ಬೊಜ್ಜು ಹೆಚ್ಚಾಗಿದೆ ಅಂತಾ Team Indiaದಿಂದ ಹೊರಬಿದ್ದಿದ್ದ ಈ ಕ್ರಿಕೆಟಿಗನಿಗೆ ಕ್ಯಾಪ್ಟನ್ಸಿ: ಕೊನೆಗೂ ನನಸಾಯ್ತು ʼತ್ರಿಶತಕ ವೀರʼನ ಕನಸು

Sarfaraz Khan: ಆಗಸ್ಟ್ 27ರಿಂದ 30ರವರೆಗೆ ಕೊಯಮತ್ತೂರಿನಲ್ಲಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ​​ಇಲೆವೆನ್ ವಿರುದ್ಧ ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ.  

Written by - Bhavishya Shetty | Last Updated : Aug 10, 2024, 04:25 PM IST
    • ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ.
    • ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ
    • ಟೆಸ್ಟ್ ಸ್ಪೆಷಲಿಸ್ಟ್ ಸರ್ಫರಾಜ್ ಖಾನ್ ಮುಂಬೈ ತಂಡದ ನಾಯಕ
ಬೊಜ್ಜು ಹೆಚ್ಚಾಗಿದೆ ಅಂತಾ Team Indiaದಿಂದ ಹೊರಬಿದ್ದಿದ್ದ ಈ ಕ್ರಿಕೆಟಿಗನಿಗೆ ಕ್ಯಾಪ್ಟನ್ಸಿ: ಕೊನೆಗೂ ನನಸಾಯ್ತು ʼತ್ರಿಶತಕ ವೀರʼನ ಕನಸು  title=
File Photo

Sarfaraz Khan: ಭಾರತದ ಶ್ರೀಲಂಕಾ ಪ್ರವಾಸ ಕೊನೆಗೊಂಡಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಅವಮಾನಕರ ಸೋಲನ್ನು ಎದುರಿಸಬೇಕಾಯಿತು. ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಈ ವರ್ಷ ಮುಂಬರುವ ಬುಚಿ ಬಾಬು ಬಹುದಿನದ ಪಂದ್ಯಾವಳಿಯಲ್ಲಿ ಮುಂಬೈ ಪರ ಪಂದ್ಯ ಆಡುವುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಈ ಐವರು ವಿದೇಶಿ ಕ್ರಿಕೆಟಿಗರೆಂದರೆ ಭಾರತೀಯರ ಪಾಲಿಗೆ ವಿಲನ್‌ʼಗಳಿದ್ದಂತೆ! ಕಂಡರೆ ಉರಿದುಬೀಳ್ತಾರೆ

ಆಗಸ್ಟ್ 27ರಿಂದ 30ರವರೆಗೆ ಕೊಯಮತ್ತೂರಿನಲ್ಲಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ​​ಇಲೆವೆನ್ ವಿರುದ್ಧ ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ.

ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, “ಸೂರ್ಯಕುಮಾರ್ ಮುಂಬೈ ಪರ ಎರಡನೇ ಪಂದ್ಯ ಆಡಲಿದ್ದಾರೆ. ಅವರು ಭಾರತದ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಆದರೆ ಬಿಡುವಿರುವಾಗ ಮುಂಬೈ ತಂಡದ ಪರ ಲಭ್ಯವಿರುತ್ತಾರೆ. ರಣಜಿ ಟ್ರೋಫಿಯ ಹೊರತಾಗಿ, ಅವರು ತಂಡದ ಯುವಕರಿಗೆ ಸ್ಫೂರ್ತಿ ನೀಡಲು ಬುಚ್ಚಿ ಬಾಬು, ಕೆ ಎಸ್‌ ಸಿ ಎ (ಗೋಲ್ಡ್ ಕಪ್) ನಲ್ಲಿ ಆಡಲಿದ್ದಾರೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಸಮಯ: ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಶಾಕಿಂಗ್‌ ಹೇಳಿಕೆ

ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಸರ್ಫರಾಜ್ ಖಾನ್ ಅವರನ್ನು ಮುಂಬೈ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಒಂದು ಸಮಯದಲ್ಲಿ ಈ ಆಟಗಾರನಿಗೆ ಫಿಟ್ನೆಸ್‌ ಇಲ್ಲ, ಬೊಜ್ಜು ತುಂಬಿದೆ ಎಂದು ಟೀಂ ಇಂಡಿಯಾದಿಂದ ಹೊರಗಿಡಲಾಗಿತ್ತು. ಆದರೆ ಇದೀಗ ಈ ಆಟಗಾರನಿಗೆ ಮುಂಬೈ ತಂಡದ ನಾಯಕತ್ವ ನೀಡಲಾಗಿದೆ. ಅಷ್ಟೇ ಅಲ್ಲದೆ ಈತನ ನಾಯಕತ್ವದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News