IND vs WI : ಟೀಂ ಇಂಡಿಯಾ ಟಿ20 ಪಂದ್ಯಕ್ಕೆ ಎದುರಾಗಿದ್ದ ವೀಸಾ ಸಮಸ್ಯೆ ಕ್ಲಿಯರ್!

ಈ ಸರಣಿಯ ನಾಲ್ಕನೇ ಮತ್ತು ಐದನೇ ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಬೇಕಿದ್ದು, ಇದಕ್ಕೆ ವೀಸಾ ಸಮಸ್ಯೆ ಎದುರಾಗಿತ್ತು, ಆದರೆ ಭಾರತ ತಂಡದ ಈ ಸಮಸ್ಯೆಯೂ ಇದೀಗ ಅಂತ್ಯ ಕಂಡಿದೆ. ಇದು ಅಭಿಮಾನಿಗಳಲ್ಲಿ ಸಂತಸ ಸೃಷ್ಟಿಸಿದೆ.

Written by - Channabasava A Kashinakunti | Last Updated : Aug 4, 2022, 02:12 PM IST
  • ಬಗೆಹರಿದ ವೀಸಾ ಸಮಸ್ಯೆ!
  • ಸಂದರ್ಶನದ ನಂತರ ಸಿಕ್ಕಿದೆ ವೀಸಾ
  • ಸರಣಿ ಗೆಲ್ಲುವತ್ತ ಎಲ್ಲರ ದೃಷ್ಟಿ
IND vs WI : ಟೀಂ ಇಂಡಿಯಾ ಟಿ20 ಪಂದ್ಯಕ್ಕೆ ಎದುರಾಗಿದ್ದ ವೀಸಾ ಸಮಸ್ಯೆ ಕ್ಲಿಯರ್! title=

India vs West Indies 4th T20 : ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಐದು ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಫಾರ್ಮ್‌ನಲ್ಲಿ ಮುನ್ನಡೆ ಸಾಧಿಸುತ್ತಿದೆ. ಈಗಾಗಲೇ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಸರಣಿಯ ನಾಲ್ಕನೇ ಮತ್ತು ಐದನೇ ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಬೇಕಿದ್ದು, ಇದಕ್ಕೆ ವೀಸಾ ಸಮಸ್ಯೆ ಎದುರಾಗಿತ್ತು, ಆದರೆ ಭಾರತ ತಂಡದ ಈ ಸಮಸ್ಯೆಯೂ ಇದೀಗ ಅಂತ್ಯ ಕಂಡಿದೆ. ಇದು ಅಭಿಮಾನಿಗಳಲ್ಲಿ ಸಂತಸ ಸೃಷ್ಟಿಸಿದೆ.

ಬಗೆಹರಿದ ವೀಸಾ ಸಮಸ್ಯೆ!

ರೋಹಿತ್ ಶರ್ಮಾ ಅಂಡ್ ಕಂ ಫ್ಲೋರಿಡಾ ಪಂದ್ಯಗಳಿಗೆ ವೀಸಾ ಪಡೆದಿದ್ದರೆ, ರವಿಚಂದ್ರನ್ ಅಶ್ವಿನ್ ಫ್ಲೋರಿಡಾ ತಲುಪಿದ್ದಾರೆ, ಇನ್ನೂ ಕ್ಲಿಯರೆನ್ಸ್ ಸಿಗದ ಉಳಿದವರು ವೀಸಾಗಾಗಿ ಗಯಾನಾ ತಲುಪಿದ್ದಾರೆ. ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ಸಂಜು ಸ್ಯಾಮ್ಸನ್ ಸೇರಿದಂತೆ 11 ಮಂದಿಗೆ ಅಮೆರಿಕಕ್ಕೆ ಹೋಗಲು ವೀಸಾ ಇರಲಿಲ್ಲ, ಆದರೆ ಈಗ ಇಡೀ ತಂಡಕ್ಕೆ ವೀಸಾ ಅನುಮೋದನೆ ಸಿಕ್ಕಿದೆ. ಅಂದರೆ ಟಿ20 ಸರಣಿಯ ನಾಲ್ಕನೇ ಮತ್ತು ಐದನೇ ಪಂದ್ಯಗಳು ಫ್ಲೋರಿಡಾದಲ್ಲಿ ಮಾತ್ರ ನಡೆಯಲಿವೆ. ವೆಸ್ಟ್ ಇಂಡೀಸ್ ತಂಡ ಈಗಾಗಲೇ ಅಮೆರಿಕ ತಲುಪಿದೆ.

ಇದನ್ನೂ ಓದಿ : IND vs WI : ದಾಖಲೆ ಬರೆದ ಹಾರ್ದಿಕ್ ಪಾಂಡ್ಯ : ಟಿ20 ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ!

ಸಂದರ್ಶನದ ನಂತರ ಸಿಕ್ಕಿದೆ ವೀಸಾ 

ಕ್ರಿಕ್ ಬಜ್ ನ ವರದಿಯ ಪ್ರಕಾರ, ವೀಸಾ ಹೊಂದಿರದ ಆಟಗಾರರು. ಅವರನ್ನು ಸಂದರ್ಶನಕ್ಕಾಗಿ ಗಯಾನಾದಲ್ಲಿರುವ ಯುಎಸ್ ರಾಯಭಾರ ಕಚೇರಿಗೆ ಕಳುಹಿಸಲಾಯಿತು. ಮೂರನೇ ಟಿ20 ಪಂದ್ಯದ ಬಳಿಕ ಈ ಸಂದರ್ಶನ ನಡೆದಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಹಾಜರಿದ್ದರು. ರವೀಂದ್ರ ಜಡೇಜಾ, ಆರ್ ಅಶ್ವಿನ್, ದಿನೇಶ್ ಕಾರ್ತಿಕ್, ರವಿ ಬಿಷ್ಣೋಯ್, ಸೂರ್ಯಕುಮಾರ್ ಯಾದವ್ ಮತ್ತು ಕುಲದೀಪ್ ಯಾದವ್ ಈಗಾಗಲೇ ಅಮೆರಿಕ ತಲುಪಿದ್ದಾರೆ.

ಸರಣಿ ಗೆಲ್ಲುವತ್ತ ಎಲ್ಲರ ದೃಷ್ಟಿ 

ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಹೀಗಿರುವಾಗ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾದ ಕಣ್ಣು ಸರಣಿ ಗೆಲ್ಲುವತ್ತ ನೆಟ್ಟಿದೆ. ಭಾರತವು ಅನೇಕ ಮ್ಯಾಚ್ ವಿನ್ನರ್ ಆಟಗಾರರನ್ನು ಹೊಂದಿದೆ, ಅವರು ಸರಣಿಯನ್ನು ಗೆಲ್ಲಬಹುದು. ಈ ಆಟಗಾರರು ಕೆಲವೇ ಎಸೆತಗಳಲ್ಲಿ ಪಂದ್ಯದ ಹಾದಿಯನ್ನು ಬದಲಾಯಿಸುತ್ತಾರೆ. ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ವೆಸ್ಟ್ ಇಂಡೀಸ್ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ.

ಇದನ್ನೂ ಓದಿ : ICC T20 Ranking : ಐಸಿಸಿ ಟಿ20 ರ‍್ಯಾಕಿಂಗ್ ನಲ್ಲಿ ಭಾರತದ ಭರ್ಜರಿ ಬ್ಯಾಟ್ಸ್‌ಮನ್ ಗೆ ಸ್ಥಾನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News