“ಮಕ್ಕಳ ಜೊತೆ ಆಡಿದಂತಿತ್ತು”… ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡಿ ಶೋಯೆಬ್ ಅಖ್ತರ್ ಕಾಲೆಳೆದ ಸೆಹ್ವಾಗ್-ತೆಂಡೂಲ್ಕರ್

Sachin Tendulkar and Virendra Sehwag Tweet: ವಿಶ್ವಕಪ್‌’ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸತತ 8ನೇ ಜಯ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯವರೆಗೆ ಈ ಟೂರ್ನಿಯಲ್ಲಿ ಭಾರತ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ.

Written by - Bhavishya Shetty | Last Updated : Oct 15, 2023, 01:25 PM IST
    • ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸತತ 8ನೇ ಜಯ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ
    • ಗೆಲುವಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ವೀಟ್’ಗಳು ಮುಂದುವರೆದಿದೆ
    • ಶೋಯೆಬ್ ಅಖ್ತರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ವೀರೇಂದ್ರ ಸೆಹ್ವಾಗ್
“ಮಕ್ಕಳ ಜೊತೆ ಆಡಿದಂತಿತ್ತು”… ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡಿ ಶೋಯೆಬ್ ಅಖ್ತರ್ ಕಾಲೆಳೆದ ಸೆಹ್ವಾಗ್-ತೆಂಡೂಲ್ಕರ್ title=
Sachin Tendulkar and Virendra Sehwag Tweet

Sachin Tendulkar and Virendra Sehwag Tweet: ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್‌’ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ವಿಶ್ವಕಪ್‌’ನಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಸತತ 8ನೇ ಜಯ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯವರೆಗೆ ಈ ಟೂರ್ನಿಯಲ್ಲಿ ಭಾರತ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಪಾಕಿಸ್ತಾನಕ್ಕೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: 24 ವರ್ಷಗಳ ಇತಿಹಾಸವನ್ನೇ ಬದಲಾಯಿಸಿದ ‘ಭೂಮ್ ಭೂಮ್ ಬುಮ್ರಾ’! ಈ ದಾಖಲೆ ಬರೆದ 2ನೇ ಭಾರತೀಯ ಬೌಲರ್

ಇನ್ನು ಈ ಗೆಲುವಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ವೀಟ್’ಗಳು ಮುಂದುವರೆದಿದೆ. ಇದರ ಜೊತೆಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಕಾಲೆಳೆದಿದ್ದಾರೆ.  

ಶೋಯೆಬ್ ಅಖ್ತರ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ವೀರೇಂದ್ರ ಸೆಹ್ವಾಗ್, “ಬಹುಶಃ ಪಾಕಿಸ್ತಾನಿ ಬ್ಯಾಟ್ಸ್‌ಮನ್ಸ್ ಆದಷ್ಟು ಬೇಗ ಪೆವಿಲಿಯನ್‌’ಗೆ ಮರಳಲು ನಿರ್ಧರಿಸಿದ್ದಾರೆ. ಹ್ಹಹ್ಹಹ್ಹ.. ಯಾರೂ ಇಲ್ಲ ಶೋಯೆಬ್ ಭಾಯ್. ಪ್ರೇಮವಿರಲಿ, ಇಲ್ಲದಿರಲಿ, ಮಜಾ ಇರೋದು 8-0 ಸೋಲಿನಲ್ಲಿ!” ಎಂದು ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, “ಪಾಕಿಸ್ತಾನದ ಈ ಪ್ರದರ್ಶನ ನೋಡಿದರೆ ದೊಡ್ಡ ಮಕ್ಕಳು, ಶಾಲಾ ಮಕ್ಕಳೊಂದಿಗೆ ಆಟವಾಡುತ್ತಿರುವಂತೆ ಕಾಣುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: “ಬೇಬಿ ನಿನಗಾಗಿ 9 ದಿನ ನವರಾತ್ರಿ ಉಪವಾಸ ಮಾಡುತ್ತೇನೆ”: ಜಾಕ್ವೆಲಿನ್’ಗೆ ಬಂತು ಪ್ರೇಮಪತ್ರ

ಸಚಿನ್ ಟ್ವೀಟ್:

ಇನ್ನೊಂದೆಡೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಶೋಯೆಬ್ ಅಖ್ತರ್ ಮಾಡಿದ ಟ್ವೀಟ್‌’ಗೆ ಪ್ರತಿಕ್ರಿಯಿಸಿದ್ದಾರೆ.  “ನನ್ನ ಸ್ನೇಹಿತನೇ, ನಿಮ್ಮ ಸಲಹೆಯನ್ನು ಅನುಸರಿಸಿದ್ದಾರೆ ಮತ್ತು ಎಲ್ಲವೂ ಸರಾಗವಾಗಿರಿಸಿದೆ” ಎಂದು ಸಚಿನ್ ಬರೆದಿದ್ದಾರೆ. ಇದಕ್ಕೂ ಮೊದಲು ಅಖ್ತರ್ ಟ್ವೀಟ್ ಮಾಡಿ, “ನೀವು ನಾಳೆ ಇಂತಹದ್ದನ್ನೇ ಮಾಡಲು ಬಯಸಿದರೆ, ಶಾಂತವಾಗಿರಿ' ಎಂದು ಬರೆದ್ದರು. ಅದೇ ಟ್ವೀಟ್’ಗೆ ಸಚಿನ್ ಪಾಜಿ ಹೀಗೆ ಟ್ವೀಟ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News