮ್ಮ ಶ್ರಮದ ಫಲವಾಗಿ ಸುಖ-ಸಂಪತ್ತು ಮತ್ತು ಐಶ್ವರ್ಯ ಗಳಿಸುತ್ತಾರೆ. ಇನ್ನೂ ಕೆಲವರಿಗೆ ಅದೃಷ್ಟದಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ ಯಾವ ಸಂಖ್ಯೆಯಲ್ಲಿ ಜನಿಸಿದವರು ಏನು ಮಾಡಿದರೆ ಶ್ರೀಮಂತರಾಗುತ್ತಾರೆ ಅನ್ನೋದರ ಬಗ್ಗೆ ತಿಳಿಯಿರಿ.

ಯಾವುದೇ ವ್ಯಕ್ತಿ ಧನವಂತನಾಗಲು ತಾಯಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಬೇಕು. ಅದಕ್ಕೆ ಅದೃಷ್ಟ ಮತ್ತು ಪರಿಶ್ರಮವೂ ಬೇಕಾಗುತ್ತದೆ. ನಮ್ಮ ಜೀವನದಲ್ಲಿ ಐಶ್ವರ್ಯ ಸಂಪಾದನೆಯಾಗಬೇಕು ಎಂದರೆ ಸಂಖ್ಯಾ ಬಲವೂ ಬೇಕು. 1, 10, 19 ಮತ್ತು 28ನೇ ದಿನಾಂಕದಂದು ಜನಿಸಿದರೆ ಪ್ರತಿನಿತ್ಯ ಸೂರ್ಯನಿಗೆ ಅರ್ಘ್ಯ ನೀಡುವುದರಿಂದ ಶ್ರೀಮಂತಿಕೆ ಬರುತ್ತದೆ.

ಇದನ್ನೂ ಓದಿ: ಕಪ್ಪು ದಾರ ಕಟ್ಟುವುದು ಈ 4 ರಾಶಿಯವರಿಗೆ ಅಶುಭ... ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ತಪ್ಪಿದ್ದಲ್ಲ ಕಷ್ಟ !

ಅದೇ ರೀತಿ 2, 11, 20 ಅಥವಾ 29ನೇ ದಿನಾಂಕದಂದು ಜನಿಸಿದವರಿಗೆ ಶ್ರೀಮಂತಿಕೆ ಬರಬೇಕಾದರೆ ಪ್ರತಿನಿತ್ಯ ಬೆಳ್ಳಿ ಲೋಟದಲ್ಲಿ ನೀರು ಸೇವನೆ ಮಾಡಬೇಕು. ಈ ದಿನ ಜನಿಸಿದವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಕಲಿಯಬೇಕು. ಇದಲ್ಲದೆ 3, 12, 21 ಅಥವಾ 30ನೇ ದಿನಾಂಕದಂದು ಜನಿಸಿದವರು ಸ್ನಾನ ಮಾಡುವಾಗ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಿದರೆ ಒಳಿತಾಗುತ್ತದೆ. ಈ ರಾಶಿಯವರು ತಮ್ಮ ಗುರುಗಳನ್ನು ಗೌರವಿಸುವುದಕ್ಕೆ ಪ್ರಾಶಸ್ತ್ಯ ನೀಡಬೇಕು.

4, 13, 22 ಅಥವಾ 31ನೇ ದಿನಾಂಕದಂದು ಜನಿಸಿದವರು ದುರ್ಗಾದೇವಿಯ ಆರಾಧನೆ ಮಾಡಬೇಕು. 5, 14 ಅಥವಾ 23ನೇ ದಿನಾಂಕದಂದು ಜನಿಸಿದವರು ತಮ್ಮ ಪರ್ಸ್‌ನಲ್ಲಿ ಒಂದು ಚೂರು ಏಲಕ್ಕಿಯನ್ನು ಇಟ್ಟುಕೊಂಡರೆ ಸಕಲ ಐಶ್ವರ್ಯವೂ ವೃದ್ಧಿಯಾಗುತ್ತದೆ.

ಇದನ್ನೂ ಓದಿ: Astro Tips: ಈ 5 ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರಿಗೂ ದಾನ ಮಾಡಬಾರದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News