ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊಹಮ್ಮದ್ ಸಿರಾಜ್ ಅಧಿಕಾರ ಸ್ವೀಕಾರ... ಕೇವಲ 12 ತರಗತಿ ಓದಿರುವ ಟೀಂ ಇಂಡಿಯಾ ವೇಗಿಗೆ ಈ ಉನ್ನತ ಹುದ್ದೆ ಸಿಕ್ಕಿದ್ದೇಗೆ?

DSP Mohammad Siraj: ಇತ್ತೀಚೆಗೆಯಷ್ಟೇ ಬಾರ್ಬಡೋಸ್‌ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಸಿರಾಜ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಸಿಎಂ, ಸಿರಾಜ್‌ಗೆ ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದರು.  

Written by - Bhavishya Shetty | Last Updated : Oct 12, 2024, 07:39 PM IST
    • ಟೀಂ ಇಂಡಿಯಾ ವೇಗಿ ಸಿರಾಜ್ ತೆಲಂಗಾಣದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕೃತ ಅಧಿಕಾರ
    • ಟಿ20 ವಿಶ್ವಕಪ್ ಗೆದ್ದ ನಂತರ ಸಿರಾಜ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು
    • ಸಿರಾಜ್‌ಗೆ ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದ ಸಿಎಂ
ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊಹಮ್ಮದ್ ಸಿರಾಜ್ ಅಧಿಕಾರ ಸ್ವೀಕಾರ... ಕೇವಲ 12 ತರಗತಿ ಓದಿರುವ ಟೀಂ ಇಂಡಿಯಾ ವೇಗಿಗೆ ಈ ಉನ್ನತ ಹುದ್ದೆ ಸಿಕ್ಕಿದ್ದೇಗೆ?  title=
DSP Mohammad Siraj

Mohammad Siraj as Deputy Superintendent of Police: ಟೀಂ ಇಂಡಿಯಾ ವೇಗಿ ಸಿರಾಜ್ ಶನಿವಾರ ತೆಲಂಗಾಣದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೆಲಂಗಾಣ ಡಿಜಿಪಿ ಜಿತೇಂದರ್ ಮತ್ತು ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕಚೇರಿಯಲ್ಲಿ ಸಿರಾಜ್ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ: ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸುತ್ತೆ ಒಂದು ಸ್ಪೂನ್‌ ತುಪ್ಪ: ಇದರಲ್ಲಿ ಬೆರೆಸಿ ಕುಡಿದರೆ ಸಾಕು... ಡೊಳ್ಳುಹೊಟ್ಟೆಯೂ ಚಪ್ಪಟೆಯಾಗುತ್ತೆ!

ಇತ್ತೀಚೆಗೆಯಷ್ಟೇ ಬಾರ್ಬಡೋಸ್‌ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ ಸಿರಾಜ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಸಿಎಂ, ಸಿರಾಜ್‌ಗೆ ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದರು.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್ ಅವರನ್ನು ಸಿಎಂ ರೇವಂತ್ ರೆಡ್ಡಿ ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ರಾಜ್ಯ ವಿಧಾನಸಭೆಯ ಸಭೆಯಲ್ಲಿ ಸಿರಾಜ್ ಅವರ ಸಾಧನೆ ಮತ್ತು ಟೀಂ ಇಂಡಿಯಾ ವಿಶ್ವಕಪ್ ಗೆಲುವಿನಲ್ಲಿ ಅವರ ಪಾತ್ರವನ್ನು ಮುಖ್ಯಮಂತ್ರಿ ಎತ್ತಿ ಹಿಡಿದಿದ್ದರು.

ಇದನ್ನೂ ಓದಿ: ಈ ಎಣ್ಣೆ ಹಚ್ಚಿದ ಸೆಕೆಂಡುಗಳಲ್ಲಿ ಬಿಳಿಕೂದಲು ಬೇರಿನಿಂದಲೇ ಕಡುಕಪ್ಪಾಗುತ್ತೆ: ಒಮ್ಮೆ ಹಚ್ಚಿದ್ರೆ ಒಂದು ತಿಂಗಳವರೆಗೆ ಚಿಂತೆಯೇ ಇರಲ್ಲ... ಹಾಗೇ ಇರುತ್ತೆ

ಗ್ರೂಪ್-1 ಉದ್ಯೋಗಕ್ಕೆ ಸಿರಾಜ್ ಶೈಕ್ಷಣಿಕ ಅರ್ಹತೆಗಳನ್ನು ಪೂರೈಸದಿದ್ದರೂ, ಸರ್ಕಾರವು ಕ್ರೀಡಾ ಪಟುಗಳನ್ನು ಉತ್ತೇಜಿಸಲು ವಿನಾಯಿತಿ ನೀಡಿದೆ. ಗ್ರೂಪ್-1 ಉದ್ಯೋಗಕ್ಕೆ ಬೇಕಾದ ಶೈಕ್ಷಣಿಕ ವಿದ್ಯಾರ್ಹತೆ ಪದವಿಯಾಗಿದ್ದು, ಸಿರಾಜ್ ಇಂಟರ್ ಮೀಡಿಯೇಟ್ (12ನೇ) ಪಾಸಾಗಿದ್ದರೂ ಗ್ರೂಪ್-1 ಉದ್ಯೋಗ ಪಡೆಯಲು ವಿನಾಯಿತಿ ನೀಡಲಾಗಿದೆ ಎಂದು ಸಿಎಂ ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News