RCB ಪರ ಆಡೋಕೆ ಇಷ್ಟವಿರಲಿಲ್ಲ.. ಆದರೆ ಈತ ಬೆದರಿಕೆ ಹಾಕಿ ಆಡಿಸಿದ! ಭಾರತದ ಸ್ಟಾರ್ ಬಲಗೈ ಬೌಲರ್ ಹೇಳಿಕೆ

Praveen kumar on RCB: ಐಪಿಎಲ್ ಮೊದಲ ಸೀಸನ್‌’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲು ಇಚ್ಛಿಸಿರಲಿಲ್ಲವಂತೆ. ಬದಲಾಗಿ ತನ್ನ ತವರು ನೆಲೆ ಮೀರತ್’ಗೆ ಸಮೀಪ ಇರುವ ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್‌ ಡೆವಿಲ್ಸ್) ತನ್ನ ಮೊದಲ ಆಯ್ಕೆಯಾಗಿತ್ತು ಎಂದು ಹೇಳಿದ್ದಾರೆ.

Written by - Bhavishya Shetty | Last Updated : Jan 9, 2024, 03:36 PM IST
    • ಭಾರತದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್
    • ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲು ಇಚ್ಛಿಸಿರಲಿಲ್ಲವಂತೆ
    • ಆರ್‌’ಸಿಬಿ ಅಧಿಕಾರಿಯೊಬ್ಬರು ಪೇಪರ್‌’ಗೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದ ಘಟನೆ
RCB ಪರ ಆಡೋಕೆ ಇಷ್ಟವಿರಲಿಲ್ಲ.. ಆದರೆ ಈತ ಬೆದರಿಕೆ ಹಾಕಿ ಆಡಿಸಿದ! ಭಾರತದ ಸ್ಟಾರ್ ಬಲಗೈ ಬೌಲರ್ ಹೇಳಿಕೆ  title=
Praveen kumar on RCB

Praveen Kumar on Lalit Modi and RCB: ಭಾರತದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್, 2008ರಲ್ಲಿ ಐಪಿಎಲ್ ಮೊದಲ ಸೀಸನ್‌’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲು ಇಚ್ಛಿಸಿರಲಿಲ್ಲವಂತೆ. ಬದಲಾಗಿ ತನ್ನ ತವರು ನೆಲೆ ಮೀರತ್’ಗೆ ಸಮೀಪ ಇರುವ ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್‌ ಡೆವಿಲ್ಸ್) ತನ್ನ ಮೊದಲ ಆಯ್ಕೆಯಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೆಡೆಕ್ಸ್ ಕೊರಿಯರ್'ನಲ್ಲಿ ಅಕ್ರಮ ವಸ್ತುಗಳಿವೆ ಎಂದು ಬೆದರಿಸಿ ವಂಚನೆ: 14 ಮಂದಿ ಬಂಧಿಸಿದ ವಿಶೇಷ ತನಿಖಾ ತಂಡ   

ಆದರೆ ಋತುವಿನ ಆರಂಭಕ್ಕೂ ಮುನ್ನ ಆರ್‌’ಸಿಬಿ ಅಧಿಕಾರಿಯೊಬ್ಬರು ಪೇಪರ್‌’ಗೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದ ಘಟನೆಯನ್ನು ಪ್ರವೀಣ್ ನೆನಪಿಸಿಕೊಂಡಿದ್ದಾರೆ.

37 ವರ್ಷದ ಭಾರತೀಯ ಕ್ರಿಕೆಟಿಗ ಪ್ರವೀಣ್ ಮಾತನಾಡಿ, “ಸಹಿ ಮಾಡುವಾಗ, ನಾನು ಐಪಿಎಲ್ ತಂಡದ ಒಪ್ಪಂದದ ಕಾಗದಕ್ಕೆ ಸಹಿ ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. RCB ಪರ ಆಡಲು ನಿರಾಕರಿಸಿದಾಗ, ಲಲಿತ್ ಮೋದಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದರು” ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Pushpa 2: ಪುಷ್ಪ 2 ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಿರೋ ಸ್ಟಾರ್‌ ನಟಿ ಯಾರು ಗೊತ್ತಾ? 

“ಬೆಂಗಳೂರು ನನ್ನ ಮನೆಯಿಂದ ತುಂಬಾ ದೂರದಲ್ಲಿರುವುದರಿಂದ, ನನಗೆ ಇಂಗ್ಲಿಷ್ ಗೊತ್ತಿಲ್ಲದ ಕಾರಣ ಮತ್ತು ಆಹಾರವೂ ನನಗೆ ಇಷ್ಟವಾಗದ ಕಾರಣ ನಾನು RCB ಗಾಗಿ ಆಡಲು ಬಯಸಲಿಲ್ಲ. ದೆಹಲಿಯು ಮೀರತ್‌’ಗೆ ತುಂಬಾ ಹತ್ತಿರದಲ್ಲಿದೆ, ಇದರಿಂದಾಗಿ ನನ್ನ ಮನೆಗೆ ಸಾಂದರ್ಭಿಕವಾಗಿ ಭೇಟಿ ನೀಡುವ ಅವಕಾಶ ಸಿಕ್ಕಿತು. ಆದರೆ, ಒಬ್ಬ ವ್ಯಕ್ತಿ ನನ್ನನ್ನು ಕಾಗದಕ್ಕೆ ಸಹಿ ಮಾಡುವಂತೆ ಮಾಡಿದನು. ಇದು ಒಪ್ಪಂದ ಎಂದು ನನಗೆ ತಿಳಿದಿರಲಿಲ್ಲ. ನಾನು ದೆಹಲಿಗೆ ಆಡಲು ಬಯಸುತ್ತೇನೆ ಮತ್ತು ಬೆಂಗಳೂರಿಗೆ ಅಲ್ಲ ಎಂದು ಹೇಳಿದ್ದೆ. ಆದರೆ ಲಲಿತ್ ಮೋದಿ ನನಗೆ ಕರೆ ಮಾಡಿ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದರು” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News