ರಿಷಬ್ ಪಂತ್ ನಿಷೇಧ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್’ಗೆ ನೂತನ ನಾಯಕ ನೇಮಕ: ಅಕ್ಷರ್ ಪಟೇಲ್’ಗೆ ಹೊಸ ಜವಾಬ್ದಾರಿ

Delhi Capitals Captain Axar Patel: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್’ನಿಂದಾಗಿ ಪಂತ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಂದಹಾಗೆ ಡೆಲ್ಲಿ ಪ್ಲೇಆಫ್ ತಲುಪುವ ಭರವಸೆ ಜೀವಂತವಾಗಿರಬೇಕಾದರೆ RCB ವಿರುದ್ಧ ಗೆಲ್ಲಲೇಬೇಕು.

Written by - Bhavishya Shetty | Last Updated : May 11, 2024, 09:26 PM IST
    • ನಿಧಾನಗತಿಯ ಓವರ್ ರೇಟ್’ನಿಂದಾಗಿ ಪಂತ್ ವಿರುದ್ಧ ಕ್ರಮ
    • ರಿಷಬ್ ಪಂತ್ ಅವರನ್ನು ಐಪಿಎಲ್ ಅಪೆಕ್ಸ್ ಕೌನ್ಸಿಲ್ ಒಂದು ಪಂದ್ಯಕ್ಕೆ ಅಮಾನತುಗೊಳಿಸಿದೆ
    • ಡೆಲ್ಲಿ ಕ್ಯಾಪಿಟಲ್ಸ್’ಗೆ ಅಕ್ಷರ್ ಪಟೇಲ್ ನೂತನ ನಾಯಕ
ರಿಷಬ್ ಪಂತ್ ನಿಷೇಧ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್’ಗೆ ನೂತನ ನಾಯಕ ನೇಮಕ: ಅಕ್ಷರ್ ಪಟೇಲ್’ಗೆ ಹೊಸ ಜವಾಬ್ದಾರಿ title=
Axar Patel

Delhi Capitals Captain Axar Patel: ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ತಂಡದ ನಾಯಕ ರಿಷಬ್ ಪಂತ್ ಅವರನ್ನು ಐಪಿಎಲ್ ಅಪೆಕ್ಸ್ ಕೌನ್ಸಿಲ್ ಒಂದು ಪಂದ್ಯಕ್ಕೆ ಅಮಾನತುಗೊಳಿಸಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್’ನಿಂದಾಗಿ ಪಂತ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಂದಹಾಗೆ ಡೆಲ್ಲಿ ಪ್ಲೇಆಫ್ ತಲುಪುವ ಭರವಸೆ ಜೀವಂತವಾಗಿರಬೇಕಾದರೆ RCB ವಿರುದ್ಧ ಗೆಲ್ಲಲೇಬೇಕು.

ಇದನ್ನೂ ಓದಿ: ಪಿಸ್ತಾ ತಿನ್ನುವ ಮುನ್ನ ಎಚ್ಚರ! ಒಳ್ಳೆಯದು ಎಂದು ಅತಿಯಾಗಿ ತಿಂದರೆ ಬಾಧಿಸುತ್ತೆ ಈ ಮಾರಕ ಕಾಯಿಲೆ

ನಿಧಾನಗತಿಯ ಓವರ್ ರೇಟ್’ನಿಂದಾಗಿ ಪಂತ್ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು, ಮಾರ್ಚ್ 31 ರಂದು ಚೆನ್ನೈ ಮತ್ತು ಏಪ್ರಿಲ್ 3 ರಂದು ಕೋಲ್ಕತ್ತಾ ವಿರುದ್ಧದ ಪಂದ್ಯಗಳಲ್ಲಿ ನಿಧಾನಗತಿಯ ಓವರಿಗಾಗಿ ದಂಡ ವಿಧಿಸಲಾಗಿತ್ತು. ಆದರೆ, ರಾಜಸ್ಥಾನ ವಿರುದ್ಧ ಮೇ 7 ರಂದು ನಡೆದ ಪಂದ್ಯದಲ್ಲಿ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದ ಪಂತ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಮುಖದ ಮೇಲೆ ಹೀಗೊಂದು ಸಂಕೇತ ಕಂಡರೆ ನಿಮ್ಮ ಲಿವರ್ ಡ್ಯಾಮೇಜ್ ಆಗಿದೆ ಎಂದರ್ಥ! ಕೂಡಲೇ ಎಚ್ಚರ ವಹಿಸಿ

ಪಂತ್ ಅನುಪಸ್ಥಿತಿಯಲ್ಲಿ, ಆಲ್’ರೌಂಡರ್ ಅಕ್ಷರ್ ಪಟೇಲ್ RCB ವಿರುದ್ಧದ ಪಂದ್ಯದಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪಂದ್ಯದ ಮೊದಲು, ದೆಹಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮಾತನಾಡಿ, ಕಳೆದ ಕೆಲವು ಋತುಗಳಲ್ಲಿ ಅಕ್ಷರ್ ಪಟೇಲ್ ತಂಡದ ಉಪನಾಯಕರಾಗಿದ್ದಾರೆ. ಐಪಿಎಲ್‌’ನಲ್ಲಿ ಆಡಿದ ಅನುಭವ ಅವರಿಗಿದೆ. ಇದಲ್ಲದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಪಂತ್ ಅವರನ್ನು ಅಮಾನತುಗೊಳಿಸುವ ಸಾಧ್ಯತೆ ಇದ್ದಾಗ, ಅವರ ಅನುಪಸ್ಥಿತಿಯಲ್ಲಿ ನಾವು ನಾಯಕತ್ವದ ಬಗ್ಗೆ ಚರ್ಚಿಸಿದ್ದೇವೆ. ಇದಕ್ಕೆ ಅಕ್ಷರ್ ಸೂಕ್ತವೆನಿಸಿತು” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News