ಯುವ ಆಟಾಗರನಿಂದ ಶತಕ ನಿರೀಕ್ಷೆ ಬೇಡ... ಗೌತಮ್ ಗಂಬೀರ್‌ ಹೇಳಿಕೆ !

Gautam Gambhir :ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯ ಡಿಸೆಂಬರ್‌ 26 ರಿಂದ ಆರಂಭಗೊಳ್ಲಲಿದೆ. ಈ ಪಂದ್ಯದಲ್ಲಿ  ರುತುರಾಜ್‌  ಗಾಯಕ್ವಾಡ್‌ ಮತ್ತು ಇಶಾನ್‌ ಕಿಸನ್‌ ಈಬ್ಬರು ಹೊರಗುಳಿದಿದ್ಧಾರೆ. ಆದರಿಂದ ಈ ಸರಣಿಯಲ್ಲಿ  ಜೈಸ್ವಾಲ್‌ ಆಡುವ ಸಾಧ್ಯತೆ ಇದೆ.  ಜೈಸ್ವಾಲ್‌ ಬಗ್ಗೆ ಮಾಜಿ ಆಟಗಾರ ಗೌತಮ್ ಗಂಭೀರ್‌ ಅಚ್ಚರಿ ಹೇಳಿಕೆ ನೀಡಿದ್ಧಾರೆ.

Written by - Zee Kannada News Desk | Last Updated : Dec 25, 2023, 04:25 PM IST
  • ಡಿಸೆಂಬರ್‌ 26ಕ್ಕೆ ಭಾರತ vs ದ.ಆಫ್ರಿಕಾ ಮೊದಲ ಪಂದ್ಯ ನಡೆಯಲಿದೆ
  • ಪ್ಲೇಯಿಂಗ್‌ 11ರಲ್ಲಿ ಯಶಸ್ವಿ ಜೈಸ್ವಾಲ್‌ ಆಡುವ ಸಾಧ್ಯತೆ ಇದೆ.
  • ಯಂಗ್‌ ಸ್ಟಾರ್‌ ಜೈಸ್ವಾಲ್‌ ನಿಂದ ಶತಕ ನಿರೀಕ್ಷೆ ಬೇಡ ಎಂದು ಗಂಭೀರ್‌ ಹೇಳಿಕೆ
ಯುವ ಆಟಾಗರನಿಂದ ಶತಕ ನಿರೀಕ್ಷೆ ಬೇಡ... ಗೌತಮ್ ಗಂಬೀರ್‌ ಹೇಳಿಕೆ ! title=

INd vs SA Test : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ ಪಂದ್ಯವು ಸೆಂಚೂರಿಯನ್‌ ಸ್ಟೇಡಿಮ್‌ನಲ್ಲಿ (ಡಿಸೆಂಬರ್‌ 26) ಆರಂಭಗೊಳ್ಳಿದೆ. ನಾಳೆಯ ಪಂದ್ಯಕ್ಕೆ ಎರಡು ತಂಡಗಳು ಭಾರಿ ತಯಾರಿ ನಡೆಸಿವೆ. ಸೂರರ್ಯ ಕುಮಾರ್‌ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುಧ್ದ ಟಿ20 ಸರಣಿಯನ್ನು ಡ್ರಾ ಮಾಡಿಕೊಂಡರೆ , ಕೆ ಎಲ್‌ ರಾಹುಲ್‌ ನಾಯಕತ್ವದಲ್ಲಿ ಏಕದಿನ ಸರಣಿಯನ್ನು ಟೀಮ್‌ ಇಂಡಿಯಾ ಗೆದ್ದುಕೊಂಡಿದೆ. ಇದೀಗ ರೋಹಿತ್‌ ಶರ್ಮಾ ನಾಯಕತ್ವದಲ್ಲಿ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಗೆಲ್ಲಲು ಟೀಂ ಇಂಡಿಯಾ ಸಜ್ಜಾಗಿದೆ. 

ಈ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಯಂಗ್ ಪಲೇಯರ್‌ ಯಶಸ್ವಿ ಜೈಸ್ವಾಲ್‌ ಕೂಡ ಸ್ಥಾನ ಪಡೆದು ಕೊಂಡಿದ್ಧಾರೆ. ಜೈಸ್ವಾಲ್‌ ಅವರು ಇಲ್ಲಿಯವರೆಗೆ ಕೇವಲ 2 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ದ. ಆಫ್ರಿಕಾ ವಿರುಧ್ದ ಈ ಪಂದ್ಯವು ಇವರ ಕೆರಿಯರ್‌ ನ ಮೂರನೇ ಟೆಸ್ಟ್‌ ಪಂದ್ಯವಾಗಲಿದೆ.

ಇದನ್ನು ಓದಿ-ಟೀಮ್‌ ಇಂಡಿಯಾಕೆ ಇನ್ನೋದು ಬಿಗ್‌ ಶಾಕ್‌ ! ಟೆಸ್ಟ್‌ ಸರಣಿಯಿಂದ ಹೊರಗುಳಿದ "ಇಶಾನ್‌ ಕಿಶನ್‌"

ಭಾರತದ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅವರು ಯಶಸ್ವಿ ಜೈಸ್ವಾಲ್‌ ಅವರ ಬಗ್ಗೆ ಅಚ್ಚರಿ ಸಂದೇಶವನ್ನು ನೀಡಿದ್ಧಾರೆ. ದಕ್ಷಿಣ ಆಫ್ರಿಕಾ ವಿರುಧ್ದದ ಪಂದ್ಯದಲ್ಲಿ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಅವರಿಂದ ಯಾವುದೇ ನಿರೀಕ್ಷೆಗಳನ್ನು ಅಪೇಕ್ಷಿಸ ಬೇಡಿ ಎಂದು ಭಾರತ ತಂಡಕ್ಕೆ ಕೆರೆ ನೀಡಿದ್ದಾರೆ. 

 ಜೈಸ್ವಾಲ್‌ ಆಡಿದ ಎರಡು ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ಧಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಶತಕ ಬಾರಿಸಿ ಎಲ್ಲರ ಗಮನ ಸೆಳೆದರು. ಅಷ್ಟೇ ಅಲ್ಲದೇ ಎರಡನೇ ಪಂದ್ಯದಲ್ಲಿ  57 ಮತ್ತು  38 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇವರು ಗಳಿಸಿದ 171 ರನ್‌ ಗಳು ಟೆಸ್ಟ್‌ ಕ್ರಿಕೇಟ್‌ನಲ್ಲಿ ಇವರ ಅತ್ಯಧಿಕ ಸ್ಕೋರ್‌ ಆಗಿದೆ.

ಇದನ್ನು ಓದಿ-“ತಂಡದ ಹಿತದೃಷ್ಟಿಯಿಂದ ಈತನೇ ಟೆಸ್ಟ್’ನಲ್ಲಿ ವಿಕೆಟ್ ಕೀಪರ್ ಆಗಿ ಆಡಲಿದ್ದಾನೆ”: ಕೋಚ್ ದ್ರಾವಿಡ್ ಹೇಳಿಕೆ

ಜೈಸ್ವಾಲ್‌  ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಅವರಿಂದ ಹೆಚ್ಚಿನ ನಿರೀಕ್ಷೆ ಬೇಡಾ ಎಂದು ಗೌತಮ್‌ ಗಂಭಿರ್‌ ಹೇಳಿದ್ಧಾರೆ. ಇದಕ್ಕೆ ಸ್ಪಷ್ಟಣೆಯನ್ನು ನೀಡಿದ ಗೌತಮ್‌ ಗಂಭೀರ್‌ ಈ ರೀತಿ ಹೇಳಿದ್ಧಾರೆ "ವೆಸ್ಟ್ ಇಂಡೀಸ್ ನ ಪಿಚ್ ಗಳು ಉಪಖಂಡದ ಪಿಚ್ ನಂತೆಯೇ ವರ್ತಿಸುತ್ತದೆ. ಆದರೆ ಹರಿಣಿಗಳ ನಾಡಿನಲ್ಲಿ ವೇಗದ ಬೌಲರ್ ಗಳನ್ನು ಎದುರಿಸುವುದು ನಿಜಕ್ಕೂ ದೊಡ್ಡ ಸವಾಲಾಗಿದೆ. ಏಕೆಂದರೆ  ಆದರೆ ದಕ್ಷಿಣ ಆಫ್ರಿಕಾದ ಕಂಡೀಷನ್ಸ್ ನಲ್ಲಿ ಆಡುವಾಗ  ಹೆಚ್ಚಿನ ಬೌನ್ಸರ್‌ ಸವಾಲುಗಳನ್ನು ಅವರು ಎದುರಿಸ ಬೇಕಾಗುತ್ತದೆ" ಎಂದು ತಿಳಿಸಿದರು. 

ಯಶಸ್ವಿ ಜೈಸ್ವಾಲ್‌ ಅವರು ಉತ್ತಮವಾಗಿ ಆಡುತ್ತಾರೆ, ಆದರೆ ಮೊದಲ ಪಂದ್ಯದಲ್ಲೇ  ಅವರಿಂದ ಶತಕ ಸಿಡಿಸುವುದು ಕಷ್ಟ. ಈ ಮೈದಾನಗಳು ಆತನಿಗೆ ನಿಜವಾಗಿಯು ಸವಾಲಾಗಿ ಪರಿಣಮಿಸುತ್ತವೆ ಹಾಗೂ  ಅವರರಿಂದ ತಂಡಕ್ಕೆ 30 ರನ್‌ಗಳು ಬಂದುರು ತಂಡಕ್ಕೆ ಹೆಚ್ಚಿನ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News