“ನಾನು ಟೀಂ ಇಂಡಿಯಾದ ಈ ಆಟಗಾರನ ಫ್ಯಾನ್ ಆಗ್ಬಿಟ್ಟೆ”- ಪಾಕ್ ದಿಗ್ಗಜ ಶೋಯೆಬ್ ಅಖ್ತರ್ ಫಿದಾ ಆಗಿದ್ದು ಯಾರಿಗೆ?

Shoaib Akhtar Statement About Rohit Sharma: 2011 ರಲ್ಲಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೆ ಎದೆಗುಂದಿದ್ದರು ಕೈಯಲ್ಲಿದೆ. ಹಿಟ್‌ಮ್ಯಾನ್. ಆ ಸಮಯದಲ್ಲಿ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿತ್ತು. ಆದರೆ ಒಂದು ದಶಕದ ನಂತರ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

Written by - Bhavishya Shetty | Last Updated : Nov 16, 2023, 06:01 PM IST
    • 12 ವರ್ಷಗಳ ನಂತರ ವಿಶ್ವಕಪ್ ಫೈನಲ್‌’ಗೆ ಪ್ರವೇಶಿಸಿದ ಭಾರತ
    • ಕಾರಣದಿಂದ ಅನೇಕ ದಿಗ್ಗಜರು ರೋಹಿತ್ ಶರ್ಮಾ ಅವರನ್ನು ಕೊಂಡಾಡಿದ್ದಾರೆ.
    • ಅವರಲ್ಲಿ ಒಬ್ಬರು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್.
“ನಾನು ಟೀಂ ಇಂಡಿಯಾದ ಈ ಆಟಗಾರನ ಫ್ಯಾನ್ ಆಗ್ಬಿಟ್ಟೆ”- ಪಾಕ್ ದಿಗ್ಗಜ ಶೋಯೆಬ್ ಅಖ್ತರ್ ಫಿದಾ ಆಗಿದ್ದು ಯಾರಿಗೆ? title=
Shoaib Akhtar

ODI World Cup 2023: ಏಕದಿನ ವಿಶ್ವಕಪ್ ಸೆಮಿಫೈನಲ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅದ್ಭುತ ಗೆಲುವು ಸಾಧಿಸಿದೆ. ಈ ಗೆಲುವಿಗೆ ಜಗತ್ತಿನೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. 12 ವರ್ಷಗಳ ನಂತರ ವಿಶ್ವಕಪ್ ಫೈನಲ್‌’ಗೆ ಪ್ರವೇಶಿಸಿದ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ.

2011 ರಲ್ಲಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೆ ಎದೆಗುಂದಿದ್ದರು ಕೈಯಲ್ಲಿದೆ. ಹಿಟ್‌ಮ್ಯಾನ್. ಆ ಸಮಯದಲ್ಲಿ, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು ವಿಶ್ವಕಪ್ ಟ್ರೋಫಿ ಎತ್ತಿಹಿಡಿದಿತ್ತು. ಆದರೆ ಒಂದು ದಶಕದ ನಂತರ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವದಲ್ಲಿಯೇ ಭಾರತ ತಂಡ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ: ಮುಖ್ಯಾಂಶದಲ್ಲಿ ಕೊಹ್ಲಿ, ಶಮಿ ಇದ್ದರೂ… ಭಾರತ ತಂಡದ ನಿಜವಾದ ಹೀರೋ ಈತನೇ: ಇಂಗ್ಲೆಂಡ್ ಆಟಗಾರ

ಕಳೆದ ದಿನ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಅರ್ಧಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ತಂಡಕ್ಕೆ ಬಿರುಸಿನ ಆರಂಭವನ್ನು ನೀಡುವ ಮೂಲಕ ಇನ್ನಿಂಗ್ಸ್‌’ಗೆ ಅಡಿಪಾಯ ಹಾಕಿದರು. ಇದೇ ಕಾರಣದಿಂದ ಅನೇಕ ದಿಗ್ಗಜರು ರೋಹಿತ್ ಶರ್ಮಾ ಅವರನ್ನು ಕೊಂಡಾಡಿದ್ದಾರೆ. ಅವರಲ್ಲಿ ಒಬ್ಬರು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್.

ಶೋಯೆಬ್ ಅಖ್ತರ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ರೋಹಿತ್ ಶರ್ಮಾ, ಮಿಚೆಲ್ ಸ್ಯಾಂಟ್ನರ್ ಮತ್ತು ಟ್ರೆಂಟ್ ಬೌಲ್ಟ್ ವಿರುದ್ಧ ಅದ್ಭುತವಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ. “ಭಾರತವು ನ್ಯೂಜಿಲೆಂಡ್ ಅನ್ನು ಕೆಟ್ಟದಾಗಿ ಸೋಲಿಸಿದೆ. ಅದರಲ್ಲೂ ರೋಹಿತ್ ಶರ್ಮಾ ಅವರು, ಬೋಲ್ಟ್ ಮತ್ತು ಸ್ಯಾಂಟ್ನರ್‌ ವಿರುದ್ಧ ಸಖತ್ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಅವರು ಅರ್ಧಶತಕ ಸಿಡಿಸಿಲ್ಲ ಎಂಬುದೇ ನನಗೆ ಬೇಸರ. ಇದು ದೊಡ್ಡ ವಿಷಯವಲ್ಲ. ಆತ ಇನ್ನಷ್ಟೂ ಯಶಸ್ಸು ಕಾಣಲಿ” ಎಂದಿದ್ದಾರೆ.

"ನಾಯಕನಾಗಿ, ಆಟಗಾರನಾಗಿ ಮತ್ತು ಬ್ಯಾಟ್ಸ್‌ಮನ್ ಆಗಿ ಎಲ್ಲಾ ಕ್ರೆಡಿಟ್ ರೋಹಿತ್ ಶರ್ಮಾಗೆ ಸಲ್ಲುತ್ತದೆ. ಅಬ್ಬರದಿಂದ ಪ್ರದರ್ಶನವನ್ನು ಪ್ರಾರಂಭಿಸುತ್ತಾರೆ ,ತಮ್ಮ ಎದುರಾಳಿಗಳನ್ನು ಹೊಡೆದುರುಳಿಸುತ್ತಾರೆ. ರೋಹಿತ್ ಶರ್ಮಾ ಬ್ಯಾಟಿಂಗ್ ಮೂಲಕ ಎಲ್ಲಾ ಟೀಕೆಗಳನ್ನು ತೆಗೆದುಹಾಕಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: “ನಾನ್’ಸೆನ್ಸ್..ಇದೆಲ್ಲಾ ಮೂರ್ಖತನ”-ಭಾರತ ಫೈನಲ್ ಪ್ರವೇಶಿಸುತ್ತಿದ್ದಂತೆ ಗವಾಸ್ಕರ್ ಹೀಗಂದಿದ್ದೇಕೆ?

ಸಚಿನ್ ತೆಂಡೂಲ್ಕರ್ ಅವರ ಸುದೀರ್ಘ ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿಯನ್ನು ಸಹ ಅಖ್ತರ್ ಶ್ಲಾಘಿಸಿದರು. “ಕೊಹ್ಲಿ ತಮ್ಮ ಆರಾಧ್ಯ ದೈವದ ದಾಖಲೆಯನ್ನು ಮುರಿದಿರುವುದು ಸಂತಸ ತಂದಿದೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News