20 ವರ್ಷಗಳವರೆಗೆ ಐಶಾರಾಮಿ ಜೀವನ ನೀಡುವುದು ಶುಕ್ರ ಮಹಾದೆಸೆ ! ಜೀವನದಲ್ಲಿ ಆಗುವುದು ಧನಲಕ್ಷ್ಮೀ ಪ್ರವೇಶ

ಒಂಬತ್ತು ಗ್ರಹಗಳಲ್ಲಿ, ಶುಕ್ರನ ಮಹಾದೆಸೆ ದೀರ್ಘ ಕಾಲ ಅಂದರೆ 20 ವರ್ಷಗಳವರೆಗೆ ಇರುತ್ತದೆ. ಶುಕ್ರನ ಅನುಗ್ರಹ ಪಡೆದವರು ಈ 20 ವರ್ಷಗಳ ಶುಕ್ರ ಮಹಾದೆಸೆಯಲ್ಲಿ ರಾಜರಂತೆ ಬದುಕುತ್ತಾರೆ.

Written by - Ranjitha R K | Last Updated : Aug 31, 2023, 03:08 PM IST
  • ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಜೀವನದ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿದೆ
  • ವ್ಯಕ್ತಿಯು ಜಾತಕದಲ್ಲಿ ಆ ಗ್ರಹದ ಸ್ಥಾನಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುತ್ತಾನೆ.
  • ಯಾರ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿ ಇರುತ್ತಾನೆಯೋ ಆ ವ್ಯಕ್ತಿಗೆ ಹಣದ ಕೊರತೆ ಎದುರಾಗುವುದಿಲ್ಲ
20 ವರ್ಷಗಳವರೆಗೆ ಐಶಾರಾಮಿ ಜೀವನ ನೀಡುವುದು ಶುಕ್ರ ಮಹಾದೆಸೆ ! ಜೀವನದಲ್ಲಿ ಆಗುವುದು ಧನಲಕ್ಷ್ಮೀ ಪ್ರವೇಶ  title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ಜೀವನದ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿದೆ. ವ್ಯಕ್ತಿಯು ಜಾತಕದಲ್ಲಿ ಆ ಗ್ರಹದ ಸ್ಥಾನಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುತ್ತಾನೆ. ಶುಕ್ರನ ಬಗ್ಗೆ ಹೇಳುವುದಾದರೆ, ಜ್ಯೋತಿಷ್ಯದಲ್ಲಿ ಇದನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗುತ್ತದೆ. ಶುಕ್ರನು ಸಂಪತ್ತು, ಐಷಾರಾಮಿ, ಐಶ್ವರ್ಯ, ಐಷಾರಾಮಿ ಜೀವನ, ಪ್ರೀತಿ ಮತ್ತು ಆಕರ್ಷಣೆಯನ್ನು ನೀಡುವ ಗ್ರಹವಾಗಿದೆ. ಯಾರ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿ ಇರುತ್ತಾನೆಯೋ ಆ ವ್ಯಕ್ತಿಗೆ ಹಣದ ಕೊರತೆ ಎದುರಾಗುವುದಿಲ್ಲ. ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಇದೇ ಕಾರಣದಿಂದ ಶುಕ್ರನ ಮಹಾದೆಸೆ  ವಿಶೇಷವಾಗಿದೆ. ಒಂಬತ್ತು ಗ್ರಹಗಳಲ್ಲಿ, ಶುಕ್ರನ ಮಹಾದೆಸೆ ದೀರ್ಘ ಕಾಲ ಅಂದರೆ 20 ವರ್ಷಗಳವರೆಗೆ ಇರುತ್ತದೆ. ಶುಕ್ರನ ಅನುಗ್ರಹ ಪಡೆದವರು ಈ 20 ವರ್ಷಗಳ ಶುಕ್ರ ಮಹಾದೆಸೆಯಲ್ಲಿ ರಾಜರಂತೆ ಬದುಕುತ್ತಾರೆ.
 
ಶುಕ್ರ ಮಹಾದೆಸೆಯ ಪ್ರಭಾವ : 
ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿ ಇದ್ದಾಗ ಶುಕ್ರನ ಮಹಾದೆಸೆ  ಐಷಾರಾಮಿ ಜೀವನವನ್ನು ನೀಡುತ್ತದೆ. ಹಾಗೆಯೇ ಶುಕ್ರನು ಬಲಹೀನನಾಗಿದ್ದಾಗ ಶುಕ್ರನ ಮಹಾದೆಸೆ ಕೂಡಾ ತೊಂದರೆ ಕೊಡುತ್ತದೆ. ಜಾತಕದಲ್ಲಿ ಶುಕ್ರನು ಅಶುಭ ಸ್ಥಾನದಲ್ಲಿ ಇದ್ದರೆ, 20 ವರ್ಷಗಳ ಮಹಾದೆಸೆಯಲ್ಲಿ ಬಡತನವೇ ತಾಂಡವವಾಡುತ್ತದೆ. ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ : ನವೆಂಬರ್ ನಿಂದ ಬೆಳಗುವುದು ಈ ರಾಶಿಯವರ ಭಾಗ್ಯ ! ಹರಿದು ಬರುವುದು ಸಿರಿ ಸಂಪತ್ತು

ಶುಕ್ರನ ಮಹಾದೆಸೆಯ ಪರಿಹಾರಗಳು : 
ಶುಕ್ರನ ಮಹಾದೆಸೆ ದುರ್ಬಲ ಶುಕ್ರನಿಂದ ತೊಂದರೆಯನ್ನು ನೀಡುತ್ತಿದ್ದರೆ, ಆದಷ್ಟು ಬೇಗ ಪರಿಹಾರಗಳನ್ನು ತೆಗೆದುಕೊಳ್ಳಬೇಕು. ಶುಕ್ರನ ದುಷ್ಪರಿಣಾಮಗಳನ್ನು ಹೋಗಲಾಡಿಸಲು, ಶುಕ್ರನ ಮಹಾದೆಸೆ ಪರಿಹಾರಗಳನ್ನು ತೆಗೆದುಕೊಳ್ಳುವುದರಿಂದ ಸಾಕಷ್ಟು ಪರಿಹಾರವನ್ನು ಪಡೆಯಬಹುದು. ಈ ಕ್ರಮಗಳನ್ನು ಮಾಡುವುದರಿಂದ, ವ್ಯಕ್ತಿಯು ಜೀವನದಲ್ಲಿ ಸಂತೋಷ ಮತ್ತು ಸೌಕರ್ಯವನ್ನು ಪಡೆಯುತ್ತಾನೆ, ಹಣ ಪಡೆಯುತ್ತಾನೆ. ಜ್ಯೋತಿಷ್ಯದಲ್ಲಿ, ಶುಕ್ರನ ಮಹಾದೆಸೆಗೆ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ನೀಡಲಾಗಿದೆ. 

- ಶುಂ ಶುಕ್ರಾಯ ನಮಃ ಎನ್ನುವ ಮಂತ್ರವನ್ನು ಪ್ರತಿ ಶುಕ್ರವಾರ 108 ಬಾರಿ ಜಪಿಸಿ. 
- ಪ್ರತಿ ಶುಕ್ರವಾರ ಇರುವೆಗಳಿಗೆ ಹಿಟ್ಟು ಮತ್ತು ಸಕ್ಕರೆ ತಿನ್ನಿಸುವುದರಿಂದಲೂ  ಪ್ರಯೋಜನವಾಗುವುದು.  
- ಪ್ರತಿ ಶುಕ್ರವಾರ ಕನ್ಯೆಯರಿಗೆ ಖೀರ್ ತಿನ್ನಿಸಿ. ಬಿಳಿ ಬಟ್ಟೆ, ಹಾಲು, ಅಕ್ಕಿ ಅಥವಾ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ದಾನ ಮಾಡಿ. 
- ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸಿ. 

ಇದನ್ನೂ ಓದಿ : ವಿಪರೀತ ರಾಜಯೋಗ ನಿರ್ಮಾಣ, ಗ್ರಹಗಳ ರಾಜಕುಮಾರನ ಕೃಪೆಯಿಂದ, ಈ ಜನರ ಭಾಗ್ಯದಲ್ಲಿ ಭಾರಿ ಬದಲಾವಣೆ-ಧನಲಾಭ!

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News