ನಿಮ್ಮ ಆಸೆ ಈಡೇರಲು.. ಶಿವರಾತ್ರಿಯಂದು ʼಕನಿಷ್ಠʼ ಈ 10 ಪರಿಹಾರಗಳಲ್ಲಿ ಯಾವುದಾರು ಒಂದನ್ನು ಮಾಡಿ.!

ಮಹಾ ಶಿವರಾತ್ರಿಗೆ ವಿಶೇಷ ಮಹತ್ವವಿದೆ. ಶಿವರಾತ್ರಿ ಹಬ್ಬವು ಫಾಲ್ಗುಣ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಬರುತ್ತದೆ. ಶಿವ ಭಕ್ತರಿಗೆ ಈ ದಿನ ಬಹಳ ವಿಶೇಷ. ಈ ದಿನದಂದು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವುದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ಈ ವರ್ಷದ ಮಹಾ ಶಿವರಾತ್ರಿ ಹಬ್ಬವನ್ನು ಇಂದು (ಫೆಬ್ರವರಿ 18) ವಿಶ್ವದಾದ್ಯಂತ ಶಿವಭಕ್ತರು ಭಕ್ತಿ ಭಾವದಿಂದ ಆಚರಿಸುತ್ತಿದ್ದಾರೆ. ಮಹಾ ಶಿವರಾತ್ರಿಯ ದಿನದಂದು ಕೆಲವು ಕಾರ್ಯಗಳನ್ನು ಮಾಡುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆ ಕ್ರಿಯೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Written by - Krishna N K | Last Updated : Feb 18, 2023, 02:38 PM IST
  • ಮಹಾ ಶಿವರಾತ್ರಿ ಶಿವ ಭಕ್ತರಿಗೆ ಈ ದಿನ ಬಹಳ ವಿಶೇಷ.
  • ಇಂದು ಶಿವನನ್ನು ಪೂಜಿಸುವುದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ.
  • ಈ ಪವಿತ್ರ ದಿನದಂದು ಕೆಲವು ಕಾರ್ಯಗಳನ್ನು ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.
ನಿಮ್ಮ ಆಸೆ ಈಡೇರಲು.. ಶಿವರಾತ್ರಿಯಂದು ʼಕನಿಷ್ಠʼ ಈ 10 ಪರಿಹಾರಗಳಲ್ಲಿ ಯಾವುದಾರು ಒಂದನ್ನು ಮಾಡಿ.! title=

Maha Shivratri 2023 : ಮಹಾ ಶಿವರಾತ್ರಿಗೆ ವಿಶೇಷ ಮಹತ್ವವಿದೆ. ಶಿವರಾತ್ರಿ ಹಬ್ಬವು ಫಾಲ್ಗುಣ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಬರುತ್ತದೆ. ಶಿವ ಭಕ್ತರಿಗೆ ಈ ದಿನ ಬಹಳ ವಿಶೇಷ. ಈ ದಿನದಂದು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸುವುದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ಈ ವರ್ಷದ ಮಹಾ ಶಿವರಾತ್ರಿ ಹಬ್ಬವನ್ನು ಇಂದು (ಫೆಬ್ರವರಿ 18) ವಿಶ್ವದಾದ್ಯಂತ ಶಿವಭಕ್ತರು ಭಕ್ತಿ ಭಾವದಿಂದ ಆಚರಿಸುತ್ತಿದ್ದಾರೆ. ಮಹಾ ಶಿವರಾತ್ರಿಯ ದಿನದಂದು ಕೆಲವು ಕಾರ್ಯಗಳನ್ನು ಮಾಡುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆ ಕ್ರಿಯೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ. ಮಹಾ ಶಿವರಾತ್ರಿಯಂದು ಶಿವಲಿಂಗಕ್ಕೆ ಶುದ್ಧ ನೀರಿನಿಂದ ಅಭಿಷೇಕ ಮಾಡಿ. ಶಿವಲಿಂಗದ ಮೇಲೆ ನೀರನ್ನು ಅರ್ಪಿಸುವಾಗ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. ನಂತರ ಶಿವನ ಮುಂದೆ 11 ದೀಪಗಳನ್ನು ಹಚ್ಚಿ ಮತ್ತು ನಿಮ್ಮ ಇಷ್ಟಾರ್ಥವನ್ನು ಹೇಳಿ. ಇದರೊಂದಿಗೆ ಶಿವನು ಶೀಘ್ರದಲ್ಲೇ ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತಾನೆ.

  1. ದಾಂಪತ್ಯದಲ್ಲಿನ ಅಡೆತಡೆಗಳು ದೂರವಾಗಲು.. ಮಹಾ ಶಿವರಾತ್ರಿಯ ದಿನ ಕುಂಕುಮವನ್ನು ಹಾಲಿನಲ್ಲಿ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ. ಹಾಗೆಯೇ ಪಾರ್ವತಿ ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ.
  2. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.. ಮಹಾ ಶಿವರಾತ್ರಿಯಂದು 21 ಬಿಲ್ವ ಪತ್ರೆ ಎಲೆಗಳನ್ನು ಶುದ್ಧ ನೀರಿನಿಂದ ತೊಳೆದು ಅದರ ಮೇಲೆ ಓಂ ನಮಃ ಶಿವಾಯ ಎಂದು ಶ್ರೀಗಂಧದಿಂದ ಬರೆಯಿರಿ. ನಂತರ ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಹಾಕಿ. ಈ ರೀತಿ ಮಾಡುವುದರಿಂದ ಶಿವನ ಕೃಪೆ ನಿಮ್ಮ ಮೇಲಿರುತ್ತದೆ.
  3. ಶಿವನ ವಾಹನ ಗೂಳಿ. ಮಹಾ ಶಿವರಾತ್ರಿಯಂದು ಗೂಳಿಗೆ ಆಹಾರ ನೀಡಿ. ಗೂಳಿ ಅಥವಾ ಹಸುವಿನ ಆಶ್ರಯಕ್ಕೆ ಧನ ದಾನ ಮಾಡಿ. ಇದರಿಂದಾಗಿ ಜೀವನದಲ್ಲಿ ಯಾವಾಗಲೂ ಸಂತೋಷ ಇರುತ್ತದೆ.
  4. ಮಹಾ ಶಿವರಾತ್ರಿಯಂದು ಅಗತ್ಯವಿರುವವರಿಗೆ ಧಾನ್ಯವನ್ನು ದಾನ ಮಾಡುವುದು ಶ್ರೇಯಸ್ಕರ. ಶಿವರಾತ್ರಿಯಂದು ಬಡವರಿಗೆ ಆಹಾರ ನೀಡಿ. ಈ ಪರಿಹಾರವನ್ನು ಮಾಡುವುದರಿಂದ ಅನ್ನಪೂರ್ಣ ಮಾತೆಯ ಕೃಪೆ ನಿಮ್ಮ ಮೇಲಿರುತ್ತದೆ.
  5. ಮಹಾ ಶಿವರಾತ್ರಿಯ ದಿನದಂದು, ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರನ್ನು ತೆಗೆದುಕೊಂಡು ಕಪ್ಪು ಎಳ್ಳನ್ನು ಸೇರಿಸಿ ಮತ್ತು ಶಿವಲಿಂಗಕ್ಕೆ ಅಭಿಷೇಕ ಮಾಡಿ. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಇದಲ್ಲದೆ, ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ.
  6. ಮಹಾ ಶಿವರಾತ್ರಿಯ ದಿನ ಹೆಬ್ಬೆರಳಿನ ಗಾತ್ರದ ಪರದ ಶಿವಲಿಂಗವನ್ನು ತಂದು ಪೂಜಿಸಿ.. ಮನೆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ. ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ.
  7. ಮಹಾ ಶಿವರಾತ್ರಿಯಂದು ಗೋಧಿ ಹಿಟ್ಟಿನಿಂದ 11 ಶಿವಲಿಂಗಗಳನ್ನು ಮಾಡಿ ಶುದ್ಧ ನೀರಿನಿಂದ ಅಭಿಷೇಕ ಮಾಡಬೇಕು. ಈ ಶಿವಲಿಂಗಗಳ ಗಾತ್ರ ಹೆಬ್ಬೆರಳಿಗಿಂತ ಹೆಚ್ಚಿರಬಾರದು. ಅಭಿಷೇಕದ ನಂತರ ಈ ಶಿವಲಿಂಗಗಳನ್ನು ನದಿಯಲ್ಲಿ ಬಿಡಬೇಕು.
  8. ಮಹಾ ಶಿವರಾತ್ರಿಯ ದಿನ ರಾತ್ರಿ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಯಲ್ಲಿ ದೀಪಗಳನ್ನು ಹಚ್ಚಿ. ಇದನ್ನು ಮಾಡುವುದರಿಂದ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಈ ಪರಿಹಾರ ಮಾಡುವುದರಿಂದ ಶಿವನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.
  9. ವೈವಾಹಿಕ ಜೀವನದಲ್ಲಿ ಸಂತೋಷಕ್ಕಾಗಿ ಮಹಾ ಶಿವರಾತ್ರಿಯಂದು ಶಿವ ದೇವಾಲಯಕ್ಕೆ ಹೋಗಿ ಮತ್ತು ಪಾರ್ವತಿ ದೇವಿಗೆ ಸುಹಾಗ್ ವಸ್ತುವನ್ನು ಅರ್ಪಿಸಿ. ನಂತರ ಅದನ್ನು ಬ್ರಾಹ್ಮಣ ಅಥವಾ ಮಹಿಳೆಗೆ ನೀಡಿ. ಹೀಗೆ ಮಾಡಿದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News