ತಮ್ಮವರಿಂದಲೇ 25 ಡಾಲರ್ ಪಡೆದು ಅಭಿಮಾನಿಗಳಿಗೆ ಔತಣಕೂಟ ಆಯೋಜನೆ: PCB ಕೃತ್ಯಕ್ಕೆ ಮಾಜಿ ನಾಯಕ ಕಿಡಿ

T20 World Cup 2024 Pakistan Team: ಪಿಸಿಬಿ ಪಾಕಿಸ್ತಾನಿ ತಂಡಕ್ಕಾಗಿ ಖಾಸಗಿ ಔತಣಕೂಟವನ್ನು ಆಯೋಜಿಸಿತ್ತು. ಇದರಲ್ಲಿ ಅಭಿಮಾನಿಗಳಿಗೆ ಆಟಗಾರರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದು ಉಚಿತವಾಗಿರಲಿಲ್ಲ. ಪ್ರವೇಶಕ್ಕಾಗಿ ಅಭಿಮಾನಿಗಳು ಹಣ ನೀಡಬೇಕಾಗಿತ್ತು.

Written by - Bhavishya Shetty | Last Updated : Jun 5, 2024, 08:41 PM IST
    • ಬಾಬರ್ ಅಜಂ ನಾಯಕತ್ವದಲ್ಲಿ ತಂಡ ಅಮೆರಿಕದಲ್ಲಿದೆ
    • ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ
    • ಪಿಸಿಬಿ ಪಾಕಿಸ್ತಾನಿ ತಂಡಕ್ಕಾಗಿ ಖಾಸಗಿ ಔತಣಕೂಟವನ್ನು ಆಯೋಜಿಸಿತ್ತು
ತಮ್ಮವರಿಂದಲೇ 25 ಡಾಲರ್ ಪಡೆದು ಅಭಿಮಾನಿಗಳಿಗೆ ಔತಣಕೂಟ ಆಯೋಜನೆ: PCB ಕೃತ್ಯಕ್ಕೆ ಮಾಜಿ ನಾಯಕ ಕಿಡಿ title=
File Photo

T20 World Cup 2024 Pakistan Team: ಪಾಕಿಸ್ತಾನಿ ತಂಡವು ಯಾವಾಗಲೂ ಯಾವುದೋ ಕಾರಣಕ್ಕಾಗಿ ವಿವಾದಗಳಲ್ಲಿರುತ್ತದೆ. ಸದ್ಯ ಬಾಬರ್ ಅಜಂ ನಾಯಕತ್ವದಲ್ಲಿ ತಂಡ ಅಮೆರಿಕದಲ್ಲಿದೆ. ಜೂನ್ 6ರಂದು ಡಲ್ಲಾಸ್‌’ನಲ್ಲಿ ಅಮೆರಿಕ ವಿರುದ್ಧ ಮೊದಲ ಪಂದ್ಯ ಆಡಬೇಕಿದೆ. ಅದಕ್ಕೂ ಮುನ್ನ ಪಾಕಿಸ್ತಾನ ತಂಡ ವಿವಾದಕ್ಕೆ ಸಿಲುಕಿದ್ದು, ತಮ್ಮದೇ ದೇಶದಲ್ಲಿ  ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ,

ಇದನ್ನೂ ಓದಿ: ವಿಮಾನ ಹಾರಾಡಲು ಬಳಸುವ ಇಂಧನ ಯಾವುದು ಗೊತ್ತಾ? ಒಂದು ಲೀ.ನಲ್ಲಿ ಎಷ್ಟು ದೂರ ಚಲಿಸುತ್ತೆ? ಇದರ ಮೈಲೇಜ್ ತಿಳಿದರೆ ಶಾಕ್ ಆಗೋದು ಪಕ್ಕಾ

ಪಿಸಿಬಿ ಪಾಕಿಸ್ತಾನಿ ತಂಡಕ್ಕಾಗಿ ಖಾಸಗಿ ಔತಣಕೂಟವನ್ನು ಆಯೋಜಿಸಿತ್ತು. ಇದರಲ್ಲಿ ಅಭಿಮಾನಿಗಳಿಗೆ ಆಟಗಾರರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದು ಉಚಿತವಾಗಿರಲಿಲ್ಲ. ಪ್ರವೇಶಕ್ಕಾಗಿ ಅಭಿಮಾನಿಗಳು ಹಣ ನೀಡಬೇಕಾಗಿತ್ತು. ಪಾಕಿಸ್ತಾನಿ ಆಟಗಾರರನ್ನು ಭೇಟಿ ಮಾಡಲು ಪಿಸಿಬಿ ಅಭಿಮಾನಿಗಳಿಂದ 25 ಡಾಲರ್ (2085 ಭಾರತೀಯ ರೂಪಾಯಿ) ತೆಗೆದುಕೊಂಡಿದೆ. ಪಾಕಿಸ್ತಾನದಲ್ಲಿ 6,960 ರೂ. ಈ ವಿಷಯವನ್ನು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.

"ಅಧಿಕೃತ ಔತಣಕೂಟಗಳಿವೆ, ಆದರೆ ಇದು ಖಾಸಗಿ ಭೋಜನ. ಯಾರು ಅದನ್ನು ಮಾಡುತ್ತಾರೆ? ಇದು ಶಾಕಿಂಗ್, ನಮ್ಮ ಆಟಗಾರರನ್ನು ಭೇಟಿ ಮಾಡಲು ನಮ್ಮವರಿಂದಲೇ 25 ಡಾಲರ್ ಪಡೆದಿದ್ದೀರಿ" ಎಂದು ಲತೀಫ್ ವೀಡಿಯೊದಲ್ಲಿ ಹೇಳಿದರು

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆಯುಳ್ಳವರು ತೆಂಗಿನೆಣ್ಣೆಯನ್ನು ತಪ್ಪಿಯೂ ಬಳಸಬಾರದು!

“ಚಾರಿಟಿ ಡಿನ್ನರ್ ಅನ್ನು ಆಯೋಜಿಸುವ ಕಲ್ಪನೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಶುಲ್ಕದೊಂದಿಗೆ ಖಾಸಗಿ ಭೋಜನವು ತಿಳುವಳಿಕೆಯನ್ನು ಮೀರಿದೆ. 25 ಡಾಲರ್ ಮೊತ್ತವನ್ನು ಈ ರೀತಿಯಲ್ಲಿ ಬಹಿರಂಗವಾಗಿ ಬಳಸಬಾರದು. ಫಂಡ್ ಸಂಗ್ರಹಣೆ ಅಥವಾ ಚಾರಿಟಿ ಡಿನ್ನರ್ ಅಲ್ಲ. ಇದು ಖಾಸಗಿ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನ ಮತ್ತು ಪಾಕಿಸ್ತಾನ ಕ್ರಿಕೆಟ್‌ನ ಹೆಸರು ಸಂಬಂಧಿಸಿದೆ. ಈ ತಪ್ಪನ್ನು ಮಾಡಬೇಡಿ" ಎಂದು ಆಕ್ರೋಶ ಹೊರಹಾಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News